ಅಂಕಣ

ಭಾರತದ ಮಾಜಿ ಪ್ರಧಾನಿಗಳ ಪ್ರಮಾದದ ಬಗ್ಗೆ ಟೀಕೆಗಳ ಸುರಿಮಳೆ!!!

ವಂಶಪಾರಂಪರ್ಯದ ರಾಜಕೀಯ ವ್ಯವಸ್ಥೆಯ ಬಗ್ಗೆ ಎಷ್ಟು ತಿಳಿದುಕೊಂಡರು ಕಡಿಮೆಯೇ!! ಯಾಕೆಂದರೆ ಪ್ರತಿಯೊಂದು ಆಯಾಮಗಳನ್ನು ನೋಡುವಾಗಲು ತಪ್ಪು ಒಪ್ಪಿನ ಪ್ರಶ್ನೆಗಳು ಕಾಡುತ್ತಾ ಹೋಗುತ್ತೆ. ಆದರೆ ನೆಹರು ಯುಗವನ್ನು ಮತ್ತೆ ಮೆಲುಕು ಹಾಕುವುದಾದರೆ, ಲುಟ್ಯುನ್ಸ್ ಮೀಡಿಯಾ ಮತ್ತು ಕೆಲ ಬುದ್ದಿಜೀವಿಗಳು ಜವಾಹರಲಾಲ್ ನೆಹರೂ ಅವರನ್ನು ತಮ್ಮ ನೆಚ್ಚಿನ ಐಕಾನ್ ಎಂದು ವ್ಯಾಖ್ಯಾನಿಸುತ್ತಾರೆ!! ಸ್ವಾತಂತ್ರ್ಯ ಕಾಲದಿಂದ ಶುರುವಾಗಿ ಪ್ರಸ್ತುತ ದಿನಗಳವರೆಗೆ ಭಾರತದ ಮಹಾನ್ ಪ್ರಜಾಪ್ರಭುತ್ವವಾದಿ ಮತ್ತು ಮಹಾತ್ಮ ಗಾಂಧಿಯವರ ನೆಚ್ಚಿನ ಶಿಷ್ಯ ಎನ್ನುವುದನ್ನು ಸತತವಾಗಿ ಪ್ರಚಾರ ಮಾಡಿದ್ದಾರೆ.

ಆದರೆ ಮಾಜಿ ಪ್ರಧಾನಿಗಳ ಪ್ರಮಾದಗಳ ಚಿತ್ರಣಗಳ ಬಗ್ಗೆ ಟೀಕೆಗಳ ಸುರಿಮಳೆಯನ್ನು ನೀವು ಕೇಳಿರಬಹುದು. ಅದರಲ್ಲಿ ಇಂದಿರಾಗಾಂಧಿಯವರು ತಮ್ಮ ಕರ್ತವ್ಯವನ್ನು ನಿಭಾಯಿಸುವುದರೊಂದಿಗೆ ಸ್ವಲ್ಪಮಟ್ಟಿನ ಟೀಕೆಗಳಿಗೂ ಗುರಿಯಾಗಿದ್ದಾರೆ!! ಅಷ್ಟೇ ಅಲ್ಲದೇ, ಮುಖ್ಯವಾಹಿನಿ ಮಾಧ್ಯಮಗಳ ಮೇಲೆ ತುರ್ತುಪರಿಸ್ಥಿತಿಯನ್ನು ತಂದಿರುವ ಬಗ್ಗೆ ಎಲ್ಲೆಡೆ ಟೀಕೆಗೆ ಒಳಗಾಗಿದ್ದರು ಇಂದಿರಾ ಗಾಂಧಿ!! ಇವರಷ್ಟೇ ಅಲ್ಲದೇ, ರಾಜೀವ್ ಗಾಂಧಿ ಸಿಖ್ ನರಮೇಧದ ವಿಚಾರವಾಗಿ ಟೀಕೆಗೆ ಒಳಗಾಗಿದ್ದರು ಆದರೆ ನೆಹರೂ ಮಾತ್ರ ಭಾರತೀಯ ರಾಜಕೀಯದ ಪವಿತ್ರವಾದ ಹಸು ಎನ್ನುವ ಹೆಸರನ್ನು ಪಡೆದುಕೊಂಡಿರುವುದು ಮಾತ್ರ ವಿಪರ್ಯಾಸ!!

