ಅದ್ಯಾಕೋ ಗೊತ್ತಿಲ್ಲ ಈ ಹಿಂದೂಗಳಿಗೆ ಜಾತ್ಯತೀತತೆ ಎನ್ನುವುದು ಮೈಗಂಟಿದ ಶಾಪವೋ ಅಥವಾ ಬೋಳೇತನದ ಪರಮಾವಧಿಯೋ ಗೊತ್ತಿಲ್ಲ. ಹಿಂದೂಗಳ
ಧರ್ಮಸಹಿಷ್ಣುತೆ, ಜಾತ್ಯತೀತತೆ ಅವರನ್ನು ಅವಸಾನದತ್ತ ತಲುಪಿಸುತ್ತಿದೆಯೇ ಎಂಬುವುದು ಬಹಳ ಹಿಂದಿನಿಂದಲೂ ಬೃಹದಾಕಾರವಾಗಿ ಕೇಳಿಬರುವ ಪ್ರಶ್ನೆ.
ವೇದಕಾಲದಿಂದಲೂ ಕ್ಷಾತ್ರವೃತ್ತಿಯಿಂದ ಮೆರೆಯುತ್ತಿದ್ದ ಹಿಂದೂಗಳು ಇಂದಿನ ಆಧುನೀಕ ಯುಗದಲ್ಲಿ ಬೋಳೇತನದಿಂದ ಮೆರೆಯುತ್ತಿದ್ದು, ಹಿಂದುತ್ವವನ್ನು
ಮರೆತೇಬಿಟ್ಟಿದ್ದಾರೆ. ಯಾರೇ ಏನೇ ಅಂದರೂ ಹಿಂದೂಗಳು ಸಿಡಿದೇಳುವುದೇ ಇಲ್ಲ. ತನ್ನ ಧರ್ಮಕ್ಕೆ ಏನೇ ಅಪಚಾರ ಆದರೂ ಅವರಿಗೆ ಅದೊಂದು ದೊಡ್ಡ ವಿಷಯವೇ ಅಲ್ಲ. ಧರ್ಮೋ ರಕ್ಷತಿ ರಕ್ಷಿತಃ ಎನ್ನುತ್ತಾರೆ. ಆದರೆ ತನ್ನ ಧರ್ಮವನ್ನೇ ರಕ್ಷಿಸಲಾಗದೆ ಇದ್ದರೆ…?
ದೇವಸ್ಥಾನ ಒಡೆದರೂ, ದೇವರ ಮೂರ್ತಿಯನ್ನು ಕಣ್ಣೆದುರೇ ಧ್ವಂಸ ಮಾಡಿದರೂ, ಹಿಂದೂಗಳನ್ನು ಮತಾಂಧರು ಕಗ್ಗೊಲೆ ಮಾಡಿದರೂ, ಹಿಂದೂ ಯುವತಿಯನ್ನು
ಅಪಹರಿಸಿ ಲವ್ಜಿಹಾದ್ಗೆ ಬಲಿಕೊಟ್ಟರೂ, ಅಪಹರಿಸಿದರೂ, ಹಿಂದೂಗಳ ದೇವ-ದೇವರನ್ನು ತುಚ್ಛವಾಗಿ ನಿಂದಿಸಿದರೂ, ಹಿಂದೂಗಳಿಗೆ ಅವಮಾನವಾದರೂ,
ಹಿಂದೂಗಳ ಧರ್ಮ,ದೇವರು, ಗ್ರಂಥ ಹೀಗೆ ಯಾವುದರ ಬಗ್ಗೆಯೂ ಕೀಳಾಗಿ ನಿಂದಿಸಿದರೂ ಹಿಂದೂಗಳ ಸ್ವಾಭಿಮಾನ ಕೆರಳುವುದೇ ಇಲ್ಲ. ಧರ್ಮಾಚರಣೆಯ
ಕೊರತೆಯೋ ಅಥವಾ ಬೋಳೇತನವೋ ಅಥವಾ ಅತಿಉದಾರತೆಯೋ ಅಥವಾ ಧರ್ಮಭಕ್ತಿಯ ಕೊರತೆಯೋ ಹಿಂದೂಗಳಿಗೆ ಯಾರೇ ಏನೇ ಅನ್ನಲಿ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಾರೆ. ಹಿಂದೂಗಳ ಇದೇ ಸ್ವಭಾವದಿಂದ ಇತಿಹಾಸದಲ್ಲಿ ಸಾಕಷ್ಟು ಅನುಭವಿಸಿದರೂ ಪಾಠ ಕಲಿಯುವುದೇ ಇಲ್ಲ. ಇಂದಿಗೂ ಅದರಿಂದ ಸಾಕಷ್ಟು ಅನುಭವಿಸುತ್ತಿದ್ದಾರೆ. ಇದನ್ನು ಹೀಗೆಯೇ ಮುಂದುವರಿಸಿದರೆ ಮುಂದೆಯೂ ಬಲವಾದ ಪೆಟ್ಟು ತಿನ್ನಲಿದ್ದಾರೆ. ಇಲ್ಲಿ ನೀಡುವ ಉದಾಹರಣೆಗಳನ್ನೇ ಗಮನಿಸಿ.. ಹಿಂದೂಗಳ ಬೋಳೇತನ ಯಾವ ಸ್ಥಿತಿಗೆ ತಲುಪಿಸಿದೆ ಎಂದು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.
