ಈ ಹಗರಣವೊಂದಿದೆಯಲ್ಲ?! ಅದು ಇಲ್ಲಿಯ ತನಕ, ಸತತ 70 ವರುಷಗಳ ಕಾಲ ಮಾಡಿದ ಹಗರಣಗಳಿಗಿಂತ ದೊಡ್ಡದು! ಹಗರಣಗಳ ಪಿತಾಮಹ ಎಂದುಬಿಟ್ಟರೆ ಬಹುಷಃ ಸರಿಯಾದೀತು! ಆ ಹಗರಣದ ಹೆಸರು ‘ಕೇಸರೀ ಭಯೋತ್ಪಾದನೆ!’!! ಪ್ರತಿ ರಾಷ್ಟ್ರದ ಸರಕಾರವೂ ಕೂಡ ತನ್ನ ಪ್ರಜೆಗಳನ್ನು ರಕ್ಷಿಸಲು ವಚನವಿತ್ತಿರುತ್ತದೆ! ಪ್ರತಿಯೊಬ್ಬ ನಿರಪರಾಧಿಯನ್ನು ರಕ್ಷಿಸುವ ಹೊಣೆ ಹೊತ್ತಿರುತ್ತದೆ! ಆದರೆ, ಸ್ವಾತಂತ್ರ್ಯಾನಂತರ ಭಾರತವನ್ನಾಳಿದ ಮೊದಲ ಪಕ್ಷವಾದ ಕಾಂಗ್ರೆಸ್ ಏನು ಮಾಡಿತ್ತು ಗೊತ್ತೇ?!
ಒಂಭತ್ತು ವರ್ಷಗಳ ಹಿಂದೆ ನಿರಂತರವಾಗಿ ಭಾರತದಲ್ಲಿ ನಾಲ್ಕು ಸ್ಫೋಟಕಗಳಾದವು! ಸಂಝೋತಾ ಹಾಗೂ ಮಾಲೇಗಾಂವ್ ಸ್ಫೋಟವಂತೂ ಭಾರತವನ್ನು
ಅಕ್ಷರಶಃ ಬೆಚ್ಚಿ ಬೀಳಿಸಿತ್ತು!! ಸಾಕಷ್ಟು ತನಿಖೆ ನಡೆಯಿತು! ದೇಶದುದ್ದಗಲಕ್ಕೂ ವಿಶೇಷ ತನಿಖಾ ತಂಡ ಅಲೆದಾಡಿ, ಕೊನೆಗೂ ಪಾಕಿಸ್ಥಾನದ ಉಗ್ರರ ನಂಟಿರುವುದರ ದಾಖಲೆ ಸಿಕ್ಕ ನಂತರ ತನಿಖೆಯ ವರದಿಗಳೆಲ್ಲ ಗೃಹ ಸಚಿವರ ಟೇಬಲ್ಲಿನ ಮೇಲೆ ಕುಳಿತಿತು! ಕಾಂಗ್ರೆಸ್ ಕೈವಾಡವಿದ್ದದ್ದನ್ನು ಬೊಟ್ಟು ಮಾಡಿ ತೋರುವಂತಿದ್ದ ದಾಖಲೆಗಳು ನಾಯಕರನ್ನು ಬೆಚ್ಚಿ ಬೀಳಿಸಿತು! ಬೇಡ! ಅಸೀಮಾನಂದರನ್ನು ಸಿಕ್ಕಿಸಿ, ಘಟಾನುಘಟಿ ಹಿಂದೂಗಳನ್ನು ತಗಲು ಹಾಕಿ ಎಂದಿತು ಸರಕಾರ!