ಆದರೆ ನಮ್ಮ ದೇಶವು ಅತೀದೊಡ್ಡ ಐತಿಹಾಸಿಕ ಸುಳ್ಳನ್ನು ಸೃಷ್ಟಿಸಿದ್ದು, ಜವಾಹರಲಾಲ್ ನೆಹರೂ ಹೇಗೆ ಪ್ರಜಾಪ್ರಭುತ್ವವಾದಿಯಾಗಿದ್ದರು ಎನ್ನುವ ಐತಿಹಾಸಿಕ
ಒಳತಿರುಳುಗಳನ್ನು ಬಹಿರಂಗ ಪಡಿಸುವಲ್ಲಿ ಸಣ್ಣ ಪ್ರಯತ್ನ ಇದು!! ಹಾಗಾಗಿ ತನ್ನ ವಂಶ ರಾಜಕೀಯವನ್ನು ಬೆಳೆಸುವಲ್ಲಿ ನೆಹರೂ ಅವರು ಮಾಡಿದ ಉಪಾಯ
ಅಷ್ಟಿಷ್ಟಲ್ಲ. ಆದರೆ ತನ್ನ ಸ್ವಾರ್ಥರಾಜಕೀಯಕ್ಕೆ ಇಡೀ ದೇಶವನ್ನೇ ಪಣವಾಗಿಟ್ಟಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಯೂ ಇಲ್ಲಿ ಮೂಡುತ್ತೆ!!

ಜವಹರಲಾಲ್ ನೆಹರೂ ಅವರು ಎಲ್ಲರ ಒಮ್ಮತದ ಆಧಾರದ ಮೇಲೆ ನಿರ್ಧಾರಗಳನ್ನು ಮಾಡುವ ವ್ಯಕ್ತಿ ಎಂದು ಹೇಳಲಾಗುತ್ತದೆ. ಆದರೆ ಇತಿಹಾಸವು,
ಸಂಪೂರ್ಣವಾಗಿ ವಿಭಿನ್ನ ಕಥೆಯನ್ನು ಹೇಳುತ್ತದೆ!! ನೆಹರು ತಮ್ಮ ಉದ್ದೇಶಗಳ ಪ್ರಕಾರವೇ ಸರಕಾರದ ವ್ಯವಹಾರಗಳನ್ನು ನಡೆಸುತ್ತಿದ್ದರು ಮಾತ್ರವಲ್ಲದೇ ಇವರಿಗಿಂತ ಹಿರಿಯರು ಹೇಳಿದ ಸಲಹೆಗಳನ್ನು ನಿರಾಕರಿಸುತ್ತಿದ್ದ ವ್ಯಕ್ತಿ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ, ಕಾಶ್ಮೀರದ ವಿಚಾರವನ್ನು ಸಚಿವ ಸಂಪುಟದಲ್ಲಿ ಮಾತುಕತೆ ನಡೆಸದೇ ಯುನೈಟೆಡ್ ನೇಷನ್ಸ್‍ಗೆ ತೆಗೆದುಕೊಂಡು ಹೋಗಿದ್ದರು!! ಕಾಶ್ಮೀರ ವಿಚಾರದ ಬಗ್ಗೆ ತಮ್ಮ ಸಚಿವ ಸಂಪುಟದ ಸಹೋದ್ಯೊಗಿಗಳೊಂದಿಗೆ ಚರ್ಚಿಸದೇ, ತನ್ನ ಸರ್ವಾಧಿಕಾರವನ್ನು ತೋರಿದ್ದಾರೆ ಜವಾಹರಲಾಲ್ ನೆಹರು!!

