ಪ್ರಚಲಿತ

ಸೋಲಿನ ಭಯದಲ್ಲಿ ಹಳೆ ಪದ್ಧತಿಯೇ ಲೇಸೆಂದರು ಸಿದ್ದು…ಯುಪಿಎ ಜಾರಿಗೊಳಿಸಿದ ಇವಿಎಂಗೆ ಸಿದ್ದರಾಮಯ್ಯನಿಂದ ಅವಮಾನ ಹೇಗೆ ಗೊತ್ತೆ?!

ಕುಣಿಯಲು ಬಾರದವ ಅಂಗಳ ಡೊಂಕೆಂದನಂತೆ. ಹಂಗಾಗಿದೆ ಪರಿಸ್ಥಿತಿ. ಯಾಕೆಂದರೆ ಚುನಾವಣೆ ಗೆಲ್ಲಲಾಗದವರೆಲ್ಲಾ ಇಂದು ಇವಿಎಂ ಯಂತ್ರದಲ್ಲಿ ಮೋಸವಿದೆ ಎಂದು ಪುಕಾರು ಹಬ್ಬಿಸುತ್ತಿದ್ದಾರೆ. ಈ ರೀತಿ ಬೊಬ್ಬಿಡುವವರಿಗೆ ಖಂಡಿತಾ ನಾಚಿಗೆಯಾಗಬೇಕು. ಈ ಕಾಂಗ್ರೆಸ್ಸಿನವರದ್ದು ಇದೇ ಪ್ರಾಬ್ಲಮ್ ಯಾವಾಗ ಬಿಜೆಪಿ ಗೆಲುವಿನ ಹಂತದಲ್ಲಿದೆ ಎಂಬುವುದು ಕಾಂಗ್ರೆಸ್ಸಿನವರಿಗೆ ತಿಳಿಯುತ್ತದೋ ಆ ಸಮಯದಲ್ಲಿ ಮತ ಯಂತ್ರದಲ್ಲಿ ಸಮಸ್ಯೆಯಿದೆ ಎಂದು ಬೊಬ್ಬಿಡುತ್ತಾರೆ.. ಬಿಜೆಪಿಯು ಮತಯಂತ್ರದಲ್ಲಿ ಏನೋ ಗೇಮ್ ಪ್ಲಾನ್ ಮಾಡಿದೆ ಎಂಬ ಅಪವಾದವನ್ನು ಸುಖಾಸುಮ್ಮನೆ ಬಿಜೆಪಿಗೆ ಹೊರಿಸುತ್ತಾರೆ.

ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಹಳೆ ಪದ್ಧತಿ ಬಳಸುವುದು ಸೂಕ್ತ ಎಂದ ಸಿಎಂ ಸಿದ್ದರಾಮಯ್ಯನವರು ಇವಿಎಂಗೆ ಅವಮಾನ ಮಾಡಿರುವುದು ನಿಜಕ್ಕೂ ವಿಪರ್ಯಾಸ ಬಿಡಿ!!…ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಇವಿಎಂ (ವಿದ್ಯುನ್ಮಾನ ಮತಯಂತ್ರ) ಬದಲಿಗೆ ಮತಪತ್ರಗಳನ್ನೇ ಬಳಕೆ ಮಾಡಬೇಕೆಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ಇವಿಎಂ ಮತಯಂತ್ರಗಳ ಬಗ್ಗೆ ದೇಶಾದ್ಯಂತ ಸಂಶಯ ವ್ಯಕ್ತವಾಗುತ್ತಿದೆ ಹೀಗಾಗಿ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‍ಗಳನ್ನೇ ಬಳಸಿದರೆ ಒಳ್ಳೆಯದು’ ಎಂದಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದೇ ಅರ್ಥವಾಗುತ್ತಿಲ್ಲ… ಇವಿಎಂ ಮತಯಂತ್ರದಲ್ಲಿ ಸಮಸ್ಯೆಯಿದೆ ಮತಪತ್ರವನ್ನು ಬಳಕೆ ಮಾಡುವುದು ಸೂಕ್ತ ಎನ್ನುವವರು ದೇಶವನ್ನು ಪ್ರಗತಿಯತ್ತ ತರುವಲ್ಲಿ ಇವರು ಶ್ರಮಿಸುವವರಲ್ಲ…ಸೋಲು ಕಾಂಗ್ರೆಸ್ಸಿಗೆ ಕಟ್ಟಿಟ್ಟ ಬುತ್ತಿ ಅವರಿಗೆ ತಿಳಿದಿದೆ ಅದಕ್ಕಾಗಿ ಈಗ ಇವಿಎಂನ ಹೊಸ ತಗಾದೆಯನ್ನು ತೆಗೆದಿದ್ದಾರೆ ಅಷ್ಟೆ..

