ಪ್ರಚಲಿತ

ಬ್ರೇಕಿಂಗ್! ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಪತ್ನಿ ಅಸಮಧಾನ..! ಕಾಂಗ್ರೆಸ್- ಜೆಡಿಎಸ್‌ ಮೈತ್ರಿಗೆ ಬಿತ್ತು ಮತ್ತೊಂದು ಹೊಡೆತ..!

ಅಧಿಕಾರದ ಆಸೆಗೆ ಬಿದ್ದು ಒಂದಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ ಚುನಾವಣೆಗೂ ಮೊದಲು ಯಾವ ರೀತಿ ಇದ್ದರು ಎಂಬೂದನ್ನು ವಿವರವಾಗಿ ಹೇಳುವ ಅಗತ್ಯವಿಲ್ಲ. ಯಾಕೆಂದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವಕಾಶ ಸಿಕ್ಕಲ್ಲೆಲ್ಲಾ ಜೆಡಿಎಸ್‌ ವರಿಷ್ಠ ದೇವೇಗೌಡರನ್ನು ಮತ್ತು ಕುಮಾರಸ್ವಾಮಿಯನ್ನು ಟೀಕಿಸಿದ ಪರಿ ನೋಡಿದರೆ ಮತ್ತೆಂದೂ ಈ ಇಬ್ಬರೂ ವೇದಿಕೆ ಕೂಡಾ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂಬಂತಿತ್ತು. ಆದರೆ ನಡೆದದ್ದೇ ಬೇರೆ, ಪರಸ್ಪರ ಕಿತ್ತಾಡಿಕೊಂಡಿದ್ದವರು ಇಂದು ಒಂದಾಗಿ ರಾಜ್ಯಭಾರ ನಡೆಸಲು ಮುಂದಾಗಿದ್ದಾರೆ. ಆದರೂ ಈ ಹಿಂದೆ ಸಿದ್ದರಾಮಯ್ಯನವರು ಆಡಿದ ಮಾತುಗಳನ್ನು ಮರೆಯಲು ಸಾಧ್ಯವೇ ಇಲ್ಲ ಎಂದ ದೇವೇಗೌಡರ ಪತ್ನಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರೀತಿ ಇದೀಗ ಮತ್ತೆ ಮೈತ್ರಿಗೆ ಕಲ್ಲು ಬೀಳುವ ಸಾಧ್ಯತೆ ಇದೆ..!

ಅವರಪ್ಪನಾಣೆ ಮಂತ್ರಿ ಆಗಲ್ಲ ಎಂದವನನ್ನು ಹೇಗೆ ಕ್ಷಮಿಸಲಿ..!

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸ್ವತಃ ಕಾಂಗ್ರೆಸ್ ಹೈಕಮಾಂಡ್‌ನ್ನೇ ಪ್ರಶ್ನಿಸುತ್ತಿದ್ದವರು, ಇನ್ನು ರಾಜ್ಯ ನಾಯಕರನ್ನು ಬಿಡುತ್ತಾರೆಯೇ.? ಇಂತಹ ಸಿದ್ದರಾಮಯ್ಯನವರು ಕಾಂಗ್ರೆಸ್ ಸಮಾವೇಶಗಳಲ್ಲಿ ಬಹಿರಂಗವಾಗಿಯೇ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಅದೇ ರೀತಿ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕುಮಾರಸ್ವಾಮಿ ಅವರು ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಎಂದಿದ್ದರು. ಸಿದ್ದರಾಮಯ್ಯನವರ ಈ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಹೇಳಿಕೆ ವಿರುದ್ಧ ಕುಮಾರಸ್ವಾಮಿ ಕೂಡಾ ಖಾರವಾಗಿಯೇ ಪ್ರತಿಕ್ರಯಿಸಿದ್ದರು.

ಆದರೆ ಇದೀಗ ಈ ಇಬ್ಬರೂ ಮೈತ್ರಿ ಮಾಡಿಕೊಂಡು ಸರಕಾರ ರಚನೆಗೆ ಮುಂದಾಗಿದ್ದು, ಈ ವಿಚಾರವಾಗಿ ಮಾಧ್ಯಮದವರು ದೇವೇಗೌಡರ ಪತ್ನಿಗೆ ಮೈತ್ರಿಯ ಬಗ್ಗೆ ಪ್ರಶ್ನಿಸಿದಾಗ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭಗಳಲ್ಲಿ ಹೇಳಿದ ಮಾತನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ, ಯಾಕೆಂದರೆ ನನ್ನ ಗಂಡನ ಹಾಗೂ ಮಗನ ಬಗ್ಗೆ ಅತೀ ಕೀಳಾಗಿ ಮಾತನಾಡಿದವರು ಇಂದು ಮೈತ್ರಿ ಮಾಡಿಕೊಂಡು ಸುಮ್ಮನಾಗಿದ್ದಾರೆ, ಆದರೆ ಈ ಮಾತನ್ನು ನಾನು ಎಂದಿಗೂ ಮರೆಯುವುದಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ..!

Image result for kumaraswamy

ಐದು ವರ್ಷ ಮುಂದುವರಿಸುವುದು ಅನುಮಾನ..!

ಸಿದ್ದರಾಮಯ್ಯನವರ ಮತ್ತು ದೇವೇಗೌಡರ ಮಧ್ಯೆ ಇರುವ ವೈಮನಸ್ಸನ್ನು ದೂರ ಮಾಡಲು ಯಾವುದಾದರೂ ಪ್ರಯತ್ನ ನಡೆದಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಚೆನ್ನಮ್ಮ ಅವರು, ಇಲ್ಲಿಯವರೆಗೆ ಆ ರೀತಿಯ ಯಾವುದೇ ಪ್ರಯತ್ನ ನಡೆದಿಲ್ಲ, ಮತ್ತು ಸಮ್ಮಿಶ್ರ ಸರಕಾರ ಐದು ವರ್ಷ ಪೂರ್ತಿಗೊಳಿಸುತ್ತಾರೆ ಎಂಬುದು ಅನುಮಾನ, ಅದ್ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎಂಬೂದು ನೋಡಬೇಕಾಗಿದೆ ಎಂದರು.

ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಗ್ಗೆ ಎರಡೂ ಪಕ್ಷಗಳ ಮುಖಂಡರ ಮನಸ್ಸಲ್ಲಿ ಒಳಗಿಂದೊಳಗೆ ಸಮರ ನಡೆಯುತ್ತಲೇ ಇದ್ದು, ಇದೀಗ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಹೇಳಿಕೆ ಮತ್ತಷ್ಟು ಕುತೂಹಲ ಕೆರಳಿಸಿದೆ..!

–ಅರ್ಜುನ್

Tags

Related Articles

Close