ಅಂಕಣ

ಲವ್‍ಜಿಹಾದ್ ಸಿಲುಕಿ ಪಡಬಾರದ ಕಷ್ಟ ಅನುಭವಿಸಿ ಪಾಠ ಕಲಿತ ಹೆಣ್ಣು ಮತ್ತು ಲವ್ ಜಿಹಾದ್‍ಗೆ ಬಲಿಯಾಗಿ ಮುಂದೆ ಪಾಠ ಕಲಿಯಲಿರುವ ಗಂಡು…!

ಇಲ್ಲಿ ಎರಡು ಲವ್‍ಜಿಹಾದ್ ಕಥೆಗಳಿವೆ.. ಅದೇನು ಗೊತ್ತೇ ಒಬ್ಬಳು ಹೆಣ್ಣು ಲವ್‍ಜಿಹಾದ್‍ನಿಂದ ಪಾಠ ಕಲಿತರೆ ಮತ್ತೊಬ್ಬ ಯುವಕ ಮುಸ್ಲಿಂ ಯುವತಿಯ ಜಿಹಾದಿ ತಂತ್ರದಿಂದ ಲವ್‍ಜಿಹಾದ್‍ಗೆ ಬಲಿಯಾಗಿದ್ದಾನೆ.. ಲವ್‍ಜಿಹಾದ್‍ಗೆ ಬಲಿಯಾಗಿ ಇದೀಗ ಪಡಬಾರದ ವೇದನೆ ಪಡುತ್ತಿರುವ ಹೆಣ್ಣು ಬೇರ್ಯಾರೂ ಅಲ್ಲ.. ಒಂದು ಕಾಲದಲ್ಲಿ ಖ್ಯಾತ ರೂಪದರ್ಶಿಯಾಗಿ ಕೊನೆಗೆ ಮುಸ್ಲಿಂ ಯುವಕನ ಲವ್‍ಜಿಹಾದ್ ತಂತ್ರಕ್ಕೆ ಬಲಿಯಾಗಿ ಇಂದು ಪಡಬಾರದ ವೇದನೆ ಅನುಭವಿಸುತ್ತಿರುವ ಮುಂಬೈ ಬಾಂದ್ರಾ ನಿವಾಸಿ ರಶ್ಮಿ ಶಹಬಾಜ್ಕರ್….

ರಶ್ಮಿ ಸ್ಥಿತಿ ಯಾರಿಗೂ ಬರಬಾರದು….!!!

ಈಕೆಗೆ ಲವ್‍ಜಿಹಾದ್ ತಂತ್ರದ ಮೂಲಕ ಮೋಸ ಮಾಡಿದವನು ಆಸಿಫ್ ಶಹಬಾಜ್ಕರ್ ಎಂಬಾತ. ಈತ ರೂಪದರ್ಶಿ ರಶ್ಮಿ ಜೊತೆ ಪ್ರೇಮದ ನಾಟಕವಾಡಿ 2005ರಲ್ಲಿಯೇ ಮದುವೆನೂ ಆಗಿದ್ದ. ಇವರಿಗೆ 2010ರಲ್ಲಿ ಒಂದು ಗಂಡು ಮಗುವೂ ಆಗಿತ್ತು. ಆತ ಮುಸ್ಲಿಮನಾಗಿದ್ದರೂ ರಶ್ಮಿ ಹಿಂದೂವಾಗಿಯೇ ಉಳಿದುಕೊಂಡಿದ್ದಳು. ಆದರೆ ಇತ್ತೀಚೆಗೆ ಆಸೀಫ್‍ನ ಧರ್ಮಾಂಧತೆ ಮಿತಿಮೀರಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ದಿನನಿತ್ಯ ಪೀಡಿಸಲಾರಂಭಿಸಿದ್ದಾನೆ. ಇದಕ್ಕೆ ಒಪ್ಪದ ರಶ್ಮಿ ಮೇಲೆ ನಾನಾ ರೀತಿ ಚಿತ್ರಹಿಂಸೆ ನೀಡಿದ್ದಷ್ಟೇ ಅಲ್ಲದೆ ಮನೆಯಿಂದಲೇ ಹೊರಗೆ ಅಟ್ಟಿಬಿಟ್ಟಿದ್ದಾನೆ. ಶುಕ್ರವಾರದಂದು ರಶ್ಮಿ ಮನೆಗೆ ಹಿಂತಿರುಗುತ್ತಿದ್ದಂತೆ ಆಸಿಫ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಮನೆಯಲ್ಲಿದ್ದ ಪಾತ್ರೆಗಳಿಂದ ರಶ್ಮಿ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾನೆ. ತಕ್ಷಣ ಮನೆ ಬಿಟ್ಟು ಹೋಗು ಎಂದು ಆಸಿಫ್ ರಶ್ಮಿಗೆ ಹೇಳಿದ್ದಾನೆ ಎಂದು ಸ್ವತಃ ರಶ್ಮಿಯೇ ಆಪಾದಿಸಿದ್ದಾಳೆ.