ನರೇಂದ್ರ ಮೋದಿ ಒಬ್ಬ ಆರೆಸ್ಸೆಸ್ನಿಂದ ಬಂದ ವ್ಯಕ್ತಿ. ಅವರು ಒಬ್ಬ ದೇಶಭಕ್ತ ರಾಷ್ಟ್ರೀಯವಾದಿ, ಹಿಂದೂಗಳ ಏಳಿಗೆಯನ್ನು ಬಯಸುವ, ಸರ್ವಧರ್ಮೀಯರನ್ನು
ಸಹಿಷ್ಣುತೆಯಿಂದ ಕಾಣುವ ವ್ಯಕ್ತಿಯಾಗಿದ್ದರೂ ಅವರನ್ನೇ ಬೈಯ್ಯುವ ಅದೆಷ್ಟೋ ಹಿಂದೂಗಳಿದ್ದಾರೆ. ಯೋಗೀಜಿಯಂಥಾ ವ್ಯಕ್ತಿಗಳ ಕೆಲಸವನ್ನು ಹಿಂದೂಗಳೂ ಅರ್ಥವೇ ಮಾಡುವುದಿಲ್ಲ. ಆದರೆ ಅದೇ ಮುಸ್ಲಿರನ್ನು ಗಮನಿಸಿ ನೋಡಿ… ಯಾವನೇ ಒಬ್ಬ ಮುಸ್ಲಿಮ್ ಓವೈಸಿಯನ್ನು ತೆಗಳಿದ್ದು ನೋಡಿದ್ದೀರಾ? ಓವೈಸಿ, ಹಫೀಝ್, ಆಬಿದ್ಪಾಶಾನಂತಹಾ ವ್ಯಕ್ತಿಗಳು ಎಷ್ಟೇ ಖತರ್ನಾಕ್ ಆಗಿದ್ದರೂ ಅವರ ಬಗ್ಗೆ ಯಾವನೇ ಒಬ್ಬ ಮುಸ್ಲಿಮ ಒಂದೇ ಒಂದು ಶಬ್ದವನ್ನು ಆಡಿದ್ದನ್ನು ನೋಡಿದ್ದೀರಾ…?
ಹಿಂದೂಗಳಲ್ಲಿ ಪವಿತ್ರ ಎಂದು ಪೂಜಿಸುವ ಗೋಮಾತೆಯನ್ನೇ ಭಕ್ಷಿಸುವ ಹಿಂದೂಗಳಿದ್ದಾರೆ. ಬೇಕಾದರೆ ಗೋಮಾತೆಯನ್ನು ಸಾರ್ವಜನಿಕವಾಗಿಯೇ ಕತ್ತರಿಸಿ ಚಿಲ್ಲಿ ಮಾಡಿ ತಿಂದು ನನ್ನ ಆಹಾರ ನನ್ನ ಹಕ್ಕು ಎಂದು ಬೊಗಳೆ ಬಿಡುವ ಹಿಂದೂಗಳಿದ್ದಾರೆ. ಆದರೆ ಹಂದಿ ಮಾಂಸವನ್ನು ತಿನ್ನುವ ಮುಸ್ಲಿಮರಿದ್ದಾರೋ? ಎಲ್ಲಾ ಮಾಂಸದಂತೆ ಹಂದಿಯೂ ಮಾಂಸ ಆಗಿರುವಾಗ ಮುಸ್ಲಿಮರು ಹಂದಿ ಮಾಂಸವನ್ನು ತಿನ್ನುವುದೇ ಇಲ್ಲ.
