ಇತಿಹಾಸ

ವಿಜಯನಗರ ಸ್ಥಾಪನೆಯ ಕನಸು ಕಂಡಿದ್ದ ಗಂಡುಗಲಿ ‘ಕುಮಾರರಾಮ’ನ ಬಗ್ಗೆ ನಿಮಗೆಷ್ಟು ಗೊತ್ತು?

ವಿಜಯನಗರ ಸಾಮ್ರಾಜ್ಯ (ಕ್ರಿ.ಶ. 1336 – ಕ್ರಿ.ಶ. 1565)ದ ಕನಸುಗಾರನೆಂದೇ ಪ್ರಖ್ಯಾತಿ ಹೊಂದಿರುವ ಗಂಡುಗಲಿ ಕುಮಾರರಾಮ ಬದುಕಿದ್ದು ಕ್ರಿ.ಶ. 1290 – ಕ್ರಿ.ಶ. 1320 ರ ಕಾಲದಲ್ಲಿ.

ದಾಖಲೆಗಳ ಪ್ರಕಾರ ವಿಜಯ ನಗರದ ಸಂಸ್ಥಾಪಕರಾದ ‘ಹಕ್ಕ ಮತ್ತು ಬುಕ್ಕರು’ ಕುಮಾರರಾಮನ ಮಾವನ ಮಕ್ಕಳಾಗಿದ್ದರು. 13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಈಗ ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (1290 ಕ್ರಿ.ಶ. – 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದ. ಕನ್ನಡಿಗರಲ್ಲಿ ಅಗ್ರಗಣ್ಯನಾಗಿದ್ದ ನೆಂಬುದಕ್ಕೆ ಸಾಕಷ್ಟು ಚಾರಿತ್ರಿಕ ಘಟನೆಗಳ ಉಲ್ಲೇಖಗಳು ಇತಿಹಾಸದ ಪುಟಗಳಲ್ಲಿ ಸಿಗುತ್ತವೆ.

“ಕುಮಾರರಾಮ”ನು ಕಮ್ಮಟದುರ್ಗದ ರಾಜ ಕಂಪಿಲ ಮತ್ತು ಹರಿಯಾಲದೇವಿ/ಹರಿಹರದೇವಿಯರ ಮಗ.

ಚಿಕ್ಕಂದಿನಲ್ಲೇ ಸಮಸ್ತ 64 ವಿದ್ಯೆಗಳನ್ನು ಕಲಿತು, ಶತ್ರು ರಾಜರನ್ನೆಲ್ಲಾ ಹಿಮ್ಮೆಟ್ಟಿಸಿ ಅಜೇಯನೆನಿಸಿದ್ದವನು ಈ ಕುಮಾರರಾಮ.

ಕುಮಾರರಾಮನ ಶೌರ್ಯ, ಪರಾಕ್ರಮವನ್ನ ಅರಿತಿದ್ದ ‘ದೆಹಲಿಯ ಸುಲ್ತಾನ’ ಅವನಿಗೆ ತನ್ನ ಮಗಳನ್ನು ಕೊಟ್ಟು ಸಂಬಂಧ ಬೆಳೆಸಲು ನಿಶ್ಚಯಿಸಿದ್ದ. ಕುಮಾರರಾಮನನ್ನ ಸೋಲಿಸಿ ಆತನ ರಾಜ್ಯ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದರಿತಿದ್ದ ಸುಲ್ತಾನ ಮದುವೆಯ ಮೂಲಕ ಕುಮಾರರಾಮನನ್ನ ತನ್ನೆಡೆಗೆ ಸೆಳೆದು ಇಸ್ಲಾಮಿಗೆ ಮತಾಂತರಿಸಿ ಕಂಪ್ಲಿ ರಾಜ್ಯವನ್ನ ವಶಪಡಿಸಿಕೊಳ್ಳುವ ಹುನ್ನಾರ ಮಾಡಿದ್ದ. ಆದರೆ ಕಟ್ಟರ್ ಹಿಂದೂವಾದಿಯಾಗಿದ್ದ ಕುಮಾರರಾಮನು ಆ ಮುಸ್ಲಿಂ ಸಂಬಂಧವನ್ನು ನಿರಾಕರಿಸುತ್ತಾನೆ.