ರಶ್ಮಿಯನ್ನು ಮದುವೆಯಾಗಿದ್ದರೂ ಇನ್ನೊಂದು ಸಂಬಂಧ ಇಟ್ಟುಕೊಂಡಿದ್ದ ಆಸಿಫ್ ಇನ್ನೊಂದು ಹುಡುಗಿಯನ್ನು ಮದುವೆಯಾಗಿದ್ದಾನೆ. ಸಾಕಷ್ಟು ಚಿತ್ರಹಿಂಸೆ ಅನುಭವಿಸಿ ಬೆಂದು ಹೋಗಿರುವ ರಶ್ಮಿ ಕೊನೆಗೂ ಬಾಂದ್ರಾ ಪೆÇಲೀಸ್ ಠಾಣೆಗೆ ಹೋಗಿ ತನ್ನ ಗಂಡ ಆಸಿಫ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಪೆÇಲೀಸರು ಎಫ್‍ಐಆರ್ ದಾಖಲಿಸಿದ ನಂತರ ಗಂಭೀರ ಹಲ್ಲೆಗೊಳಗಾಗಿದ್ದ ರಶ್ಮಿಯನ್ನು ಆಸ್ಪತ್ರೆಗೆ ಸೇರಿಸಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸಿಫ್ ತನ್ನ ಪತ್ನಿ ಇದ್ದಾಗಲೇ ಇನ್ನೊಂದು ಹಿಂದೂ ಹುಡುಗಿಯನ್ನು ಲವ್‍ಜಿಹಾದ್‍ಗೊಳಪಡಿಸಿ ಆಕೆಯನ್ನು ಮತಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಮುಂದೆ ಈಕೆಗೂ ಆತ ಕೈಕೊಟ್ಟು ಮತ್ತೊಂದು ಹುಡುಗಿಗೆ ಬಲೆ ಬೀಸುವ ಆತಂಕವನ್ನು ರಶ್ಮಿ ವ್ಯಕ್ತಪಡಿಸಿದ್ದಾಳೆ. ಈತ ಇದೇ ರೀತಿ ಹಲವಾರು ಯುವತಿಯರಿಗೆ ಬಲೆಬೀಸಿ ಲವ್‍ಜಿಹಾದ್ ಮಾಡುತ್ತಿರುವುದನ್ನು ಬಾಂದ್ರಾ ಪೊಲೀಸರು ಪತ್ತೆಹಚ್ಚಿದ್ದಾರೆ.

ಮುಸ್ಲಿಂ ಹುಡುಗರ ಮೋಸಕ್ಕೆ ಬಲಿಯಾಗಬೇಡಿ ಎಂದು ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದ ರಶ್ಮಿಯಂಥಹಾ ಹಲವಾರು ಮಂದಿ ಇಂದು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಹಿಂದೂ ಹುಡುಗಿಯರನ್ನು ಮದುವೆಯಾಗಿ, ಅವರಿಗೆ ಮಕ್ಕಳನ್ನು ಕರುಣಿಸಿ ತಲಾಖ್ ನೀಡುತ್ತಾರೆ, ಕೆಲವರನ್ನು ಐಸಿಸ್‍ಗೆ ದೂಡುತ್ತಾರೆ. ಇನ್ನು ಕೆಲವರು ನಿಗೂಢವಾಗಿ ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ.

ಲವ್ ಜಿಹಾದ್‍ಗೆ ಬಲಿಯಾದ ಗಂಡು…!

ಇಂದು ಮುಸ್ಲಿಂ ಯುವಕರು ಮಾತ್ರವಲ್ಲ ಮುಸ್ಲಿಂ ಹುಡುಗಿಯರೂ ಲವ್‍ಜಿಹಾದ್ ತಂತ್ರ ಅನುಸರಿಸುತ್ತಿದ್ದಾರೆ. ಹೌದು ಈ ಘಟನೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ ಎಂಬಲ್ಲಿ. ಇಲ್ಲಿನ ಯುವಕನೊಬ್ಬ ಇಸ್ಲಾಂಗೆ ಮತಾಂತರ ಹೊಂದಿದ್ದಾನೆ.