ಇವಿಎಂ ತಿರುಚುವಿಕೆಗೆ ಅವಕಾಶ ಇಲ್ಲದಷ್ಟು ಸಮರ್ಥವಾಗಿದೆ. ಅದನ್ನು ತಯಾರಿಸಿದವರಿಗೂ ದುರುಪಯೋಗಮಾಡಲು ಅಕ್ರಮವಾಗಿ ವ್ಯತ್ಯಾಸ ಮಾಡಲು ಅಸಾಧ್ಯ. ಯಂತ್ರದ ನಿಖರ ನಿರ್ವಹಣೆ, ಶಕ್ತಿಯುತವಾದ ಋಜುತ್ವವನ್ನು ಯಾರಿಂದಲೂ ಬದಲಿಸಲಾಗದು. ಇದನ್ನು ಹ್ಯಾಕ್ ಮಾಡಲೂ ಸಾಧ್ಯವಿಲ್ಲ. ಅದರ ತಾಂತ್ರಿಕತೆ ಸುರಕ್ಷತೆಯನ್ನು ಕಾಯ್ದಿರಿಸಿದೆ. ಟ್ಯಾಂಪರ್ ಡಿಟೆಕ್ಷನ್ ಸೇರ್ಪಡೆ ಮಾಡಲಾಗಿದ್ದು, ಯಾವನಾದರೂ ಅದನ್ನು ತೆರೆಯಲೆತ್ನಿಸಿದರೆ ಅದು ತಕ್ಷಣ ಕಾರ್ಯಗತಗೊಳಿಸುತ್ತದೆ. ಆದರೆ ಅದನ್ನು ತಿರುಚಲು ಸಾಧ್ಯವೇ ಇಲ್ಲ. ಅಲ್ಲದೆ ಇದನ್ನು ಭಾರತದಲ್ಲೇ ರೂಪಿಸಲಾಗಿದ್ದು, ಅದರಲ್ಲಿನ ಫಂಕ್ಷನ್‍ಗೆ ದೇಶೀಯವಾದ ಬರಹ ಬಳಸಲಾಗಿದೆ. ಅದರ ತಂತ್ರಾಂಶ ಯಾವ ರೀತಿ ಎಂದು ಯಾರಿಂದಲೂ ಪತ್ತೆಹಚ್ಚಲು ಸಾಧ್ಯವಿಲ್ಲ. ಇಷ್ಟೆಲ್ಲಾ ಸಮರ್ಥನೆಯನ್ನು ಚುನಾವಣಾ ಆಯೋಗ ಕೊಡುತ್ತಿದ್ದರೂ ಪುಕಾರು ಹಬ್ಬಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಅವರಿಗೇ ನಷ್ಟ ಎನ್ನುವುದು ಅರ್ಥವಾಗುವುದಿಲ್ಲ. ಇವಿಎಂನ್ನು ದೂಷಣೆ ಮಾಡುವ ಬದಲು ನಿಮ್ಮ ಪಕ್ಷದವರಿಗೆ ಸ್ವಲ್ಪ ಬುದ್ಧಿ ಹೇಳಿ ಸಿಎಂ ಸಾಹೇಬರೇ….
ಗೆದ್ರೆ ಇವಿಎಂ ಸರಿಯಾಗಿದೆ ಸೋತರೆ ಇವಿಎಂ ಪ್ರಾಬ್ಲಮ್!