ಒಂದು ದಿನ ಕುಮಾರರಾಮ ತಂದೆಯೊಡನೆ ಬೇಟೆಗೆ ತೆರಳಲು ಯೋಚಿಸಿದ್ದವನೇ ದಿಢೀರನೆ ತನ್ನ ಮನಸ್ಸನ್ನ ಬದಲಿಸಿ ಸ್ನೇಹಿತರೊಂದಿಗೆ ಆಟವಾಡಲು ಇಷ್ಟಪಟ್ಟು ತಾಯಿ ಹರಿಯಾಲದೇವಿಯಲ್ಲಿ ಮುತ್ತಿನ ಚೆಂಡನ್ನು ಬೇಡುತ್ತಾನೆ.

ಆಗ ತಾಯಿ ಆತಂಕಗೊಂಡು ಮುತ್ತಿನ ಚೆಂಡಿನಿಂದ ಈವರೆಗೆ ಆಗಿರುವ ಅವಘಡವನ್ನು ಕುರಿತು ಹೇಳುತ್ತಾಳೆ.

ಆದರೆ ಕುಮಾರರಾಮ ಆಟವಾಡಲು ಆ ಚೆಂಡೇ ಬೇಕೆಂದು ಪಟ್ಟು ಹಿಡಿದಾಗ, ಅವಳು ತನ್ನೆದುರಿನಲ್ಲೇ ಚೆಂಡನ್ನು ಆಡುವಂತೆ ತಾಕೀತು ಮಾಡುತ್ತಾಳೆ. ಅದರಂತೆ ಕುಮಾರರಾಮ ಸ್ನೇಹಿತರೊಡಗೂಡಿ ಚೆಂಡಾಟವಾಡುವಾಗ ಅದು ಚಿಕ್ಕಮ್ಮ ರತ್ನೋಜಿ ಮನೆಯೊಳಗೆ ಬೀಳುತ್ತದೆ.

ಕುಮಾರ ರಾಮ ಅದನ್ನು ತರಲು ಹೋದಾಗ ಚಿಕ್ಕಮ್ಮ ರತ್ನೋಜಿ ಅವನನ್ನು ಕಾಮುಕ ದೃಷ್ಟಿಯಿಂದ ಕಾಣುತ್ತಾಳೆ.

ತನ್ನ ಇಷ್ಟವನ್ನು ನೆರವೇರಿಸುವಂತೆ ಕುಮಾರರಾಮನನ್ನು ಪರಿ ಪರಿಯಾಗಿ ಬೇಡುತ್ತಾಳೆ. ಪರನಾರಿಸೋದರನೆಂಬ ಬಿರುದನ್ನು ಹೊಂದಿದ್ದ ಕುಮಾರರಾಮ ಚಿಕ್ಕಮ್ಮನ ಮಾತನ್ನ ತಿರಸ್ಕರಿಸುತ್ತಾನೆ.

ಆಕೆ ಅನೈತಿಕ ಸಂಬಂಧ ನಡೆಸಲು ಮುನ್ನಡೆದಾಗ, ಕುಮಾರರಾಮ ತಾಯಿಯ ಸ್ಥಾನದಲ್ಲಿರುವ ಅವಳನ್ನು ತಿರಸ್ಕರಿಸಿದಾಗ ಇದರಿಂದ ರೊಚ್ಚಿಗೆದ್ದ ರತ್ನೋಜಿ ಕಂಪಿಲರಾಯನಿಗೆ(ಕುಮಾರರಾಮನ ತಂದೆಗೆ) ಇಲ್ಲಸಲ್ಲದ ದೂರನ್ನು ಹೇಳಿ ರಾಜನ ಕಿವಿಯೂದುತ್ತಾಳೆ. ಕಿರಿಯ ಪತ್ನಿಯ ಮಾತನ್ನು ನಂಬಿದ ಕಂಪಿಲರಾಯ ಕುಮಾರರಾಮನ ತಲೆ ತೆಗೆಯುವಂತೆ ಮಂತ್ರಿ ‘ಬೈಚಪ್ಪ’ನಿಗೆ ಆಜ್ಞಾಪಿಸುತ್ತಾನೆ.

ಬೈಚಪ್ಪ ಕುಮಾರರಾಮನನ್ನ ಬಚ್ಚಿಟ್ಟು ಅವನ ಬದಲಿಗೆ ಬೇರೊಬ್ಬನ ತಲೆ ಕಡಿದು ತಂದು ರಾಜನಿಗೆ ತೋರಿಸುತ್ತಾನೆ.