ಪುತ್ತೂರಿನ ಕಡಬ ಸಮೀಪದ ನೂಜಿಬಾಲ್ತಿಲದ ಪಾಲೆಮಜಲು ನಿವಾಸಿ ಕೇರಳದ ನಾಯರ್ ಸಮುದಾಯಕ್ಕೆ ಸೇರಿದ್ದ ನವೀನ್ ಬಾಬು ಎಂಬ 20ರ ಹರೆಯದ ಯುವಕ ಇಸ್ಲಾಂಗೆ ಮತಾಂರಗೊಂಡಿದ್ದಾನೆ. ಈತನಿಗೆ ಮುಸ್ಲಿಂ ಯುವತಿ ಜೊತೆ ಪ್ರೇಮಾಂಕುರವಾಗಿದ್ದು, ಆಕೆಯನ್ನು ಮದುವೆಯಾಗಬೇಕಾದರೆ ಇಸ್ಲಾಂಗೆ ಮತಾಂತರವಾಗಬೇಕು ಎಂದು ಆಫರ್ ಒಡ್ಡಿದ್ದರು.

ಈ ಆಫರನ್ನು ಒಪ್ಪಿಕೊಂಡಿರುವ ನವೀನ್‍ಬಾಬು ಇಸ್ಲಾಂಗ್ ಮತಾಂತರ ಹೊಂದಿದ್ದು, ತನ್ನ ಹೆಸರನ್ನು ನವಾಝ್ ಎಂದು ಬದಲಿಸಿದ್ದಾನೆ. ಈತ ಕೇರಳದ ಕುಪ್ರಸಿದ್ಧ ಮತಾಂತರ ಕೇಂದ್ರ ಕ್ಯಾಲಿಕಟ್‍ನಲ್ಲಿರುವ ತೆರಿಬಿಯಾತ್ಯುಲ್ ಇಸ್ಲಾಂ ಸಭಾದಲ್ಲಿ ಇಸ್ಲಾಂ ಆಗಿ ಮತಾಂತರ ಹೊಂದಿದ್ದು, ಮತಾಂತರವಾಗಿರುವ ಸರ್ಟಿಫಿಕೆಟ್ ಕೂಡಾ ಪಡೆದಿದ್ದಾನೆ.

ಸೆ.14, 2017ರಂದು ಕ್ಯಾಲಿಕಟ್‍ನ ತೆರಿಬಿಯಾತ್ಯುಲ್ ಇಸ್ಲಾಂ ಸಭಾಕ್ಕೆ ತೆರಳಿ ಮತದ ದೀಕ್ಷೆಯನ್ನು ಪಡೆದಿರುವ ನವೀನ್ ನವೆಂಬರ್ 15, 2017ರಂದು ಇಸ್ಲಾಂ ಮತಕ್ಕೆ ಸೇರಿದ ಅಧಿಕೃತ ಸರ್ಟಿಫಿಕೆಟ್ ಹಿಡಿದು ನೆಲ್ಯಾಡಿಗೆ ಆಗಮಿಸಿ ಪಿಕ್‍ಅಪ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ.

ನವೀನ್ ಪೋಷಕರಾದ ಬಾಬು ಹಾಗೂ ಸುನಿತಾ ದಂಪತಿ ತನ್ನ ಮಗ ಇಸ್ಲಾಂಗೆ ಮತಾಂತರವಾದ ವಿಚಾರ ತಿಳಿದಿದ್ದರೂ ಏನೂ ಮಾಡಲಾಗದೆ ಸುಮ್ಮನೆ ಕುಳಿತಿದ್ದಾರೆ. ಇವರಿಗೆ ಮೇಲಿನಿಂದ ಒತ್ತಡ ಬಂದು ಬೆದರಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈತನ ಮತಾಂತರದ ಬಗ್ಗೆ ಗುಟ್ಟು ಹೊರಹೋಗದಂತೆ ಗೌಪ್ಯತೆ ಕಾಪಾಡಿರುವುದು ಲವ್‍ಜಿಹಾದ್‍ನ ತಂತ್ರವಾಗಿದೆ. ಇದುವರೆಗೆ ಲವ್‍ಜಿಹಾದ್ ಮುಖಾಂತರ ಹುಡುಗಿಯರನ್ನು ಬಲೆಗೆ ಹಾಕುತ್ತಿದ್ದ ಮುಸ್ಲಿಮರು ಇಂದು ಹುಡುಗಿಯರನ್ನು ಮುಂದಿಟ್ಟು ಶಾದಿ ಜಿಹಾದ್‍ಗೆ ತೊಡಗಿದ ವಿಚಾರ ಇದೀಗ ಬಹಿರಂಗಗೊಂಡಿದೆ.