ಇತಿಹಾಸ ಕಂಡ ಮಹಾನ್ ಕ್ರೂರಿಗಳು, ಸಾವಿರಾರು ಮಹಿಳೆಯರನ್ನು ಅತ್ಯಾಚಾರ ಮಾಡಿ ತನ್ನ ಜನಾನಕ್ಕೆ ಸೇರಿಸಿದ, ನೂರಾರು ದೇಗುಲಗಳನ್ನು ಧ್ವಂಸಗೊಳಿಸಿ ಅಲ್ಲಿನ ಅರ್ಚಕರ ತಲೆಯನ್ನೇ ಕತ್ತರಿಸಿದ ಟಿಪ್ಪು ಸುಲ್ತಾನ್, ಔರಂಗಜೇಬನನ್ನು ಯಾವುದೇ ಸ್ವಾಭಿಮಾನ ಇಲ್ಲದಂತೆ ಸಮರ್ಥಿಸಿಕೊಳ್ಳುವ ಹಿಂದೂಗಳಿದ್ದಾರೆ. ಅವರ ಪರವಾಗಿ ಹೋರಾಟ ಮಾಡುವ ಕಾವಿ ಉಟ್ಟ ನಕಲಿ ಸ್ವಾಮೀಜಿಗಳೂ ಇದ್ದಾರೆ. ಆದರೆ ಹಿಂದೂಗಳಿಂದು ಜಗತ್ತಲ್ಲಿ ಸ್ವಲ್ಪವಾದರೂ ಇದ್ದಾರೆ ಎನ್ನಲು ಕಾರಣರಾಗಿರುವ ಶಿವಾಜಿ ಮಹಾರಾಜ, ರಾಣಾ ಪ್ರತಾಪರಂತಹಾ ಹಿಂದೂ ದೊರೆಗಳನ್ನು ಸಮರ್ಥಿಸಿಕೊಳ್ಳುವ ಮುಸ್ಲಿಮ್ ಮೌಲ್ವಿಗಳನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ.
ದೇವರ ಮೂರ್ತಿಯ ಮೇಲೆ ಮೂತ್ರ ಮಾಡಿ ಅದನ್ನೇ ಸಮರ್ಥಿಸಿಕೊಳ್ಳುವ ಹಿಂದೂಗಳು ಈ ದೇಶದಲ್ಲಿದ್ದಾರೆ. ಆದರೆ ಮಸೀದಿಯೊಳಗಡೆ ಮೂತ್ರ ಮಾಡುವ
ಮುಸಲ್ಮಾನರನ್ನು ಪತ್ತೆ ಹಚ್ಚಲು ಸಾಧ್ಯವೇ?
ಹಿಂದೂಗಳ ಪವಿತ್ರಗ್ರಂಥವಾದ ಭಗವದ್ಗೀತೆಯನ್ನೇ ಸುಡಬೇಕು ಎಂದು ಬಹಿರಂಗ ಹೇಳಿಕೆ ನೀಡುವ ಹಿಂದೂಗಳು ಸಾಕಷ್ಟು ಮಂದಿ ಇದ್ದಾರೆ. ಭಗವದ್ಗೀತೆಯ ಒಂದೇ ಒಂದು ಪುಟವನ್ನು ಓದದೇ ಇದ್ದರೂ ಅದರ ಬಗ್ಗೆ ಖಂಡಿಸಿ ಹೇಳಿಕೆ ನೀಡುವ ಹಿಂದೂಗಳಿದ್ದಾರೆ. ರಾಮಾಯಣ, ವೇದ ಮುಂತಾದ ಕೃತಿಗಳ ಬಗ್ಗೆಯೂ ಇಲ್ಲಸಲ್ಲದ ಆರೋಪ ಮಾಡುವ ಹಿಂದೂಗಳಿದ್ದಾರೆ. ಆದರೆ ಕುರಾನ್ ಅನ್ನು ಸುಡಬೇಕು ಎಂದು ಹೇಳುವ ಒಬ್ಬನೇ ಒಬ್ಬ ಮುಸ್ಲಿ0 ಎಲ್ಲೂ ಕಾಣಲು ಸಾಧ್ಯವಿಲ್ಲ.
ದೇಶಪ್ರೇಮಿಗಳನ್ನು ಬೆಂಬಲಿಸುವ ಮುಸಲ್ಮಾನರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ದೇಶದ್ರೋಹಿಗಳನ್ನು (ಕನ್ನಯ್ಯ) ಸಮರ್ಥಿಸಿಕೊಳ್ಳುವ ಹಿಂದೂಗಳು
ಸಾಕಷ್ಟು ಮಂದಿ ಇದ್ದಾರೆ.