ಕುಮಾರರಾಮನು ಇಲ್ಲವೆಂಬ ಸುದ್ದಿ ದೆಹಲಿ ಸುಲ್ತಾನನಿಗೆ ತಿಳಿದು ಅವನು ‘ಕಮ್ಮಟದುರ್ಗ’ದ ಮೇಲೆ ದಂಡೆತ್ತಿ ಬರುತ್ತಾನೆ.

ಕಂಪಿಲರಾಯ ದೆಹಲಿಯ ಸುಲ್ತಾನನಿಗೆ ಸೋತು ಇನ್ನೇನು ಶರಣಾಗುವ ಸಂದರ್ಭದಲ್ಲಿ ಮಂತ್ರಿ ಬೈಚಪ್ಪ ಕುಮಾರರಾಮನನ್ನು ಹೊರಬಿಟ್ಟಾಗ ಅವನು ವೀರಾವೇಶದಿಂದ ಕಾದಾಡಿ ಸುಲ್ತಾನನ ಶತ್ರು ಸೇನೆಯನ್ನ ಬಡಿದೋಡಿಸಿದ್ದನಂತೆ.

ಕಂಪ್ಲಿಯು ಚಿಕ್ಕ ರಾಜ್ಯವಾಗಿದ್ದು ಇದರ ಪಕ್ಕದಲ್ಲಿ ಬಲಿಷ್ಠ ರಾಜರಾದ ವಾರಂಗಲ್ಲಿನ ಕಾಕತೀಯರು, ವೀರ ಬಲ್ಲಾಳದ ಹೊಯ್ಸಳರು, ಬಹುಮನಿ ಸುಲ್ತಾನರು ಹಾಗೂ ದೆಹಲಿಯ ಮಹಮದ್ ಬಿನ್ ತುಗಲಕ್ ಇವರುಗಳನ್ನು ಯುದ್ದದಲ್ಲಿ ಮಣಿಸಿದ್ದುದಕ್ಕೆ ಕುಮಾರರಾಮನನ್ನು ‘ಗಂಡುಗಲಿ ಕುಮಾರರಾಮ’ ಎಂದು ಕರೆಯುತ್ತಿದ್ದುದು.

ದೆಹಲಿಯ ತುಗಲಕ್‌ನ ಅಪಾರ ಸೇನೆಯನ್ನ ಕುಮಾರರಾಮನು 2 ಸಲ ಸೋಲಿಸಿ ಹಿಮ್ಮೆಟ್ಟಿಸಿದ್ದನಂತೆ.

ದೆಹಲಿ ಸುಲ್ತಾನನು ‘ಮಾತಂಗಿ’ ಎನ್ನುವವಳ ನೇತೃತ್ವದಲ್ಲಿ ಕಮ್ಮಟದುರ್ಗವನ್ನು ವಶಪಡಿಸಿಕೊಳ್ಳಲು ಅಪಾರ ಸೇನೆ ಕಳುಹಿಸುವನು. ಅದುವರೆಗೂ ಅಪ್ರತಿಮ ವೀರಾವೇಶದಿಂದ ಹೋರಾಡುತ್ತಿದ್ದ ಕುಮಾರರಾಮ ಮಾತಂಗಿ ಎದುರಾದಾಗ ಹೆಂಗಸಿನ ಮೇಲೆ ಕೈಯೆತ್ತುವುದು ತರವಲ್ಲವೆಂದು ತಟಸ್ಥನಾಗುತ್ತಾನೆ. ಆ ಸಮಯದಲ್ಲಿ ಮಾತಂಗಿ ಕುಮಾರರಾಮನನ್ನು ಸಂಹರಿಸಿ ಅವನ ರುಂಡವನ್ನು ದೆಹಲಿ ಸುಲ್ತಾನನಿಗೆ ಒಪ್ಪಿಸುತ್ತಾಳಂತೆ.

ಮೂರನೆಯ ಸಲ ನಡೆದ ಆ ಯುದ್ಧದಲ್ಲಿ ತುಘಲಕ್ 2 ಲಕ್ಷದಷ್ಟು ಸೇನೆಯನ್ನು ‘ಮಾತಂಗಿ’ ನೇತೃತ್ವದಲ್ಲಿ ಕಳಿದಿದ್ದಾಗ ವೀರಾವೇಶದಿಂದ ಹೋರಾಡಿ ಶತ್ರುಗಳ ಕುತಂತ್ರದಿಂದ ಯುದ್ಧದಲ್ಲಿ ಮಡಿದು ವೀರ ಸ್ವರ್ಗ ಹೊಂದುತ್ತಾನೆ ಕುಮಾರರಾಮ.