ಅಷ್ಟೇ ಅಲ್ಲದೇ ಜವಾಹರಲಾಲ್ ನೆಹರು ಅವರ ಕ್ಯಾಬಿನೆಟ್ ಮಂತ್ರಿಗಳು, ತಮ್ಮಲ್ಲಿ ಅಧಿಕಾರವಿದ್ದರೂ ಕೂಡ ಯಾವುದೇ ರೀತಿಯ ಸ್ವಾಯುತ್ತತೆಯನ್ನು
ಅನುಭವಿಸಲಿಲ್ಲ!! ಯಾಕೆಂದರೆ ನೆಹರೂ ನಿರಂತರವಾಗಿ ತಮ್ಮ ಕ್ಯಾಬಿನೆಟ್ ಮಂತ್ರಿಗಳ ವ್ಯವಹಾರಗಳಲ್ಲಿ ಮಧ್ಯಪ್ರವೇಶವನ್ನು ಮಾಡುತ್ತಿದ್ದು, ಎಲ್ಲ ವಿಚಾರಕ್ಕೂ
ತಡೆಯಾಗುತ್ತಿದ್ದರು!! ಹಾಗಾಗಿ ಡಿಸೆಂಬರ್ 1947ರ ಸಂದರ್ಭದಲ್ಲಿ ಸರ್ದಾರ್ ಪಟೇಲ್, ಭಾರತದ ಗೃಹ ಸಚಿವ ಹಾಗೂ ನೆಹರೂ ನಡುವೆಯೂ ಉದ್ವಿಗ್ನ
ಪರಿಸ್ಥಿತಿಯನ್ನು ಉಂಟು ಮಾಡಿತ್ತು!! ಒಂದು ಬಾರಿ ಮೌಂಟ್‍ಬ್ಯಾಟನ್ ಅವರು, ಜವಾಹರಲಾಲ್ ನೆಹರುಗೆ ವಿನ್ಸ್ಟನ್ ಚರ್ಚಿಲ್, “ತಮ್ಮ ದಿನಗಳಲ್ಲಿ ಯಾವುದೇ ರೀತಿಯ ಒರಟಾದ ಮಾಹಿತಿಗಳನ್ನು ನೀಡಲು, ತಮ್ಮ ಮಂತ್ರಿಗಳೊಂದಿಗೆ ನೆಹರೂ ಅವರ ರೀತಿ ಧೈರ್ಯಮಾಡಲಿಲ್ಲ ಎಂದು ಹೇಳಿದ್ದರು”!! (Source: Brown, Judith M., Nehru: A Political Life, 2003, p-180).

ನೆಹರು ಅವರಿಗೆ ತನ್ನ ದೇಶದ ಸುಭಿಕ್ಷೆಗಿಂತ ಪರ ದೇಶಗಳ ಸ್ನೇಹಕ್ಕೆ ಹೆಚ್ಚು ಬೆಲೆ ನೀಡುತ್ತಿದ್ದಂತಹ ವ್ಯಕ್ತಿ ಎಂದರೆ ತಪ್ಪಾಗಲಾರರಯ!!!! ಯಾಕೆಂದರೆ, ಚೀನಾ
ಯುದ್ದದ ಕೊನೆಯಲ್ಲಿ ಸೈನೋ-ಇಂಡಿಯನ್ ಸ್ನೇಹಕ್ಕಾಗಿ, ಯುದ್ದದ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಹಾಗೂ ಭಾರತದ ಮೊದಲ ರಾಷ್ಟ್ರಪತಿಗಳಾದ ರಾಜೇಂದ್ರ ಪ್ರಸಾದ್ ಅವರು ನೀಡಿದ ಸಲಹೆಗಳನ್ನು ಮತ್ತು ಬುದ್ದಿವಂತ ಎಚ್ಚರಿಕೆಯ ಮಾತುಗಳನ್ನು ಕಡೆಗಣಿಸಿದ್ದಲ್ಲದೇ ಸೈನೋ-ಇಂಡಿಯಾ ಯುದ್ದಕ್ಕೆ ದಾರಿ ಮಾಡಿಕೊಟ್ಟಿದ್ದರು ಜವಹರಲಾಲ್ ನೆಹರು!! ಆ ಸಂದರ್ಭದಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರಜಾಪ್ರಭುತ್ವ ಸರಕಾರವನ್ನು ಹೇಗೆ ಚಲಾಯಿಸಬೇಕು ಎಂಬುದರ ಬಗ್ಗೆ ತಿಳುವಳಿಕೆಯಿಲ್ಲದ ನಿರ್ವಾಹಕರಂತೆ ಕಾಣಿಸಿಕೊಂಡಿದ್ದು ಮಾತ್ರ ನಿಜ!!!!