ಹಾ! ಎರಡು ವರ್ಷದ ಹಿಂದಿನ ದಾಖಲೆಗಳನ್ನು ತೆಗೆದು ತಗಲು ಹಾಕಿ, ಸಾಧ್ವಿಯೆಂಬ ಕಾರಣಕ್ಕೆ ಸಿಕ್ಕಿದ್ದೇ ಸಾಕು ಎಂದು ಪ್ರಗ್ಯಾ ಸಿಂಗ್ ಳನ್ನು ಬಂಧಿಸಲಾಯಿತು! ಜೊತೆಗೆ ಕಾಂಗ್ರೆಸ್ ನ ಕುಮ್ಮಕ್ಕು ಗೊತ್ತಿದ್ದ ಲೆಫ್ಟಿನೆಂಟ್ ಪುರೋಹಿತ್ ನನ್ನೂ ಬಿಡಲಿಲ್ಲ ಕಾಂಗ್ರೆಸ್! ಒಂಭತ್ತು ಹಿಂದೂಗಳ ಮೇಲೆ ಆರೋಪ ಹೊರಿಸಿ ಜೈಕಿಗಟ್ಟಿದ ಕಾಂಗ್ರೆಸ್, ಪಾಕಿಸ್ಥಾನಿ ಉಗ್ರರನ್ನು ಸ್ವಚ್ಛಂದವಾಗಿ ತಿರುಗಲು ಅವಕಾಶ ಮಾಡಿಕೊಟ್ಟಿತು! ಆಗಲೊಂದು ಸೃಷ್ಟಿಯಾಯಿತು ನೋಡಿ! ‘ಕೇಸರೀ ಭಯೋತ್ಪಾದನೆ’ ಎಂಬ ಮಿಥ್ಯೆ! ತನ್ಮೂಲಕ, ಭಯೋತ್ಪಾದಕರ ಪೋಷಣೆಗೆ ನೀರೆರೆಯತೊಡಗಿತು ಕಾಂಗ್ರೆಸ್!
ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಪುರೋಹಿತ್ ಅವರ ಬದುಕನ್ನ ಮತ್ತೆ ಹಿಂತಿರುಗಿ ಕೊಡುವಷ್ಟು ಶಕ್ತರಿದ್ದಾರೆಯೇ?!
‘ Times Now’ ಬಿಡುಗಡೆಗೊಳಿಸಿದ ನಾರ್ಕೊ ಅನಾಲಿಸಿಸ್ ಸಾಕ್ಷಿಯೊಂದು ಕಾಂಗ್ರೆಸ್ ನನ್ನು ಬೀದಿಗೆ ತಂದು ನಿಲ್ಲಿಸಿತು! ಉಗ್ರತ್ವದ
ಹೆಸರಿನಲ್ಲಿ ಹಿಂದೂ ನಾಯಕರನ್ನು ಗುರಿ ಮಾಡಿದ ಅದ್ಭುತ ಚಾಣಾಕ್ಷತನವೊಂದು ಗೊತ್ತಾಗಿ ಹೋಯಿತು. ಮಾಲೇಗಾವ್ ಸ್ಫೋಟದ ಹೆಸರಿನಲ್ಲಿ ಮತ್ತದೇ ಉಗ್ರರನ್ನು ಕೈ ಬಿಟ್ಟು ಸಾಧ್ವಿ ಪ್ರಜ್ಞಾ ಸಿಂಗ್ ನನ್ನು ಒಳಗಟ್ಟಿತು ಕಾಂಗ್ರೆಸ್! ಆಕೆ ಬೆಂಕಿಯ ಚೆಂಡು! ವಿಚಾರಣೆಯ ನೆಪದಲ್ಲಿ ಆಕೆಯನ್ನದೆಷ್ಟು ಹಿಂಸಿಸಿತೆಂದರೆ ಕೊನೆಗೆ ಆಕೆಗೆ ಸ್ವಂತ ಕಾಲಿನ ಮೇಲೂ ನಿಲ್ಲಲಾಗಲಿಲ್ಲ! ಆಕೆಯನ್ನು ಆಹಾರ ನೀರು ಕೊಡದೇ 24 ದಿನ ಕೊಳೆ ಹಾಕಿದ್ದರು! ಚರ್ಮದ ಬೆಲ್ಟಿನಿಂದ ಬಡಿಯಲಾಗಿತ್ತು! ಆಕೆ ಸಾಧ್ವಿ! ಅಶ್ಲೀಲ ಭಾಷೆಗಳಿಂದ ಮಾನಸಿಕವಾಗಿಯೂ ಕುಗ್ಗಿಸಿದರು. ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಆಕೆಗೆ ಸರಿಯಾದ ವೈದ್ಯಕೀಯ ತಪಾಸಣೆಯೂ ಆಗಲಿಲ್ಲ! ಚಾರ್ಜ್ ಶೀಟ್ ಇಲ್ಲದೆಯೇ ಆಕೆಯನ್ನ ಒಂಭತ್ತು ವರ್ಷ ಕೂಡಿ ಹಾಕಿದ ಕಾಂಗ್ರೆಸ್ ಗೆ ‘ಇಶ್ರತ್ ಜಹಾನ್’ ಎಂಬ ಆತ್ಮಾಹುತಿ ಬಾಂಬ್ ರ್ ಳನ್ನು ಮಾತ್ರ ‘ಸಹೋದರಿ’ ಎಂದು ಕರೆದು ಸತ್ಕರಿಸಿತು!!!