ಹಿಂದೂಗಳ ಆರಾಧ್ಯ ದೇವರಾದ ಶ್ರೀರಾಮ, ಶ್ರೀಕೃಷ್ಣ ಮುಂತಾದ ದೇವರ ಬಗ್ಗೆ ಜೋಕ್ ಮಾಡಿಕೊಂಡು ನಗುವ, ಹಿಂದೂ ದೇವರನ್ನು ತಮಾಷೆ, ವಿಡಂಬನೆ ಮಾಡುವ, ದೇವರ ಬಗ್ಗೆ ಅಪಹಾಸ್ಯ ಮಾಡುವ ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಿಂದೂ ದೇವರ ಬಗ್ಗೆ ಯಾರೇ ಏನೇ ಹೇಳಿದರೂ ತನಗೂ ಅದಕ್ಕೂ ಸಂಬಂಧವೇ ಇಲ್ಲವೆನ್ನುವ ಹಿಂದೂಗಳಿದ್ದಾರೆ. ಆದರೆ ಅಲ್ಲಾಹು, ಪೈಗಂಬರರನ್ನು ಅಪಹಾಸ್ಯ ಮಾಡುವ ಮುಸ್ಲಿಮರಿದ್ದಾರೆಯೇ? ಒಂದು ವೇಳೆ ಮಾಡಿದ್ದೇ ಆದರೆ ಆತನಿಗೆ ಉಳಿಗಾಲವಿದೆಯೇ?
ಬೇರೆ ದೇಶದಲ್ಲಿ ಮುಸ್ಲಿಮರ ಮೇಲೆ ದಾಳಿಯಾದರೆ, ಅಮೇರಿಕಾ, ಇಸ್ರೇಲ್ ಭಯೋತ್ಪಾದಕ ರಾಷ್ಟ್ರಗಳ ಮೇಲೆ ದಾಳಿ ನಡೆಸಿದರೆ ಉಗ್ರವಾಗಿ ಪ್ರತಿಭಟನೆ ನಡೆಸುವ ಮುಸ್ಲಿಮರು ನಮ್ಮಲ್ಲಿದ್ದಾರೆ. ಆದರೆ ಬಾಂಗ್ಲಾ, ಪಾಕಿಸ್ತಾನದಂಥಹಾ ರಾಷ್ಟ್ರಗಳಲ್ಲಿ ಹಿಂದೂಗಳನ್ನು ಕತ್ತರಿಸಿ ಹಾಕಿದರೂ, ದೇವಸ್ಥಾನಗಳನ್ನು ಧ್ವಂಸ ಮಾಡಿದರೂ, ಹಿಂದೂಗಳ ಸಾಮೂಹಿಕ ಕಲೆ ನಡೆದರೂ ಹಿಂದೂಗಳು ಮಾತಾಡುವುದೇ ಇಲ್ಲ. ಅದು ಬಿಡಿ ತನ್ನ ಪಕ್ಕದ ಮನೆಯ ಹಿಂದೂವಿನ ಮೇಲೆ ದಾಳಿ ನಡೆಸಿದರೂ ತನ್ನ ಮನೆಯ ಬಾಗಿಲನ್ನು ಭದ್ರಪಡಿಸಿಕೊಳ್ಳುವ ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಯಾವುದಾದರೂ ಒಂದು ಹುದ್ದೆಯಲ್ಲಿದ್ದರೆ, ಸಾಕಷ್ಟು ಓದಿದ್ದೇನೆ, ಆಧುನೀಕರಣ ಎಂದೆಲ್ಲಾ ಗತ್ತಿನಿಂದ ಹಿಂದೂ ಸಂಸ್ಕøತಿ, ಆಚಾರ ವಿಚಾರಗಳನ್ನು ಮರೆತುಬಿಡುವ ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಎಷ್ಟೇ ಓದಿದರೂ, ಎಷ್ಟೇ ದೊಡ್ಡ ಪದವಿಯಲ್ಲಿದ್ದರೂ ತನ್ನ ಆಚಾರ ವಿಚಾರಗಳನ್ನು ಬಿಡುವ ಮುಸ್ಲಿಮರನ್ನು ಎಲ್ಲೂ ಕಾಣಲು ಸಿಗುವುದಿಲ್ಲ.