ಪಕ್ಷದ ವ್ಯವಹಾರಗಳು:

ಜವಾಹರಲಾಲ್ ನೆಹರು ಅವರು ಸರಕಾರ ಮಾಡಿದ ವಿಶಾಲ ನೀತಿಯ ನಿರ್ಧಾರಗಳಿಗೆ ಕಿಂಚಿತ್ತೂ ಬೆಲೆ ಕೊಡದೇ, ತನ್ನ ಪಕ್ಷವನ್ನು ತಾನೇ ಸಂಘಟಿಸಿದ್ದಲ್ಲದೇ, ತನ್ನ ಸಾಮ್ರಾಜ್ಯವನ್ನು ಸ್ಥಾಪಿಸುವುದಕ್ಕೆ ಅಡಿಪಾಯವನ್ನು ಹಾಕಿದ್ದರು!!!. ಅಲ್ಲದೇ, ವಾಸ್ತವಗಾಗಿ, ನೆಹರು ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಕಡೆಗಣಿಸುವಲ್ಲಿ ನಿಸ್ಸೀಮರಾಗಿದ್ದರು ಅಲ್ಲದೇ, ಪ್ರಮುಖ ಪಕ್ಷದ ಸ್ಥಾನಗಳಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದರು!!! ಆರಂಭದಲ್ಲಿ ಸರ್ದಾರ್ ಪಟೇಲ್‍ರು ಪಕ್ಷದ ಮುಖ್ಯಸ್ಥರನ್ನು ನೇಮಕ ಮಾಡಲು ಪುರುಷೊತ್ತಮ್ ದಾಸ್ ಟಂಡನ್ ಅವರಿಗೆ ಸಹಾಯ ಮಾಡಿದ್ದರು ಕೂಡ ನೆಹರು ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ ಸರ್ದಾರ್‍ಪಟೇಲರು ನಿಧರಾದ ಬೆನ್ನಲ್ಲೇ ನೆಹರು ಅವರು 1952ರ ಚುನಾವಣೆಯ ಸಂದರ್ಭದಲ್ಲಿ ಪ್ರಬಲ ನಾಯಕರನ್ನು ಪಕ್ಷದಿಂದ ಹೊರಗಟ್ಟಿದರು!!