#SamjhautaSecretTape 2: SIMI mastermind Safdar Nagori reveals who the masterminds are behind the Samjhauta attack pic.twitter.com/TaaKpUh9ks
— TIMES NOW (@TimesNow) July 24, 2017
ಕಾಲೋನೆಲ್ ಶ್ರೀಕಾಂತ್ ಪುರೋಹಿತ್ ಅಪ್ಪಟ ದೇಶಭಕ್ತ! ಎಲ್ಲಿ ತನ್ನ ಕುತಂತ್ರವೊಂದು ಸಮಾಜಕ್ಕೆ ಗೊತ್ತಾಗುವುದೋ ಎಂಬ ಭಯದಿಂದ ಕಾಂಗ್ರೆಸ್
ಅವರನ್ನೂ ‘ಉಗ್ರ’ನೆಂಬ ಪಟ್ಟಕಟ್ಟಿ ಜೈಲಿಗೆ ಕಳುಹಿಸಿತು. ಬಿಡಿ! ಪಾಕಿಸ್ಥಾನದ ಮಾನ ಮರ್ಯಾದೆಯ ಗುತ್ತಿಗೆಯನ್ನೂ ಕಾಂಗ್ರೆಸ್ ತೆಗೆದುಕೊಂಡಂತೆ ವರ್ತಿಸಿತು.
ತನ್ನದೇ ಸೇನೆಯ ತಂಡದವನೊಬ್ಬ ‘ಉಗ್ರ’ ಎಂಬ ಹಣೆಪಟ್ಟಿ ಹೊತ್ತಾಗ ಉಳಿದ ಸೈನಿಕರ ಮನಃಸ್ಥಿತಿ ಹೇಗಾಗಿರಬೇಡ?! ಪತ್ನಿಯೊಬ್ಬಳು ಸಮಾಜದೆದುರಿಗೆ ಅದೆಷ್ಟು ಬೆಂದಳು ಗೊತ್ತೇನು?! ಕಾಂಗ್ರೆಸ್ ಈ ಎಲ್ಲ ಕಳೆದು ಹೋದ ಮಾನಗಳನ್ನು ಮರ್ಯಾದೆಗಳನ್ನು ತಿರುಗಿ ಕೊಡಲು ಸಾಧ್ಯವಿದೆಯೇ?! ಮಾನಸಿಕವಾಗಿ ಕುಗ್ಗಿಸಿದ ಅವರೆಲ್ಲರ ದಿನಗಳನ್ನೂ ಮರಳಿ ಕೊಡಲು ಸಾಧ್ಯವಾಗದ ಕಾಂಗ್ರೆಸ್ ‘ಪಾಕಿಸ್ಥಾನೀ ಉಗ್ರ’ ರ ಶಿಕ್ಷೆಯನ್ನು ಕಡಿಮೆ ಮಾಡುವಂತೆ ಆಗ್ರಿಹಿಸಿತು!!!
ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸಬೇಕಿತ್ತು ಚುನಾವಣೆ ಆಯೋಗ!
ಚುನಾವಣೆ ಆಯೋಗಕ್ಕೆ ಒಂದು ಪಕ್ಷವನ್ನು ನಿಷೇಧಿಸುವ ಹಕ್ಕಿದ್ದರೂ ಏನೂ ಮಾಡಲಾಗದೇ ಕುಳಿತುಕೊಂಡಿತು. ತನ್ನ ಕುತಂತ್ರವನ್ನಡಗಿಸುವ ಸಲುವಾಗ ‘ಇಟಲಿ’ ತಲೆಯೊಂದು ಕೇಸರೀ ಭಯೋತ್ಪಾದನೆಯ ಹೆಸರಿನಲ್ಲಿ ಹಿಂದೂಗಳನ್ನು ಮಾನಸಿಕವಾಗಿ ಕೊಲೆಗೈದ ಪಾಪಕ್ಕೂ ಅದಕ್ಕೆ ಶಿಕ್ಷೆಯಾಗಲೇ ಇಲ್ಲ! ಒಬ್ಬ ಗೌರವಾನ್ವಿತ ಸೇನೆಯ ಅಧಿಕಾರಿಯನ್ನೂ ‘ಉಗ್ರ’ನೆಂದು ಪಟ್ಟ ಕಟ್ಟಿದ ಕಾಂಗ್ರೆಸ್ ನನ್ನು ಆಯೋಗ ಸುಮ್ಮನೆ ನೋಡುತ್ತಾ ಕುಳಿತಿತೇ ವಿನಃ ನಿಷೇಧಿಸುವ ಧೈರ್ಯವನ್ನೂ ತೋರಲಿಲ್ಲ.
