ಕಳೆದ ವರ್ಷ ಮಂಗಳೂರಿನ ಜೊತೆಗೆ ಇಡೀ ರಾಜ್ಯ, ದೇಶವನ್ನೇ ಬೆಚ್ಚಿ ಬೀಳಿಸಿದ್ದ ರಿಕ್ಷಾದಲ್ಲಿ ಉಗ್ರ ಶಾರಿಕ್ ಎಂಬ ಶಾಂತಿದೂತ ಕುಕ್ಕರ್ ಬಾಂಬ್ ಸ್ಪೋಟ ನಡೆಸಿದ್ದು, ಆತನನ್ನು ಪೊಲೀಸರು ಬಂಧಿಸಿದ ಘಟನೆ ಇನ್ನೂ ಮಾಸಿಲ್ಲ. ಆ ಮೊದಲೇ ಆ ಆರೋಪಿಗೆ ಸಿಮ್ ಒದಗಿಸಿದ ಆರೋಪಿಯನ್ನು ಒಡಿಶಾದಲ್ಲಿ ಸದ್ಯ ವಶಕ್ಕೆ ಪಡೆಯಲಾಗಿದೆ.
ಒಡಿಶಾದ ವಿಶೇಷ ಕಾರ್ಯಪಡೆ ಈ ಆರೋಪಿಯನ್ನು ಬಂಧಿಸಿದ್ದು, ಈತ ಜಾಜ್ಪುರ ಎಂಬ ಜಿಲ್ಲೆಯವನಾಗಿದ್ದಾನೆ. ಈತನನ್ನು ಬಂಧಿಸಿ, ವಿಚಾರಣೆ ನಡೆಸುವ ಸಂದರ್ಭದಲ್ಲಿ ಈತನಿಗೆ ಮತ್ತು ಮಂಗಳೂರು ಕುಕ್ಕರ್ ಬಾಂಬ್ ಆರೋಪಿ ಶಾರಿಕ್ನಿಗೂ ಸಂಬಂಧ, ಸಂಪರ್ಕ ಇರುವ ವಿಷಯ ಬೆಳಕಿಗೆ ಬಂದಿದೆ.
ವಿಶೇಷ ಕಾರ್ಯಪಡೆಗಳು ಪಾಕಿಸ್ತಾನ ಗುಪ್ತಚರ ಸಂಸ್ಥೆಗಳ ಜೊತೆಗೆ ಸಂಬಂಧ ಹೊಂದಿದ್ದ ವ್ಯಕ್ತಿಗಳ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಉಗ್ರ ಶಾರಿಕ್ನ ಜೊತೆಗೆ ನಂಟಿರಿಸಿಕೊಂಡಿದ್ದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ. ಶಾರಿಕ್ ಮತ್ತು ಬಂಧಿತನಿಗೆ ಸಂಬಂಧಿಸಿದ ಮಾಹಿತಿಗಳನ್ನು ಒಡಿಶಾ ಪೊಲೀಸರು ಮಂಗಳೂರು ಪೊಲೀಸರಿಗೆ ಮತ್ತು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಿದೆ.
ಉಗ್ರ ಶಾರಿಕ್ಗೆ ಸಿಮ್ ಒದಗಿಸಿ ಬಂಧಿತನಾಗಿರುವ ಈತನಿಗೂ ಪಾಕಿಸ್ತಾನದ ಉಗ್ರರ ಜೊತೆಗೆ ಸಂಪರ್ಕ ಇರುವ ವಿಚಾರವನ್ನು ಸಹ ಒಡಿಶಾ ವಿಶೇಷ ಕಾರ್ಯಪಡೆ ಬಹಿರಂಗಗೊಳಿಸಿದೆ.