ಪ್ರಚಲಿತ

ಕೇಸರಿ ಧರಿಸಿ ಗಲ್ಲಿ ಗಲ್ಲಿ ಸುತ್ತುತ್ತಿರುವ ಹಾಸ್ಯ ನಟ ಕೋಮಲ್..! ಬಿಜೆಪಿ ಪರ ಕೋಮಲ್ ಪ್ರಚಾರ ನಡೆಸುತ್ತಿರುವುದು ಯಾಕೆ ಗೊತ್ತಾ..?

ಚುನಾವಣೆ, ಚುನಾವಣೆ, ಚುನಾವಣೆ… ಎತ್ತ ನೋಡಿದರೂ ಚುನಾವಣೆಯದ್ದೇ ಕಾರುಬಾರು. ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷ ಅಧಿಕಾರಕ್ಕೆ ಬರಬೇಕು, ತಮ್ಮ ಪಕ್ಷದ ನಾಯಕನೇ ಮುಖ್ಯಮಂತ್ರಿ ಆಗಬೇಕು ಎಂದು ಎಲ್ಲಾ ರಾಜಕೀಯ ನಾಯಕರೂ ಕನವರಿಸಿಕೊಂಡಿರುವುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. 

 ಈ ಮಧ್ಯೆ ಕಾವೇರುತ್ತಿರುವ ಚುನಾವಣಾ ಪ್ರಚಾರದಲ್ಲಿ ಸಿನಿ ದಿಗ್ಗಜರು ಕೂಡಾ ಪ್ರಚಾರದ ಭರಾಟೆಯಲ್ಲಿ ತೊಡಗಿಕೊಂಡು ತಮ್ಮ ಪಕ್ಷಕ್ಕೇ ಓಟ್ ಹಾಕಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಹಲವಾರು ಚಲನ ಚಿತ್ರ ನಟರಿಗೆ ಟಿಕೆಟ್ ನೀಡಿದ್ದು ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಪುಳಕವನ್ನು ತಂದಿಟ್ಟಿದೆ. ಹೀಗಾಗಿ ಈ ಬಾರಿ ಸಿನಿ ತೆರಯರ ಪ್ರಚಾರದ ಅಬ್ಬರವೂ ಹೆಚ್ಚಾಗಿದೆ. 

ಯಶವಂತಪುರದಲ್ಲಿ ಜಗ್ಗೇಶ್ ಫೈಟ್..!

ಖ್ಯಾತ ನಟ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯ ಜಗ್ಗೇಶ್ ಅವರಿಗೆ ಭಾರತೀಯ ಜನತಾ ಪಕ್ಷ ಬೆಂಗಳೂರಿನ ಯಶವಂತಪುರದಲ್ಲಿ ಟಿಕೆಟ್ ನೀಡಿ ಚುನಾವಣಾ ಅಖಾಡಕ್ಕಿಳಿಸಿದೆ. ಅತ್ತ ಬಾಗಲಕೋಟೆಯಲ್ಲಿ ನಟ ಸಾಯಿಕುಮಾರ್ ಅವರನ್ನು ಅಖಾಡಕ್ಕಿಳಿಸಿದರೆ ಇತ್ತ ಯಶವಂತಪುರದಲ್ಲಿ ನಟ ಹಾಗೂ ಭಾರತೀಯ ಜನತಾ ಪಕ್ಷದ ನಾಯಕ ಜಗ್ಗೇಶ್ ಅವರನ್ನು ಅಖಾಡಕ್ಕೆ ಇಳಿಸಿದೆ. ಇದು ಸಿನಿ ಪ್ರೇಮಿಗಳಲ್ಲಿ ಹಾಗೂ ತಮ್ಮ ಅಭಿಮಾನಿಗಳಲ್ಲಿ ಭಾರೀ ಉತ್ಸಾಹವನ್ನೇ ನೀಡಿದೆ.

ಕೇಸರಿ ಧರಿಸಿ ಗಲ್ಲಿ ಗಲ್ಲಿ ಪ್ರಾಚಾರ ಮಾಡುತ್ತಿರುವ ಕೋಮಲ್..!