ಅದೂ ಹೋಗಲಿ, ಸುಪ್ರೀಮ್ ಕೋರ್ಟೂ ಕೂಡ ಈ ಕಾಂಗ್ರೆಸ್ ನಾಯಕರನ್ನು ಬಂಧಿಸುವ ಪ್ರಯತ್ನ ಮಾಡಲಿಲ್ಲ. ‘ಯುವ ನಾಯಕ’ ಎಂದು ಬಿಂಬಿಸಿಕೊಂಡವನೂ ಕೂಡ ‘ನಾಯಕ’ನಾಗಿಯೇ ಉಳಿದು ಹೋಗುವ ದುರಂತಕ್ಕೆ ಇನ್ನ್ಯಾವ ಬೇರೆ ಹಾದಿಯಿರಬಹುದು?!
ಸಾಧ್ವಿಯ ತರಹ ಸೋನಿಯಾ ಗಾಂಧಿ ಕಳೆಯಬಹುದೇ ಜೈಲಿನಲ್ಲಿ ತನ್ನ ಬದುಕನ್ನು?!
ಸಾಧ್ಯವೇ ಇಲ್ಲ!!! ತನ್ನದೇ ಮಗಳಾದ ಪ್ರಿಯಾಂಕಾ ಗಾಂಧಿ ಹಾಗೂ ಆಕೆಯ ಪತಿರಾಯನನ್ನೂ ಬಂಧಿಸದೇ ಕೈ ಕಟ್ಟಿ ಕೂತ ನ್ಯಾಯಾಲಯವೊಂದು, ಕೋಟಿ ಗಟ್ಟಲೇ ಹಗರಣಗಳ ಧಣಿಯಾದ ಅವರಿಬ್ಬರನ್ನೂ ‘ತಿರುಗಲಿಕ್ಕೆ’ ಅವಕಾಶ ಮಾಡಿಕೊಟ್ಟಿದೆ! ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆಂದ ಕಾಂಗ್ರೆಸ್ ಕುಳಗಳೇ ಭ್ರಷ್ಟರಾಗಿರುವಾಗ ಇನ್ನೆಲ್ಲಿಯ ಅವಕಾಶ?!
ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಬೆಂಬಲಿಸಿ ಶಿಕ್ಷೆ ಕೊಟ್ಟಿದ್ದ ಸುಪ್ರೀಮ್ ಕೋರ್ಟೆಂಬ ಮಹಾ ನ್ಯಾಯಾಲಯವೊಂದು ಕಾಂಗ್ರೆಸ್ ನಾಯಕರನ್ನು ಸಾಕ್ಷ್ಯಾಧಾರವಿದ್ದರೂ ಬಂಧಿಸದಿರುವಷ್ಟು ದುರ್ಬಲವಾಯಿತೇ?!
‘ನಾನೊಬ್ಬಳು ಸನ್ಯಾಸಿ! ನನ್ನಲ್ಲಿರುವ ಮಹಾಭಾರತ ರಾಮಾಯಣಗಳ ಗ್ರಂಥಗಳನ್ನು ಬೆಂಕಿಗೆಸೆದರು! ಲೈಂಗಿಕ ಪ್ರಚೋದನೆಗಳುಳ್ಳ ನೀಲಿ ಚಿತ್ರಗಳನ್ನು ನೋಡುವಂತೆ ಒತ್ತಡ ಹೇರಲಾಗಿತ್ತು. ನನ್ನ ತಾಯಿಯನ್ನೂ ನನಗೆ ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ.!” ಸಾಧ್ವಿಯ ಹೇಳಿಕೆಗಳಿವು!
ಸಾಧ್ವಿ ಬಗ್ಗುವ ಹೆಣ್ಣಲ್ಲ!!!!
