ಪ್ರಚಲಿತ

ಡಿಕೆಶಿ ಮನೆ ಆದಾಯ ತೆರಿಗೆ ದಾಳಿ ನಡೆಯತ್ತಿರುವಾಗಲೇ ಯಾರನ್ನು ಹೆಸರಿಸದೇ ರಮ್ಯ “ಕೊಲೆಗಡುಕ ನಾಯಕ” ಅಂದದ್ದು ಯಾರಿಗೆ ?

ಸದಾ ಎನಾದರೂ ಕಿರಿಕಿರಿ ಮಾಡುತ್ತಾ ಸಮಸ್ಯೆಗಳನ್ನು ತಲೆ ಮೇಲೆ ಎಳೆದುಕೊಳ್ಳವ ಪಾಕಿಸ್ತಾನ ಪ್ರೇಮಿ, ಮಾಜಿ ಸಂಸದೆ ರಮ್ಯ ಡಿಕೆಶಿ ವಿಚಾರದಲ್ಲಿ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ

ಕಳೆದ 72 ಗಂಟೆಗಳಿಂದ ಕಾಂಗ್ರೆಸಿನ ಬಲಿಷ್ಟ ನಾಯಕ ಇಂಧನ ಸಚಿವ ಡಿಕೆಶಿ ಮನೆಯಲ್ಲಿ ಐಟಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ರಾಜ್ಯದಿಂದ ಹಿಡಿದು ದೇಶದ ಎಲ್ಲಾ ಮಾಧ್ಯಮಗಳಲ್ಲೂ ಡಿಕೆಶಿದೇ ಸುದ್ದಿ.

ಅಂತಹುದರಲ್ಲಿ ಕಾಂಗ್ರೆಸಿನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಎನೂ ಮಾತನಾಡದೇ ಇರುವುದು ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸೂಚಿಸುತ್ತದೆ
ಕರ್ನಾಟಕದ ಎಲ್ಲ ಕಾಂಗ್ರೆಸ್ ನಾಯಕರು ರಸ್ತೆಗೆ ಬಂದು, ದಾಳಿ ಬಗ್ಗೆ ಹೋರಾಡುವಾಗಲೂ ರಮ್ಯನ ಕಾಣೆಯ ಬಗ್ಗೆ ಚರ್ಚೆಯಾಗಿದೆ. ಬೇಡದ ವಿಷಯಗಳಿಗೆ ಟ್ವೀಟ್ ಮಾಡಿ ಸಮಸ್ಯೆ ಸೃಷ್ಟಿಸುವ ರಮ್ಯ ಈಗ ಸುಮ್ಮನಿರುವುದು ಡಿಕೆಶಿ ಅಭಿಮಾನಿಗಳನ್ನು ಕೆರಳಿಸಿದೆ.

ಈ ಮೌನದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಚದುರಂಗದಾಟದ ಒಂದು ಸೈನಿಕಳಾಗಿರಬಹದೇ? ಅಥವ ಒಬ್ಬ ಒಕ್ಕಲಿಗ ನಾಯಕನ ಜನಪ್ರಿಯತೆ ಕಡಿಮೆಯಾದರೆ ತನಗೆ ವೈಯಕ್ತಿಕ ಲಾಭ ಅನ್ನುವ ದೂರಾಲೋಚನೆಯೇ? ಎಂದು ಡಿಕೆಶಿ ಅಭಿಮಾನಿ ಬಳಗದಲ್ಲಿ ಚರ್ಚೆಗಳು.

ನಿನ್ನೆ ಯಾರನ್ನು ಹೆಸರಿಸದೇ “ಕೊಲೆಗಡುಕ ನಾಯಕ” ಅಂತ ಟ್ವೀಟ್ ಮಾಡಿದ್ದು ಬೆಂಕಿ ಮೇಲೆ ತುಪ್ಪ ಸುರಿದ ಹಾಗಿದೆ. ಇದುವರೆಗೆ ಎಲ್ಲ ಮೀಡಿಯಗಳು “ಗೂಂಡಾ” “ಭ್ರಷ್ಟ” ಅಂದಿವೆಯೇ ಹೊರತು “ಕೊಲೆಗಡುಕ” ಅಂದಿಲ್ಲ ಹಾಗದರೆ ರಮ್ಯ ಪರೋಕ್ಷವಾಗಿ ಕೊಲೆಗಡುಕ ನಾಯಕ ಎಂದು ಟಾಂಗ್ ಕೊಟ್ಟಿದ್ದೇಕೇ?
ಎನೋ ರಮ್ಯಳ ಇತ್ತೀಚಿನ ಎಲ್ಲ ನಡವಳಿಕೆ ಗೊಂದಲಕ್ಕೀಡು ಮಾಡಿಕೊಟ್ಟಿದೆ
ಮಂಡ್ಯದಲ್ಲಿ ಮನೆ ಮಾಡಿ ಇಲ್ಲೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೆನೆ ಎಂದ ರಮ್ಯ ಮಂಡ್ಯ ಕಡೆ ತಲೆ ಹಾಕಿ ಎರಡು ತಿಂಗಳೇ ಕಳೆದಿವೆ.
ಈಗೆನಿದ್ದರೂ ದೆಹಲಿವಾಸ..ಮುಂಚೂಣಿ ನಾಯಕರ ಸಹವಾಸ.

Tags

Related Articles

Close