ಟಂಡನ್ ಪಕ್ಷದಿಂದ ದೂರ ಉಳಿದಿದ್ದಾಗ ಜನಾಹರಲಾಲ್‍ನೆಹರು ಪಕ್ಷದ ವ್ಯವಹಾರಗಳನ್ನು ತನ್ನ ಕೈಗೆ ತೆಗೆದುಕೊಂಡರು. ಪ್ರಬಲ ನಾಯಕನ ಕೊರತೆಯಿಂದಾಗಿ
ಪಕ್ಷವನ್ನು ಅನಾರೋಗ್ಯಕರ ಬೆಳವಣಿಗೆಯತ್ತ ತರುವಲ್ಲಿ ಕಾರಣಕರ್ತರಾದರು. ನೆಹರು ತನ್ನ ಪಕ್ಷದಲ್ಲಿ ಯಾವುದೇ ರೀತಿಯ ಪ್ರಬಲ ನಾಯಕರನ್ನು ಹುಟ್ಟಿಕೊಳ್ಳಲು
ಬಿಡುತ್ತಿರಲಿಲ್ಲ ಅಲ್ಲದೇ ಇವರು ಯಾವತ್ತು ಬಯಸಿದ್ದೇ ಇಲ್ಲ ಎಂಬುವುದು ಆಶ್ಚರ್ಯಕರ ಸಂಗತಿ!!! ಯಾಕೆಂದರೆ ಎಲ್ಲಾ ಅಧಿಕಾರವನ್ನು ತನ್ನ ಸೀಮಿತದಲ್ಲಿ
ಇಟ್ಟುಕೊಂಡು ತಮಗೆ ಬೇಕಾದ ರೀತಿ ಬಳಸಿಕೊಳ್ಳುತ್ತಿದ್ದರು ಎನ್ನುವುದು ತಿಳಿದು ಬರುತ್ತೆ. ಅಷ್ಟೇ ಅಲ್ಲದೇ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕವೂ
ರಬ್ಬರ್ ಸ್ಟಾಂಪ್‍ಗಳು ಇವರದ್ದೇ ಆಗಿತ್ತು ಹಾಗೂ ಈ ಬಗ್ಗೆ ಯಾರೋ ಹೆಚ್ಚಿನ ಅಧಿಕಾರವನ್ನು ಹೊಂದಿಲ್ಲ ಎಂದು ಖಚಿತಪಡಿಸಿದ್ದರು.

ಆದರೆ ಇದು ಅಚ್ಚರಿಯ ವಿಷಯವಲ್ಲ!!! ಯಾಕೆಂದರೆ ನಿಷ್ಠಾವಂತರಾಗಿದ್ದ ನೀಲಮ್ ಸಂಜೀವ ರೆಡ್ಡಿ(1960-63ರ ಕಾಂಗ್ರೆಸ್ ಅಧ್ಯಕ್ಷರು) ಗಮನಿಸಿರುವ ಪ್ರಕಾರ,
ಒಂದು ರಾಜ್ಯದಲ್ಲಿ ಜೂನಿಯರ್ ಮಂತ್ರಿತ್ವವು ಕಾಂಗ್ರೆಸ್‍ನ ಅಧ್ಯಕ್ಷತೆಯ ಹುದ್ದೆಗಿಂತ ಮೇಲಾಗಿ ಕಂಡಿದೆ. ಅಲ್ಲದೇ, ಆ ಸಂದರ್ಭದಲ್ಲಿ ಸಂಜೀವರೆಡ್ಡಿಯವರು ಶ್ರೀಮತಿ ಇಂದಿರಾ ಗಾಂಧಿಯವರ ಜವಾವನಂತೆ ಅವರನ್ನು ಅವರೇ ಪರಿಗಣಿಸಿದ್ದರು!! (Source: Brecher Michael, Succession in India: A
study in decision making, Oxford University Press, p-131).