ಆಕೆಗದೆಷ್ಟೇ ಹಿಂಸೆ ನೀಡಿ ‘ಕೇಸರೀ ಭಯೋತ್ಪಾದನೆ’ ಎಂಬುದನ್ನು ಒಪ್ಪಿಕೋ ಎಂದರೂ ಆಕೆ ಬಗ್ಗಲೇ ಇಲ್ಲ! ಆಕೆ ಪಾರ್ಶ್ವ ಪೀಡಿತವಾದರೂ ಮೊನ್ನೆ ಮೊನ್ನೆಯಷ್ಟೇ ಜಾಮೀನು ದಕ್ಕಿಸಿಕೊಂಡು ಹೊರಬಂದ ಸಾಧ್ವಿ ಹೇಳಿದ್ದೇನು ಗೊತ್ತಿದೆಯೇ?!
‘ಪ್ರತಿಕ್ಷಣದ ನರಕದಲ್ಲಿ ನನಗೆ ಹಿಂದುತ್ವ ವೆಂಬುದು ಜ್ವಾಲೆಯಾಗಿ ಹೊರಹೊಮ್ಮುತ್ತಿತ್ತು! ಬದುಕಿನುದ್ದಕ್ಕೂ ಹಿಂದುತ್ವದ ಪರ ಕಾರ್ಯ ಮಾಡುತ್ತೇನೆ!”
ಕಾಲೊನೆಲ್ ಪುರೋಹಿತ್ ಕೂಡ ತಿರಸ್ಕರಿಸಿಬಿಟ್ಟರು! ಅಕಸ್ಮಾತ್, ಕೇಸರೀ ಭಯೋತ್ಪಾದನೆಯೆಂಬುದು ಒಪ್ಪಿಬಿಟ್ಟಿದ್ದರೆ, ಇವತ್ತು ಪ್ರತಿಯೊಬ್ಬ ಹಿಂದುವನ್ನೂ ಕೂಡ ‘ಭಯೋತ್ಪಾದಕ’ನೆಂದೇ ಬಿಂಬಿಸಲಾಗುತ್ತಿತ್ತು!
“ಮುಂಬೈ ಭಯೋತ್ಪಾದಕ ನಿಗ್ರಹ ದಳ ನನಗೆ ರಾಷ್ಟ್ರೀಯ ಸ್ವಯಂ ಸೇವಕರ ನಾಯಕರ ಹೆಸರನ್ನು ಸುಖಾ ಸುಮ್ಮನೆ ಬಳಸಿ ಹೇಳಿಕೆ ಕೊಡುವಂತೆ ಹಿಂಸಿಸಿತು. ನಾನು 24 ದಿನಗಳ ಕಾಲ ಆಹಾರವಿಲ್ಲದೆಯೇ ಜೀವ ಹಿಡಿದುಕೊಂಡಿರಬೇಕಾಯಿತು.ಪ್ರತಿದಿನದ ಹೊಡೆತದಿಂದ ನನ್ನ ದೇಹ ಜರ್ಝರಿತವಾಗಿ ಬಹಳಷ್ಟು ಭಾಗಗಳಲ್ಲಿ ಊದಿಕೊಂಡಿತು. ಕೈ ಗಂಟುಗಳ ಮೇಲೆ ಬಿದ್ದ ಹೊಡೆತದ ನೋವಿಗೂ ನಾನು ಸುಳ್ಳು ಹೇಳಲು ತಯಾರಿರಲಿಲ್ಲ.”
ದಿಗ್ವಿಜಯ್ ಸಿಂಗ್ ಎಂಬುವವನ ಬೆಂಬಲವೊಂದು ಒಬ್ಬ ಸಾಧ್ವಿಯನ್ನು ಅದೆಷ್ಟು ಮಟ್ಟಿಗೆ ಹಿಂಸಿಸಿತೆಂದರೆ ಭಾರತ ಕೂಡ ಆಕೆ ಜೀವಂತವಾಗಿ ಹೊರಬಹುದೆಂಬ ಆಸೆಯನ್ನೇ ಕೈಬಿಟ್ಟಿತು!