ಮೊನ್ನೆ ಗುಜರಾತ್ ಮತದಾನದಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಮತ ಯಂತ್ರ ದೋಷ ಪೂರಿತವಾಗಿದೆ… ಎಲ್ಲಾ ಮತಗಳು ಬಿಜೆಪಿಗೆ ಮಾತ್ರ ಹೋಗುವಂತೆ ಮಾಡಿದೆ.. ಮೊಬೈಲ್ ಫೆÇೀನಿನ ಮೂಲಕ ಬ್ಲೂಟುತ್ ಚಾಲೂ ಮಾಡಿದಾಗ ಎಲ್ಲಾ ಮತಗಳು ಬಿಜೆಪಿಗೆ ಹೋಗುತ್ತದೆ ಎಂದು ದೂರಿದ್ದರು… ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿರುವ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಕೃಷ್ಣಮೂರ್ತಿ ಯಂತ್ರಗಳು ತಪ್ಪು ಮಾಡುವುದಿಲ್ಲ ಮನುಷ್ಯರು ಮಾಡುತ್ತಾರೆ ಎಂದು ಹೇಳಿದ್ದರು. ಇವಿಎಂ ವ್ಯವಸ್ಥೆ ಜಾರಿಗೆ ಬಂದ ನಂತರದ ಇತಿಹಾಸ ಗಮನಿಸಿದಾಗ ಸದಾ ಸೋತಿರುವ ಪಕ್ಷಗಳು ಮಾತ್ರ ಇವಿಯಂ ವಿಶ್ವಾಸರ್ಹತೆಯ ಕುರಿತು ದೂರುತ್ತಿವೆ…ಸಣ್ಣ ಮನಸ್ಸಿನ ಈ ಕಾಂಗ್ರೆಸ್ಸಿನವರು ಯಾವಾಗಲೂ ಕೆಟ್ಟದ್ದನ್ನೇ ಯೋಚನೆ ಮಾಡುತ್ತಾ ಬಂದರೆ ನಿಮಗೆ ಸೋಲು ಎನ್ನುವುದು ಕಟ್ಟಿಟ್ಟ ಬುತ್ತಿ ಬಿಡಿ!.. ಒಂದು ವೇಳೆ ಕಾಂಗ್ರೆಸ್ ಏನಾದರೂ ಚುನಾವಣೆಯಲ್ಲಿ ಗೆದ್ದು ಬಂದರೆ ಇವಿಎಂ ಸರಿಯಾಗಿ ಎನ್ನುವ ಖದೀಮರು ಇವರು…

ಕಾಂಗ್ರೆಸ್ ಸೋತರೆ ಅದು ಇವಿಯಂನಿಂದಲ್ಲ ರಾಹುಲ್‍ಗಾಂಧಿಯಿಂದ..

ಇವಿಯಂನಲ್ಲಿ ಕೊರತೆ ಇರುವುದರಿಂದ ನಾವು ಸೋತೆವೆ ಎನ್ನುವ ಮುಟ್ಟಾಳತನದ ಮಾತು ಆಡುವ ಕಾಂಗ್ರೆಸ್‍ಗೆ ಒಂದು ಕಿವಿ ಮಾತು… ಕಾಂಗ್ರೆಸ್ ಸೋತರೆ ಅದು ಇವಿಯಂ ನಿಂದಲ್ಲ ಬದಲಾಗಿ ನಿಮ್ಮ ಹಾಟ್ ಫೆವರೆಟ್ ರಾಹುಲ್ ಗಾಂಧಿಯಿಂದ.. ಯಾಕೆಂದರೆ ಹೋದ ಬಂದಲ್ಲಿ ಒಂದೊಂದೆ ಎಡವಟ್ಟು ಮಾಡಿಕೊಂಡು ಬರುವ ಈತನನ್ನು ಯಾರಾದರೂ ಗೆಲ್ಲಿಸಲು ತಯಾರಿರುತ್ತಾರೆಯೇ? ಅದನ್ನು ಮೊದಲು ನಾವು ಯೋಚನೆ ಮಾಡಿಕೊಂಡು ಮತಯಂತ್ರವನ್ನು ದೂಷಿಸಬೇಕು..

