ಪ್ರಚಲಿತ

ತಮಿಳುನಾಡಿನ ಶಿವಗಂಗಾ ಕ್ರೈಸ್ತ ಧರ್ಮ ಪ್ರಾಂತ್ಯದಲ್ಲಿ ವ್ಯಾಪಕವಾದ ಜಾತಿ ತಾರತಮ್ಯ “ದಲಿತ ಕ್ರೈಸ್ತರನ್ನು” ಅಸ್ಪೃಶ್ಯತೆಯಿಂದ ನೋಡಲಾಗುತ್ತಿರುವುದಾಗಿ ವರದಿ!!

ಇದೇನಿದು ಕರ್ಮ?! ಇಲ್ಲಿ ಸುಖವಿಲ್ಲವೆಂದು ಅಲ್ಲಿಗೆ ಹೋದರೆ ಅಲ್ಲೂ ಅದೇ ಕಥೆಯಾ? ಸನಾತನ ಧರ್ಮದಲ್ಲಿ ಹಿಂದೂಗಳಿಂದ “ಶೋಷಣೆ”ಗೊಳಗಾಗುತ್ತಿದ್ದೀರಾ, ಹಿಂದೂಗಳು ನಿಮ್ಮನ್ನು ಅಸ್ಪೃಶ್ಯರಂತೆ ನೋಡುತ್ತಾರೆ, ಬನ್ನಿ ನಮ್ಮಲ್ಲಿಗೆ ಬನ್ನಿ ನಿಮ್ಮನ್ನು “ಚೆನ್ನಾಗಿ” ನೋಡಿಕೊಳ್ಳುತ್ತೇವೆ ಎಂದು ಬೆಣ್ಣೆ ಹಚ್ಚಿ ತಮ್ಮ ಮತಕ್ಕೆ ಮತಾಂತರ ಮಾಡುವ ಮಿಷ”ನರಿ”ಗಳ ನಿಜ ರೂಪದ ಅನಾವರಣ ಆಗಿದೆ. “ದಲಿತ ಕ್ರೈಸ್ತರು” ಎನ್ನುವ ಈ ಒಂದೇ ಶಬ್ದ ಸಾಕು ಆ ಮತ ಇವರನ್ನು ಯಾವ ರೀತಿ ನೋಡಿಕೊಳ್ಳುತ್ತಿದ್ದೆ ಎನ್ನುವುದನ್ನು ಸಾಬೀತು ಪಡಿಸಲು. ಮತಾಂತರ ಮಾಡಿದ ಮೇಲೂ ದಲಿತನ್ನು ದಲಿತರೇ ಆಗಿಡುವ, ಅಸ್ಪೃಶ್ಯರಂತೆ ಕಾಣುವ ಮಿಷನರಿಗಳ ಕಪಟ ನಾಟಕಕ್ಕೆ ಬಲಿಯಾಗುವ ಎಲ್ಲರೂ ಇದರಿಂದ ಪಾಠ ಕಲಿಯುವುದು ಒಳಿತು.

ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ದಲಿತ ಕ್ರಿಶ್ಚಿಯನ್ನರ ವಿರುದ್ಧ ವ್ಯಾಪಕವಾಗಿ ಜಾತಿ ಆಧಾರಿತ ತಾರತಮ್ಯವನ್ನು ಮಾಡಲಾಗುತ್ತಿದೆ ಎಂದು Tamil Nadu Untouchability Eradication Front (TNUEF) ವರದಿ ಮಾಡಿರುವುದನ್ನು ಡಿ.ಎನ್.ಎ ವರದಿ ಮಾಡಿದೆ. ‘Dalit Christians Crucified’ ಎಂಬ ಶೀರ್ಷಿಕೆಯ ಈ ವರದಿಯಲ್ಲಿ ಶಿವಗಂಗಾ ಧರ್ಮ ಪ್ರಾಂತ್ಯದಲ್ಲಿ ದಲಿತ ಕ್ರಿಶ್ಚಿಯನ್ನರ ಜೊತೆ ಅಸ್ಪೃಶ್ಯತೆ, ಅವರಿಗಾಗಿ ಪ್ರತ್ಯೇಕ ಚರ್ಚುಗಳು, ಪೌರೋಹಿತ್ಯದ ನಿರಾಕರಣೆ, ಮುಂತಾದ ತಾರತಮ್ಯಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸಾಕಾ ಜಾತ್ಯಾತೀತರೇ? ದಲಿತರಿಗೆ ಆ ಮತದಲ್ಲಿ ಸಿಗುವ “ಸನ್ಮಾನ” , ಅಲ್ಲಿ ಅವರನ್ನು ನೋಡಿಕೊಳ್ಳಲಾಗುವ ರೀತಿ ಹೇಗಿದೆ ಎಂದು ಕಣ್ಣಾರೆ ನೋಡಿ ಬುದ್ದಿಜೀವಿಗಳೆ.