ತನ್ನ ಅಣ್ಣ ಜಗ್ಗೇಶ್‍ಗೆ ಯಶವಂತಪುರದಲ್ಲಿ ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ಘೋಷಣೆಯಾಗುತ್ತಲೇ ಹಾಸ್ಯ ನಟ ಕೋಮಲ್ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಯಶವಂತಪುರದ ಗಲ್ಲಿ ಗಲ್ಲಿಗಳಲ್ಲಿ ತನ್ನ ಅಣ್ಣ ನಟ ಜಗ್ಗೇಶ್ ಪರವಾಗಿ ಮತ ಭೇಟೆಯನ್ನು ನಡೆಸುತ್ತಿದ್ದಾರೆ. ಶತಾಯ ಗತಾಯ ಈ ಬಾರಿ ಜಗ್ಗೇಶ್ ಚುನವಣೆಯಲ್ಲಿ ಜಯಭೇರಿ ಭಾರಿಸಬೇಕು, ಭಾರತೀಯ ಜನತಾ ಪಕ್ಷ ಗೆಲ್ಲಬೇಕು ಎಂದಿರುವ ಹಾಸ್ಯ ನಟ ಕೋಮಲ್ ಯಶವಂತಪುರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ದಪ್ಪನೆ ಮೀಸೆ ಬಿಟ್ಟು, ಕೇಸರಿ ಶಲ್ಯ ಧರಿಸಿ ಅಣ್ಣ ಜಗ್ಗೇಶ್ ಪರ ಪ್ರಚಾರ ಮಾಡುತ್ತಿದ್ದಾರೆ. ಯಶವಂತ ಪುರದ ಪ್ರಮುಖ ಕಾಲೊನಿಗಳಲ್ಲಿ ಸರ್ಕಾರ ಬದಲಾಯಿಸಿ ಎನ್ನುತ್ತಿದ್ದಾರೆ. ಕೋಮಲ್ ಅವರ ಈ ಮತಭೇಟೆಗೆ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಕೂಡಾ ಸಾತ್ ನೀಡುತ್ತಿದ್ದಾರೆ. ಅಣ್ಣ ಜಗ್ಗೇಶ್ ಎಲ್ಲಾ ವಾರ್ಡ್‍ಗಳನ್ನೂ ತಲುಪಿ ಕೆಲಸ ಮಾಡುತ್ತಿದ್ದರೂ ಕೂಡಾ ಜನರನ್ನು ತಲುಪಲು ಕಷ್ಟವಾಗುತ್ತಿದೆ. ಹೀಗಾಗಿ ಅವರ ಪ್ರತಿನಿಧಿಯಾಗಿ ಯಶವಂತಪುರದ ಗಲ್ಲಿಗಳಲ್ಲಿ ಮತಭೇಟೆಯನ್ನು ಮಾಡುತ್ತಿದ್ದಾರೆ ಹಾಸ್ಯ ನಟ ಕೋಮಲ್.

ರವಿಶಂಕರ್‍ರಿಂದಲೂ ಪ್ರಚಾರ…

ಇನ್ನು ತಮ್ಮ ಅಣ್ಣಂದಿರ ಪರವಾಗಿ ಪ್ರಚಾರ ಮಾಡುವುದು ಇದೇ ಮೊದಲೇನಲ್ಲ. ಬಾಗೇಪಳ್ಳಿ ಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿರುವ ಡೈಲಾಗ್ ಕಿಂಗ್ ಸಾಯಿಕುಮಾರ್ ಪರವಾಗಿ ಆರ್ಮುಗ ಖ್ಯಾತಿಯ ರವಿಶಂಕರ್ ಪ್ರಚಾರ ನಡೆಸುತ್ತಿದ್ದಾರೆ.

Related image

ಒಟ್ಟಾರೆ ಈ ಬಾರಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಬೇಕೆಂಬ ಹಠಕ್ಕೆ ಬಿದ್ದಿರುವ ಭಾರತೀಯ ಜನತಾ ಪಕ್ಷ ನಟರನ್ನು ಕಣಕ್ಕಿಳಿಸಿದ್ದು, ಆ ನಟರಿಗೆ ತಮ್ಮ ಸಹೋದರ ನಟರೂ ಸಾತ್ ನೀಡುತ್ತಿರುವುದು ಭಾರೀ ಮೊತ್ತದಲ್ಲಿ ಜಯಗಳಿಸುವ ನಿರೀಕ್ಷೆಯೂ ಮೂಡುತ್ತಿರುವುದಂತು ಸುಳ್ಳಲ್ಲ.

source: suddimane

-ಸುನಿಲ್ ಪಣಪಿಲ

Tags

Related Articles

Close