ಪ್ರಚಲಿತ

ಬಿಗ್ ಶಾಕ್! ರಂಜಾನ್ ತಿಂಗಳಲ್ಲೇ ಮೋದಿ ಹತ್ಯೆಗೆ ದಿನಾಂಕ ಫಿಕ್ಸ್..! ಕಾಂಗ್ರೆಸ್ ಮನವಿಯೇ ಮೋದಿ ಹತ್ಯೆಗೆ ಕಾರಣವಾಯ್ತಾ? ಆದರೆ ಇದು ನಕ್ಸಲರಿಂದಲ್ಲ!!

ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಒಂದಲ್ಲಾ ಒಂದು ಕಾರಣದಿಂದ ಮೂಲಭೂತವಾದಿ ಚಿಂತನೆಯುಳ್ಳ ವ್ಯಕ್ತಿಗಳಿಗೆ ಹಿನ್ನೆಡೆಯಾಗುತ್ತಲೇ ಬಂದಿರುತ್ತದೆ. ದೇಶದ ಭದ್ರ ವ್ಯವಸ್ಥೆ, ನೋಟ್ ಬ್ಯಾನ್ ಸಹಿತ ಅನೇಕ ಕಾರ್ಯಕ್ರಮಗಳು ದೇಶದೊಳಗೆ ಮಾಡುವ ಅನಾಚಾರಗಳಿಗೆ ಬ್ರೇಕ್ ಹಾಕುವಂತೆ ಮಾಡಿತ್ತು. ಇಂತಹಾ ಕಾರಣಗಳಿಗಾಗಿಯೇ ಪ್ರಧಾನಿ ಮೋದಿಯವರ ಹತ್ಯೆಗೆ ಉಗ್ರರು, ನಕ್ಸಲರು ಸಹಿತ ಮೂಲಭೂತವಾದಿಗಳು ಅಂದಿನಿಂದ ಇಂದಿನವರೆಗೂ ಯತ್ನಿಸುತ್ತಲೇ ಇದ್ದಾರೆ. ಇದೀಗ ಮತ್ತೆ…

ರಂಜಾನ್ ತಿಂಗಳಲ್ಲೇ ಮೋದಿಯನ್ನು ಮುಗಿಸಿ..!

ಕಾದು ಕಾದು ಸಾಕಾಯ್ತು. ಯಾವ ಬೇಳೆಯೂ ಬೇಯೋದಿಲ್ಲ ಎಂಬ ಸ್ಪಷ್ಟ ಮಾಹಿತಿ ಪಾಕ್ ಉಗ್ರ ಹಫೀಸ್ ಸಯೀದ್‍ಗೆ ಅರ್ಥವಾಗಿದೆ. ಹೀಗಾಗಿಯೇ ಇದೀಗ ಮೋದಿಯನ್ನು ಮುಗಿಸಲು ಸಂಚು ರೂಪಿಸಿದ್ದಾನೆ. ನಕ್ಸಲರು ಮೋದಿಯರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ, ಈ ಕೆಲಸಕ್ಕಾಗಿ ಅವರು ಮುಂಬೈ ಮೂಲದ ಹೋರಾಟಗಾರರಿಂದ ಹಣದ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬರುತ್ತಲೇ ಇಂತಹ ಒಂದು ಭಾಷಣ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮೋದಿಯವರನ್ನು ಸುಳಿಯಲೂ ಆಗದ ಭದ್ರತೆ ದೇಶದಲ್ಲಿದ್ದರೂ ಆತಂಕ ಅನ್ನೋದು ಆವರಿಸಿ ಬಿಟ್ಟಿದೆ.

ಪಾಪಿ ರಾಷ್ಟ್ರ ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ಅಂತರಾಷ್ಟ್ರೀಯ ಉಗ್ರ ಹಾಗೂ ಜಮಾತ್ ಉಲ್ ದವಾ ಸಂಘಟನೆಯ ಮುಖ್ಯಸ್ಥ ಹಫೀಸ್ ಸಯೀದ್ ಮೋದಿಯವರನ್ನು ಹತ್ಯೆ ಮಾಡುವ ಘೋಷಣೆಯನ್ನು ಮಾಡಿದ್ದಾನೆ. ರಂಜಾನ್ ತಿಂಗಳಲ್ಲೇ ಪ್ರಧಾನಿ ಮೋದಿಯವರ ಹತ್ಯೆ ಮಾಡಬೇಕು ಎಂದು ಆದೇಶವನ್ನೂ ನೀಡಿದ್ದಾನೆ.