ಹಿಂದೂ ಧರ್ಮವನ್ನು ಜರೆಯುವ ಜಾತ್ಯಾತೀತ-ಬುದ್ದಿಜೀವಿಗಳಿಗೆ ಈಗ ಬಾಯಿ ಬರುತ್ತಿಲ್ಲವೇನೋ? ಇಂತಹ ವಿಚಾರಗಳಲ್ಲಿ ಅವರದ್ದು ಕುರುಡ, ಕೆಪ್ಪ -ಬೆಪ್ಪರಂತಹ ವ್ಯವಹಾರ. ಇದರ ಬಗ್ಗೆ ಒಂದೆರಡು ಮಾತು ಹೇಳಿ, ಟೌನ್ ಹಾಲ್ ಮುಂದೆ ಎರಡು ಪ್ರತಿಭಟನೆ ಮಾಡಿ, ಧೂಳು ಹಿಡಿದ ನಿಮ್ಮ ಒಂದೆರಡು ಅವಾರ್ಡ್ ವಾಪಾಸು ಮಾಡಿ, ಊಹೂಂ ಸುದ್ದಿ ಇಲ್ಲ!! ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಇದ್ದು ಬಿಡುವ ಇವರು ಸನಾತನ ಧರ್ಮ, ಭಾಜಪಾ, ಸಂಘ ಪರಿವಾರ, ಮೋದಿ ಎಂದರೆ ಸಾಕು, ಕುಳಿತಲ್ಲಿಂದ ಛಂಗನೆ ಎದ್ದು ನಿಲ್ಲುತ್ತಾರೆ. ಕೋಲು ಹಿಡಿದು ನಡೆದಾಡುವ, ಹಲ್ಲಿಲ್ಲದ ಹಣ್ಣು ಹಣ್ಣು ಮುದಕರೂ ಕೂಡಾ ನನ್ನದೂ ಒಂದಿರಲಿ ಎಂದು ದನಿ ಗೂಡಿಸುತ್ತಾರೆ.