ಇವಿಎಂಅನ್ನು ಬ್ಯಾನ್ ಮಾಡುವ ಬದಲು ನಿಮ್ಮ ಪಕ್ಷದ ಅಧ್ಯಕ್ಷನನ್ನು ಚೇಂಜ್ ಮಾಡಿ

ಪದೇ ಪದೇ ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣ ಎಂದು ಮುಟ್ಟಾಳತನದ ಮಾತು ಆಡುತ್ತಿರುವ ಇವರಿಗೆ ಮೊದಲು ಇವಿಯಂ ಬ್ಯಾನ್ ಮಾಡುವುದಕ್ಕಿಂತ ನಿಮ್ಮ ಪಕ್ಷದ ಅಧ್ಯಕ್ಷನನ್ನು ಚೇಂಚ್ ಮಾಡಿ ಆಗ ನಿಮ್ಮ ಪಕ್ಷ ಒಂದು ಮಟ್ಟಕ್ಕೆ ಗೆಲ್ಲಬಹುದು… ವಂಶ ಪಾರಂಪರ್ಯದ ರೀತಿಯಲ್ಲಿ ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಪರಿ ಎಲ್ಲಿಯಾದರೂ ಕೇಳಿದ್ದೀರೇ?
ಈತ ಒಬ್ಬ ರಾಹುಲ್ ಗಾಂಧಿ! ಇವನಿಗೆ ಸಣ್ಣ ಸಾಮಾನ್ಯ ಜ್ಞಾನವೂ ಈತನಿಗಿಲ್ಲ…ಅದು ಬೇರೆ ಇತ್ತೀಚಿಗೆ ಕಾಂಗ್ರೆಸ್ ಉಪಾಧ್ಯಕ್ಷ ಪಟ್ಟದಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬೇರೆ ಆಯ್ಕೆ ಆಗಿದ್ದರೆ ಇನ್ನು ನಿಮ್ಮ ಕಥೆ ಅಷ್ಟೆ!..ಈತ ಮಾಡಿದ ಅವಾಂತರ ಒಂದಾ ಎರಡಾ?… ನಾವು ಹೇಳಿದ ರೀತಿ ನೀವೇನಾದರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷನನ್ನು ಬದಲಾವಣೆ ಮಾಡಿದಲ್ಲಿ ಖಂಡಿತಾ ನಿಮಗೆ ಜಯ ಸಿಗಬಹುದು.

ಕೇವಲ ಈ ಬಾರಿ ಮಾತ್ರ ಮತ ಯಂತ್ರವನ್ನು ದೂರಿದ್ದಲ್ಲ! ಬದಲಾಗಿ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಹೀಗೆ ಹಲವಾರು ಪಕ್ಷಗಳು ಠೇವಣಿ ಕಳೆದುಕೊಳ್ಳುವಷ್ಟು ಸೋತುಬಿಟ್ಟವು. ಆದರೆ ಇದನ್ನೆಲ್ಲಾ ಒಪ್ಪಿಕೊಳ್ಳದ ಅವರು ಮಾತ್ರ ಇವಿಎಂ ನಲ್ಲಿ ದೋಷ ಅಂದುಬಿಟ್ಟರು. ಯಾವ ಬಟನ್ ಒತ್ತಿದರೂ ಬಿಜೆಪಿಗೇ ಮತ ಹೋಗುತ್ತಿತ್ತು ಎಂದುಬಿಟ್ಟರು. ಈಗ ಯಾರೆಲ್ಲಾ ಇವಿಎಂನಲ್ಲಿ ದೋಷ ಇದೆ ಎಂದು ಹೇಳುತ್ತಾರೋ ಈ ಪದ್ಧತಿಯನ್ನು ಜಾರಿಗೆ ತಂದವರ್ಯಾರು ಎಂದು ಅವರಿಗೆಲ್ಲಾ ಗೊತ್ತಿಲ್ಲ. ಯಾಕೆಂದರೆ ಈ ಪದ್ಧತಿಯನ್ನು ಕಾಂಗ್ರೆಸಿಗರೇ ಜಾರಿಗೆ ತಂದಿದ್ದಾರೆ. ಇದೀಗ ಅದರಲ್ಲಿಯೇ ದೋಷವಿದೆ ಎನ್ನುವವರೆಲ್ಲಾ ತನ್ನದೇ ಪಕ್ಷಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲ?

ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ಆಪ್ ಮುಖ್ಯಸ್ಥ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮುಂತಾದವರೆಲ್ಲಾ ಮತಯಂತ್ರದಲ್ಲಿನ ದೋಷವೇ ಬಿಜೆಪಿಯ ಗೆಲುವಿಗೆ ಕಾರಣ ಎಂದು ಆರೋಪಿಸಿದ್ದರು. ಆದರೆ ಕರ್ನಾಟಕದ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದಾಗ ಎಲ್ಲರ ಬಾಯಿಗೆ ಬೀಗ ಬಿದ್ದಿತ್ತು. ಆದರೆ ಇದೀಗ ಕಾಂಗ್ರೆಸ್ ಪಕ್ಷ ಮತ್ತೆ ಮಕಾಡೆ ಮಲಗಿದೆ. ಅದಕ್ಕಾಗಿ ಮತ್ತೆ ಪುಕಾರು ಹಬ್ಬಿಸುತ್ತಿದ್ದಾರೆ.

ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ದಲ್ಲಿನ ದೋಷವೇ ಬಿಜೆಪಿಯ ಗೆಲುವಿಗೆ ಕಾರಣವಾಗಿದೆ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳು ಬಿಜೆಪಿಯ ಪಾಲಾಗಿವೆ. ಅಷ್ಟಕ್ಕೂ ಇವಿಎಂನಲ್ಲಿ ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳಿಗೆ ಹಾಕಿದ ಮತಗಳು ಸಹ ಬಿಜೆಪಿ ಪಾಲಾಗಿವೆ. ಇದರಿಂದಾಗಿ ಮತಯಂತ್ರದಲ್ಲಿ ದೋಷವಿರುವುದು ಖಚಿತವಾಗಿದೆ ಎಂದು ಮಾಯಾವತಿ ಆರೋಪಿಸಿದ್ದರು. ಇವಿಎಂನಲ್ಲಿ ಯಾರಿಗೆ ವೋಟು ಹಾಕಿದ್ರೂ ಅದು ಬಿಜೆಪಿಗೆ ಹೋಗುತ್ತದೆ ಎಂದು ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಆರೋಪಿಸಿತ್ತು. ಕಾಂಗ್ರೆಸ್ ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದರು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‍ಸಿಪಿ ಸೇರಿದಂತೆ ಇತರೆ ಎಡಪಕ್ಷಗಳು ಕಳೆದ ಫೆಬ್ರವರಿಯಲ್ಲಿ ನಡೆದ ಪಂಚರಾಜ್ಯ ಚುನಾವಣೆ ವೇಳೆ ಮತಯಂತ್ರಗಳು ದೋಷದಿಂದ ಕೂಡಿದ್ದವು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು. ಆದರೆ ದೋಷ ಪತ್ತೆ ಹಚ್ಚಿ ಎಂದು ಸವಾಲು ಹಾಕಿದಾಗ ಇವರೆಲ್ಲಾ ನಾಪತ್ತೆಯಾಗಿದ್ದು ಯಾಕೆ?

ಸಿಎಂ ಸಿದ್ದರಾಮಯ್ಯನವರೇ ನೀವು ಎಷ್ಟೇ ಬೊಬ್ಬೆ ಹಾಕಿದರೂ ನಿಮಗೆ ಸೋಲು ಕಟ್ಟಿಟ್ಟ ಬುತ್ತಿ ಬಿಡಿ!!… ನೀವು ಇವಿಎಂ ಮಿಷಿನ್ ಬಿಡಿ ತಿಪ್ಪರ್‍ಲಾಗ ಹಾಕಿದರೂ ನಿಮಗೆ ನಾವು ಓಟು ಹಾಕಲ್ಲ……

-ಪವಿತ್ರ

Tags

Related Articles

Close