ಕೇರಳದ ಪಿಎಫ್‍ಐ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಜೈನಬಾ ಲವ್‍ಜಿಹಾದ್‍ನ ಬಗ್ಗೆ ಮೊದಲೇ ಬಾಯ್ಬಿಟ್ಟಿದ್ದಳು. ಈ ಪ್ರಕರಣದಲ್ಲೂ ಪಿಎಫ್‍ಐ ಸಂಘಟನೆ ಇದ್ದಿರುವ ಸಾಧ್ಯತೆ ಇದ್ದು, ತನಿಖಾ ದಳ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಹಿಂದೂ ಹುಡುಗಿಯರನ್ನು ಮೋಸದಿಂದ ಪ್ರೇಮಕ್ಕೆ ಸಿಲುಕಿಸಿ, ಅವರನ್ನು ಉಗ್ರವಾದಿ ಸಂಘಟನೆಗಳಿಗೆ ಸೇರಿಸುವ, ಮುಸ್ಲಿಮರ ಸಂಖ್ಯೆಯನ್ನು ಹೆಚ್ಚಿಸಿ ಇಸ್ಲಾಂ ಸ್ಟೇಟ್ ನಿರ್ಮಿಸುವ ಮುಸ್ಲಿಮರ ಷಡ್ಯಂತ್ರ ಲವ್‍ಜಿಹಾದ್ ಬಗ್ಗೆ ರಾಷ್ಟ್ರೀಯ ತನಿಖಾ ದಳ ಪುರಾವೆಯನ್ನೂ ಪತ್ತೆ ಹಚ್ಚಿತ್ತು. ಹಲವಾರು ಹಿಂದೂ ಹುಡುಗಿಯರು ನಿಗೂಢವಾಗಿ ನಾಪತ್ತೆಯಾಗಿರುವುದನ್ನು ಮನಗಂಡ ರಾಷ್ಟ್ರೀಯ ತನಿಖಾ ದಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈ ಬಗ್ಗೆ ಸಾಕ್ಷ್ಯ ಕಲೆ ಹಾಕುವ ಕೆಲಸವನ್ನು ನಡೆಸಿತ್ತು. ಆದರೆ ಪ್ರಕರಣದ ಜಾಡು ಹಿಡಿದ ತನಿಖಾ ದಳಕ್ಕೆ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ದಳ 90 ಲವ್ ಜಿಹಾದ್ ಪ್ರಕರಣದ ಪುರಾವೆಗಳನ್ನು ಪತ್ತೆಹಚ್ಚಿದೆ.

ಇದೀಗ ರಶ್ಮಿ ಹಾಗೂ ನವೀನ್ ಪ್ರಕರಣ ನಡೆದಿದ್ದು ಈ ಪ್ರಕರಣವನ್ನು ತನಿಖಾ ಸಂಸ್ಥೆ ಗಂಭೀರವಾಗಿ ಪರಿಗಣಿಸಬೇಕಿದೆ. ಈಗಾಗಲೇ ಲವ್‍ಜಿಹಾದ್‍ಗೆ ಸಿಲುಕಿ ಒದ್ದಾಡುತ್ತಿರುವ ರಶ್ಮಿ ಹಾಗೂ ಮುಂದೆ ಪಡಬಾರದ ಕಷ್ಟ ಅನುಭವಿಸಲಿರುವ ನವೀನನ್ನು ಲವ್‍ಜಿಹಾದ್ ತಂತ್ರದಿಂದ ಬಿಡುಗಡೆಗೊಳಿಸಿ ಅವರನ್ನು ರಕ್ಷಿಸುವ ಕೆಲಸವನ್ನು ಹಿಂದೂ ಸಂಘಟನೆಗಳು ಮಾಡಬೇಕಿದೆ.

source: https://goo.gl/LCiKio https://goo.gl/FYTTSR
ಚೇಕಿತಾನ

Tags

Related Articles

Close