ತಮಿಳುನಾಡಿನ ಶಿವಗಂಗಾ ಧರ್ಮ ಪ್ರಾಂತ್ಯದ ಕ್ರೈಸ್ತರ ಪೈಕಿ 25 ಶೇ. ದೇವೆಂದ್ರ ಕುಲಾ ವೆಲಾಲರ್ ಅಥವಾ ಪಲ್ಲರ್ – ದಲಿತ ಉಪ ಪಂಗಡದವರಿದ್ದಾರೆ. ಈ ಧರ್ಮ ಪ್ರಾಂತ್ಯದ ರಚನೆಯ 30 ವರ್ಷಗಳ ನಂತರವೂ, ದಲಿತರ ಈ ಸಮುದಾಯದಿಂದ ಒಬ್ಬೆ ಒಬ್ಬನು ಯಾಜಕನಾಗಿ ದೀಕ್ಷಾಸ್ನಾನ ಪಡೆದಿಲ್ಲ ಎಂದು ಟಿಎನ್ಯುಎಫ್ ಪ್ರಧಾನ ಕಾರ್ಯದರ್ಶಿ ಕೆ ಸ್ಯಾಮ್ಯುಯೆಲ್ ರಾಜ್ ಹೇಳಿದ್ದಾರೆ. ಗಾಢ ನಿದ್ದೆಯಲ್ಲಿರುವ ಜಾತ್ಯಾತೀತರೇ, ಬುದ್ದಿ ಜೀವಿಗಳೇ ಏಳಿ ಎದ್ದೇಳಿ….  ನಟ ಭಯಂಕರರೇ ಏನಾಗ್ತಿದೆ ತಮಿಳುನಾಡಿನಲ್ಲಿ ನೋಡಿ… ನಿಮ್ಮ ನಾಡಿನಲ್ಲಿ ಕ್ರೈಸ್ತರಿಂದ ದಲಿತರ ಜೊತೆ ತಾರತಮ್ಯ!! ಇದು ಶೋಷಣೆಯ ಪರಿಭಾಷೆಯಲ್ಲಿ ಬರುವುದಿಲ್ಲವೋ? ಇದರ ಬಗ್ಗೆ ಬರೆದರೆ ಅವರಿಗೆ ಪ್ರಶಸ್ತಿ-ಸನ್ಮಾನ-ಸೈಟು ಸಿಗುವುದಿಲ್ಲವೋ ಏನೋ? ಪಾಪ ಬಿಡಿ, ಎಲ್ಲವೂ ಮಾಡುವುದು ಬಿಟ್ಟಿ ಸೈಟಿಗಾಗಿ, ಕಟ್ಟು ನೋಟಿಗಾಗಿ  ಪ್ರಾರಬ್ಧ ಏನು ಮಾಡುವುದು?

ಚರ್ಚ್ ಮಾತ್ರವಲ್ಲ, ದಲಿತ ಕ್ರಿಶ್ಚಿಯನ್ನರು ಶಾಲೆ- ಕಾಲೇಜು, ಉದ್ಯೋಗ ಮತ್ತು ಆಸ್ಪತ್ರೆಗಳಲ್ಲೂ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹಬ್ಬ ಹರಿದಿನಗಳಲ್ಲೂ ದಲಿತ ಮತ್ತು ದಲಿತರಲ್ಲದ ಕ್ರೈಸ್ತರ ಜೊತೆ ಭೇದ ಮಾಡಲಾಗುತ್ತದೆಯೆಂದೂ ಹೇಳಲಾಗುತ್ತಿದೆ. ಶಿವಗಂಗಾ ಧರ್ಮ ಪ್ರಾಂತ್ಯದ ಬಿಷಪ್ ಕೂಡಾ ಚರ್ಚಿನಲ್ಲಿ ಜಾತಿ ಆಧಾರಿತ ತಾರತಮ್ಯದ ಅಸ್ತಿತ್ವ ಇರುವುದನ್ನು ಒಪ್ಪಿಕೊಂಡಿದ್ದಾರೆ ಮತ್ತು ಪಲ್ಲರ್ ಸಮುದಾಯದಿಂದ ದಲಿತರನ್ನು ಪುರೋಹಿತರಾಗಿ ಮಾಡಲು ತಾನು ಅಸಮರ್ಥತನಾಗಿದ್ದೇನೆ ಎಂದೂ ಹೇಳಿಕೊಂಡಿದ್ದಾರೆಂದು ವರದಿ ಹೇಳಿದೆ.

ಇನ್ನಾದರೂ ಸನಾತನ ಧರ್ಮ ಮತ್ತು ಹಿಂದೂಗಳನ್ನು ಜರೆಯುವುದನ್ನು ಬಿಡಿ. ಮಾತೃ ಧರ್ಮವನ್ನು ತೊರೆದು ಅನ್ಯ ಮತದವರ ಬೆಣ್ಣೆ ಮಾತಿಗೆ ಮರುಳಾಗುವ ಮುನ್ನ ಯೋಚಿಸಿ. ಅನ್ಯ ಮತದ ಆಮಿಶ-ಆಕರ್ಷಣೆಗೆ ಮರುಳಾಗುವ ಮುನ್ನ ಈ ವರದಿಯನ್ನೊಮ್ಮೆ ಓದಿ.

ಮೂಲ:https://swarajyamag.com/insta/dalit-christians-report-untouchability-widespread-caste-discrimination-within-shivganga-diocese

-ಶಾರ್ವರಿ

Tags

Related Articles

Close