ಕುಮಾರಾಮನ ಸಾಹಸಗಾಥೆಯ ಮೇಲೆ ಕನ್ನಡದಲ್ಲಿ ‘ಗಂಡುಗಲಿ ಕುಮಾರರಾಮ’ ಎಂಬ ಚಿತ್ರವೂ ತೆರೆಕಂಡಿದೆ.

VIJAYANAGAR Empire in India. Extent of Vijayanagar Empire. Battle of Talikot.

ಮುಂದೆ 1336 ರಲ್ಲಿ ಪೂಜ್ಯ ಶ್ರೀ.ವಿದ್ಯಾರಣ್ಯರ ಸ್ಪೂರ್ತಿ ಮತ್ತು ಅನುಗ್ರಹ ಬಲದಿಂದ ಹರಿಹರ ಮತ್ತು ಬುಕ್ಕರಾಯರು ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ
ಹಾಕಿದರು. ಆಗ ಅವರ ರಾಜಧಾನಿ ‘ವಿದ್ಯಾನಗರ’ ವಾಗಿತ್ತು. ಶ್ರೀವಿದ್ಯಾರಣ್ಯರು ಶೃಂಗೇರಿ ಮಠದ 12 ನೇ ಗುರುಗಳಾಗಿದ್ದು ಇವರು ಸಹ ದಕ್ಷಿಣ ಭಾರತವನ್ನು ಮುಸ್ಲಿಂ ಸುಲ್ತಾನರ ದಾಳಿಗಳಿಂದ ರಕ್ಷಿಸುವ ಕನಸು ಕಂಡಿದ್ದರಂತೆ.

ಆದರೆ ಜಗತ್ತಿನ ಶ್ರೀಮಂತ ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಸಂಸ್ಥಾನವನ್ನೂ ಮುಸಲ್ಮಾನ ಆಕ್ರಮಣಕಾರರು ಮೋಸದಿಂದ 1565 ರಲ್ಲಿ ಸೋಲಿಸಿ ದಕ್ಷಿಣ ಭಾರತದ ಅತಿದೊಡ್ಡ ಸಾಮ್ರಾಜ್ಯವನ್ನ ತಮ್ಮ ಕೈವಶ ಮಾಡಿಕೊಂಡರು.

ಸ್ವಂತ ಬಲದ ಮೇಲೆ ಗೆಲ್ಲಲಾಗದ ಮುಸ್ಲಿಂ ಆಕ್ರಮಣಕಾರರು ಕುತಂತ್ರ, ಮೋಸದಿಂದಲೇ ಹಾಗು ನಮ್ಮ ಹಿಂದೂ ರಾಜರುಗಳಲ್ಲಿನ ಒಗ್ಗಟ್ಟಿನ ಕೊರತೆಯಿಂದ ನಮ್ಮನ್ನಾಳಿದ್ದು ಹೊರತು ನಮ್ಮ ರಾಜರುಗಳು ನಮ್ಮ ದೇಶವನ್ನ ಕಾಪಾಡುವಷ್ಟು ಅಸಮರ್ಥ ನಾಯಕರೇನೂ ಆಗಿರಲಿಲ್ಲ.

ಮುಸಲ್ಮಾನರು ಎಷ್ಟಿದ್ದರೂ ಮೋಸಗಾರರೇ ಅನ್ನೋದಕ್ಕೆ ಅಂದು ಕುಮಾರರಾಮನನ್ನ ನಂತರ ರಾಮರಾಯನನ್ನ ಮೋಸದಿಂದ ದೆಹಲಿ ಸುಲ್ತಾನ್ ಕೊಂದಿದ್ದೇ (ಈ ತರಹ ಕುತಂತ್ರ ಬುದ್ಧಿ ಉಪಯೋಗಿಸಿ ಯೇ ಈ ಮುಸಲ್ಮಾನರು ನಮ್ಮನ್ನಾಳಿದ್ದು) ಉದಾಹರಣೆ.

– Vinod Hindu Nationalist

Tags

Related Articles

Close