ದೇವಸ್ಥಾನಗಳು ಚೈತನ್ಯದ ಕೇಂದ್ರವಾಗಿದ್ದೂ ಅಲ್ಲಿಗೆ ಹೋಗದೆ, ದೇವಸ್ಥಾನಗಳನ್ನು ಟೀಕಿಸುವ ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಮಸೀದಿಗೆ
ತಪ್ಪಿಸುವ ಮುಸಲ್ಮಾನರನ್ನು ಎಲ್ಲೂ ಕಾಣಲು ಸಿಗುವುದಿಲ್ಲ.
ಜಾತಿ ಜಾತಿಗಾಗಿ ಹೊಡೆದಾಡುತ್ತಾ ಸಾಯುವ, ತನ್ನದೇ ಜಾತಿ ಮೇಲು ಎಂದು ಬೊಬ್ಬೆ ಹೊಡೆದು ಭಾಷಣ ಹೊಡೆಯುವ, ಜಾತಿ ಜಾತಿಗಳ ಮಧ್ಯೆ ಎತ್ತಿಕಟ್ಟಿ
ರಾಜಕಾರಣ ಮಾಡುವ ಹಿಂದೂಗಳಿದ್ದಾರೆ. ಆದರೆ ಜಾತಿ ಜಾತಿ ಎಂದು ಹೊಡೆದಾಡುವ ಮುಸ್ಲಿಮರನ್ನು ಕಾಣಲು ಸಾಧ್ಯವಿಲ್ಲ.
ಕಾವಿ ಉಟ್ಟುಕೊಂಡು, ರುದ್ರಾಕ್ಷಿ ಮಾಲೆ ಧರಿಸಿಕೊಂಡು ಹಿಂದೂತ್ವವನ್ನೇ ವಾಚಮಗೋಚರ ನಿಂದಿಸುವ ಸ್ವಾಮೀಜಿಗಳಿದ್ದಾರೆ. ಆದರೆ ಇಸ್ಲಾಮನ್ನು ನಿಂದಿಸುವ,
ಇಸ್ಲಾಂನ ಕಂದಾಚಾರ ಕಟ್ಟುಪಾಡುಗಳನ್ನು ನಿಂದಿಸುವ ಮೌಲ್ವಿಗಳು ಎಲ್ಲೂ ಸಿಗುವುದಿಲ್ಲ…
ಹಿಂದೂಗಳ ಬಗ್ಗೆ ಹೇಳುತ್ತಾ ಹೋದರೆ ಇಂತಾಹ ನೂರಾರು ವಿಷಯಗಳಿವೆ. ಹಿಂದೂಗಳಿಗೆ ಎಷ್ಟೇ ಹೇಳಿದರೂ ಅವರು ತನ್ನ ಬುದ್ಧಿಯನ್ನು ಬದಲಿಸುವುದೇ ಇಲ್ಲ.
ಒಂತರಾ ಮೈಗಳ್ಳತನ, ಅಪಾಯದ ಅರಿವಿಲ್ಲದಿರುವುದು, ನಿರ್ಲಕ್ಷ್ಯತನವೆಂದರೂ ತಪ್ಪಾಗಲಾರದು. ಹಿಂದೂಗಳು ಇತಿಹಾಸದಿಂದಲೂ ಪಾಠ ಕಲಿಯುವುದಿಲ್ಲ,
ವರ್ತಮಾನಕಾಲದಿಂದಲೂ ಪಾಠ ಕಲಿಯುವುದಿಲ್ಲ. ಇದೆಲ್ಲಾ ಹೀಗೆಯೇ ಮುಂದುವರಿದರೆ ಭವಿಷ್ಯತ್ ಕಾಲ ತುಂಬಾ ಅಪಾಯಕ್ಕೆ ಸಿಲುಕಬಹುದು ಎಂಬ ಅಪಾಯದ ಅರಿವಿದ್ದರೂ ಹಿಂದೂಗಳ ಸ್ವಾಭಿಮಾನ ಕೆರಳುವುದೇ ಇಲ್ಲ. ಇಂಥಾ ಬೋಳೇಸ್ವಭಾವವನ್ನು ಹಿಂದೂಗಳು ಬಿಡದೆ ಜಡ್ಡುಹಿಡಿದು ಕುಳಿತಿದ್ದಾರೆ. ಇವರಿಗೆಲ್ಲಾ ಯಾವಾಗ ಬುದ್ದಿಬರುತ್ತದೋ… ಆ ದೇವರಿಗೇ ಗೊತ್ತು…!!!
-ಚೇಕಿತಾನ