Image result for hafiz saeed

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಉಗ್ರ ಹಫೀಸ್ ಸಯೀದ್ ನೀಡಿರುವ ಕಾರಣ ಕೇಳಿದರೆ ಖಂಡಿತಾ ಬೆರಗಾಗಬಹುದು. “ಭಾರತದಲ್ಲಿ ಇದೀಗ ಮೋದಿ ಯುಗವಾಗಿದೆ. ಭಾರತದಲ್ಲಿ ನರೇಂದ್ರ ಮೋದಿಯವರು ಎಲ್ಲಿಯವರೆಗೆ ಪ್ರಧಾನ ಮಂತ್ರಿ ಆಗಿರ್ತಾರೋ ಅಲ್ಲಿಯವರೆಗೆ ನಮಗೆ ಜಿಹಾದ್ ನಡೆಸಲು ಅವಕಾಶ ಇರೋದಿಲ್ಲ. ಅಲ್ಲಿನ ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಸಾಧ್ಯವಿಲ್ಲ. ಹೀಗಾಗಿ ರಂಜಾನ್ ತಿಂಗಳಲ್ಲೇ ಪ್ರಧಾನಿ ಮೋದಿಯನ್ನು ಹತ್ಯೆ ಮಾಡಬೇಕು. ಮೋದಿಯನ್ನು ಹತ್ಯೆ ಮಾಡಿದರೆ ಮಾತ್ರ ಭಾರತವನ್ನು ಮಣಿಸಬಹುದು. ಈ ಹಿಂದೆ ಅಮೇರಿಕಾದಿಂದ ಪಾಕಿಸ್ಥಾನಕ್ಕೆ ಬರುತ್ತಿದ್ದ ಆರ್ಥಿಕ ನೆರವು ಮೋದಿ ಪ್ರಧಾನಿಯಾದ ನಂತರ ಕಡಿತಗೊಂಡಿದೆ. ಜಗತ್ತಿನ ರಾಷ್ಟ್ರಗಳ ಜೊತೆ ಮೋದಿಯ ಸ್ನೇಹವೇ ಈ ಬೆಳವಣಿಗೆಗೆ ಕಾರಣ. ಹೀಗಾಗಿ ನಮಗೆ ಜಿಹಾದಿ ನಡೆಸಲು ಹಣಕಾಸಿನ ಕೊರತೆ ಇದೆ. ಇದಕ್ಕಾಗಿ ಮೊದಲು ಭಾರತದ ಪ್ರಧಾನಿ ಮೋದಿಯನ್ನು ಹತ್ಯೆ ಮಾಡಬೇಕು” ಎಂದು ಬಹಿರಂಗವಾಗಿಯೇ ಘೋಷಣೆಯನ್ನು ಮಾಡಿದ್ದಾನೆ.

ಕಾಂಗ್ರೆಸ್ ಮನವಿಯೇ ಕಾರಣವಾಯ್ತಾ..?

ಭಾರತದಲ್ಲಿ ದುಶ್ಕೃತ್ಯಗಳನ್ನು ನಡೆಸಲು ಪಾಪಿ ರಾಷ್ಟ್ರ ಪಾಕಿಸ್ಥಾನಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವೇ ಕಾರಣವಾಯ್ತಾ ಎನ್ನುವ ಅಂತೆ ಕಂತೆಗಳೂ ಹರಿದಾಡುತ್ತಿವೆ. ಈ ಬಗ್ಗೆ ಸುದ್ಧಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಗೋ. ಮದುಸೂಧನ್ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ. “ಪ್ರಧಾನಿ ಮೋದಿಯವರ ಬಗ್ಗೆ ಈ ಉಗ್ರರು ಇಷ್ಟೊಂದು ರಾಜಾರೋಷವಾಗಿ ಮಾತನಾಡಲು ಭಾರತದ ಕಾಂಗ್ರೆಸ್ ಪಕ್ಷವೇ ಕಾರಣ. ಈ ಹಿಂದೆ ಕಾಂಗ್ರೆಸ್ ನಾಯಕರು ಪಾಕಿಸ್ಥಾನಕ್ಕೆ ತೆರಳಿ ನಮ್ಮ ಭಾರತದ ಪ್ರಧಾನಿ ಮೋದಿಯವರನ್ನು ಮುಗಿಸಿ ಬಿಡಿ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ತಾತ್ಸಾರದಿಂದಲೇ ಇಂದು ಅಲ್ಲಿನ ಉಗ್ರರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನೋಟ್ ಬ್ಯಾನ್, ಜಿಎಸ್‍ಟಿ, ಭದ್ರತಾ ವಿಚಾರದಲ್ಲಿ ಪ್ರಧಾನಿ ಮೋದಿ ಕಠಿಣ ನಿಲುವು ತಾಳಿದ ಕಾರಣ ಮೋದಿಯವರೆಂದರೆ ಕಾಂಗ್ರೆಸ್ ಪಕ್ಷಕ್ಕೂ ಹಾಗೂ ಪಾಕ್ ಉಗ್ರರಿಗೂ ಸಮಸ್ಯೆಯಾಗಿದೆ. ಹೀಗಾಗಿಯೇ ಇಂತಹಾ ಹತಾಶಾ ಮಾತುಗಳನ್ನು ಆಡುತ್ತಾರೆ” ಎಂದು ಹೇಳಿದ್ದಾರೆ.

ಒಟ್ಟಾರೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಸ್ ಸಯೀದ್‍ನ ಇಂತಹಾ ಹೇಳಿಕೆ ಇದೀಗ ಭಾರತದಲ್ಲಿ ಆತಂಕವನ್ನೇ ಹುಟ್ಟುಹಾಕಿದೆ. ಅತ್ತ ನಕ್ಸಲರು ಹತ್ಯೆ ಮಾಡಲು ಯತ್ನಿಸಿದ್ದರೆ ಇತ್ತ ಇಸ್ಲಾಂ ಉಗ್ರರು ಹತ್ಯೆಗೆ ಸ್ಕೆಚ್ ಹಾಕುತ್ತಿರುವುದು ಭಾರತದಲ್ಲಿ ಅಶಾಂತಿ ನಿರ್ಮಾಣವಾಗುವ ಸೂಚನೆ ನೀಡುತ್ತಿದೆ. ಇದಕ್ಕೆ ಕಾಂಗ್ರೆಸ್ ಕೂಡಾ ಕಾರಣ ಎಂಬ ಮಾಹಿತಿ ನಿಜಕ್ಕೂ ದೇಶವಾಸಿಗಳನ್ನು ಆತಂಕದೊಂದಿಗೆ ಆಕ್ರೋಶಕ್ಕೂ ದೂಡಿರುವುದು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close