ಬಿಡಿ! ಆಕೆ ಸ್ತನ ಕ್ಯಾನ್ಸರ್ ನಿಂದ ಬಳಲುವಾಗಲೂ ಉಹೂಂ! ಯಾವ ವೈದ್ಯನೂ ಹತ್ತಿರ ಸುಳಿಯಲು ಕಾಂಗ್ರೆಸ್ ಬಿಡಲಿಲ್ಲ! ಸಾಧ್ವಿಯೆಂಬ ಸರಸ್ವತಿಗೆ ಸ್ವತಃ ಹಿಂದೂಸ್ಥಾನದಲ್ಲಿ ಬೇಡಿ ಹಾಕಿದ್ದೆವು! ದೇಶ ಕಾಯುವ ಸೈನಿಕನಿಗೆ, ಅದೆಷ್ಟೋ ಉಗ್ರ ಚಟುವಟಿಕೆಗಳ ಪ್ರಾಣ ಒತ್ತೆ ಇಟ್ಟು ಅಧ್ಯಯನ ಮಾಡಿದ್ದ ಒಬ್ಬ ಯೋಧನನ್ನೇ ಉಗ್ರ ಎಂದು ಜೈಲಿಗಟ್ಟಿದೆವು! ಸ್ವಾಮಿ ಅಸೀಮಾನಂದರನ್ನೂ ಬಿಡದ ನಮಗೆ ‘ಕೇಸರೀ ಭಯೋತ್ಪಾದನೆ’ ಯೆಂಬ ಮಿಥ್ಯೆಯೊಂದು ತಲೆಗೆ ಹೊಕ್ಕಿಬಿಟ್ಟಿತ್ತು!
ಅಲ್ಲಿಂದ ಪ್ರಾರಂಭವಾಯಿತು! ಭಯೋತ್ಪಾದನೆಗೆ ಧರ್ಮವಿಲ್ಲ ಎಂಬ ಅರೆಕಾಲಿಕ ಅರ್ಧಸತ್ಯವೊಂದು!
ಈಗ ಹೇಳಿ!
ದಿಗ್ವಿಜಯ್ ಸಿಂಗ್ ಗೆ ಯಾವ ಶಿಕ್ಷೆಯನ್ನು ನೀಡಬಹುದು?! ಕಾಂಗ್ರೆಸ್ ನಾಯಕರುಗಳೆಲ್ಲ ಶಿಕ್ಷೆಯಿಲ್ಲದೇ ಸ್ವಚ್ಛಂಧವಾಗಿ ತಿರುಗುವಾಗ ಯಾವ ನ್ಯಾಯಾಲಯವೂ ಧೈರ್ಯ ತೋರಲೇ ಇಲ್ಲ! ಇಷ್ಟು ವರ್ಷಗಳ ಹಗರಣಗಳಿಗೆ ಶಿಕ್ಷೆಯೇ ಇಲ್ಲದಿರುವ ನ್ಯಾಯಾಲಯಗಳ ದುರ್ಬಲತನವೊಂದು ಭಾರತದ ದುರಂತ!
ಅಯ್ಯೋ! ಇವತ್ತಿಗೂ ಸಹ ಅದೆಷ್ಟೋ ಹಿಂದುಗಳ ಹಿಂಸೆ ನಡೆದರೂ ಬಾಯಿ ಮುಚ್ಚಿ ಕೂತ ಓ ಹಿಂದೂಗಳೇ! ಎಲ್ಲಾ ಧರ್ಮವೂ ಒಂದೇ ಎಂದಿರಲ್ಲ?! ಧರ್ಮಕ್ಕೆ
ಭಯೋತ್ಪಾದನೆ ಇಲ್ಲವೆಂದಿರಲ್ಲ?! ಅದಾವುದೋ ಇಂದಿರಾಳನ್ನು ಗೌರವದಿಂದ ಕಾಣಿ ಎಂದಿರಲ್ಲ?! ಅದಾವುದೋ ಕಸಬ್, ಅಫ್ಜಲ್ ನಿಗೆ ಕ್ಷಮೆ ನೀಡಿ ಎಂದಿರಲ್ಲ?!
ನಿರಪರಾಧಿ ಸಾಧ್ವಿಗಾದ ಅನ್ಯಾಯವನ್ನು ಸರಿದೂಗಿಸಿಕೊಡುವಿರಾ?! ನನ್ನ ದೇಶದ ಯೋಧನನ್ನು ಭಯೋತ್ಪಾದಕನೆಂದು ಮಾನಸಿಕವಾಗಿ ಹಿಂಸಿಸಿದ್ದಕ್ಕೆ ನ್ಯಾಯ
ಒದಗಿಸಿಕೊಡುವಿರಾ?!
– ತಪಸ್ವಿ