ಸದ್ಯದ ಕಾಂಗ್ರೆಸ್ ಪಕ್ಷವು ಉತ್ತರಾಧಿಕಾರಿಯ ನೇತೃತ್ವದಲ್ಲಿ ಪಕ್ಷವನ್ನು ಮುನ್ನಡೆಸುತ್ತಿದೆ ಎಂದರೆ ಇದಕ್ಕೆಲ್ಲಾ ಕಾರಣವಾಗಿದ್ದೇ ಭಾರತದ ಮೊದಲ ಪ್ರಧಾನ
ಮಂತ್ರಿಯವರಿಂದ ಎಂದು ಹೇಳಬಹುದು!! ರಾಜಕೀಯ ಸಂಘಟನೆ ಮತ್ತು ಪಕ್ಷದ ಕೂಟಗಳು ಸಂಸತ್ತಿಗೆ ಸಂಬಂಧಿಸಿದ ಪ್ರಜಾಪ್ರಭುತ್ವದ ಕೇಂದ್ರಬಿಂದುವಾಗಿದೆ. ಈ ಪ್ರಮುಖ ಸಂಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ಜವಾಹರಲಾಲ್ ನೆಹರು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ದೊಡ್ಡ ಅನ್ಯಾಯವನ್ನು ಮಾಡಿದರು ಎಂದರೆ ತಪ್ಪಗಾಲಾರದು!!

ರಾಜವಂಶದ ರಾಜಕೀಯ:

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಎಷ್ಟೂ ಬೇಕಾದರು ದೂಷಿಸಿ. ಆದರೆ ಜವಾಹರಲಾಲ್ ನೆಹರೂ ಅವರ ರಾಜಕೀಯ ಪರಂಪರೆಯಿಂದ ಪಡೆದ ಪಕ್ಷವನ್ನು ಬಲಪಡಿಸಿದರು ಎಂದರೆ ಅದನ್ನು ನಿರಾಕರಿಸಲಾಗುವುದಿಲ್ಲ!! ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮುಂಚಿತವಾಗಿ ಅಂದರೆ 1929ರಲ್ಲಿ ತನ್ನ ತಂದೆಯ ನಂತರ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಹೀಗಾಗಿ ರಾಜವಂಶದ ಬೀಜವನ್ನು ನಲುವತ್ತನೇ ವಯಸ್ಸಿನಲ್ಲಿ ಜವಾಹರ್ ಭಿತ್ತಿದ್ದರು!!! ಇದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಜವಂಶದ ಆಡಳಿತವನ್ನು ನಡೆಸಿಕೊಂಡು ಹೋಗಿದೆ. ಯಾಕೆಂದರೆ 1946ರ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ತನ್ನ ಸಾಮ್ರಾಜ್ಯವನ್ನು ಕಟ್ಟಲು ಆರಂಭಿಸಿದರು!!! 1931ರ ಕರಾಚಿ ಅಧಿವೇಶನದಲ್ಲಿ ಪಟೇಲ್ ಅಧ್ಯಕ್ಷತೆ ವಹಿಸಿದ್ದರು ಅಲ್ಲದೇ, ಹೆಚ್ಚಿನ ರಾಜಕೀಯ ಅನುಭವವನ್ನು ಹೊಂದಿದ್ದರಿಂದ ಸರ್ದಾರ್ ಅವರನ್ನು ಕಾಂಗ್ರೆಸ್‍ನ ಅಧ್ಯಕ್ಷರಾಗಿ ನೇಮಿಸಲಾಯಿತು. ಇದಲ್ಲದೇ ಬಹುಪಾಲು ಕಾಂಗ್ರೆಸ್ ಸಮಿತಿಗಳು ಸರ್ದಾರ್ ಪಟೇಲ್ ಅವರಿಗೆ ಬೆಂಬಲವನ್ನು ಸೂಚಿಸಿದ್ದರು. ಆದರೆ ಜವಾಹರಲಾಲ್ ನೆಹರೂ ತನ್ನ ರಾಜಕೀಯ ಪರಂಪರೆಯನ್ನು ಅನುಭವಿಸಲು ಮುಂದಾಗಿದ್ದು, ಕುತಂತ್ರದ ಮೂಲಕ ಸರ್ದಾರ್ ಪಟೇಲ್ ಅವರನ್ನು ಒತ್ತಾಯಪೂರ್ವಕವಾಗಿ ಅಭ್ಯರ್ಥಿ ಸ್ಥಾನದಿಂದ ಹಿಂಪಡೆಯುವಂತೆ ಮಾಡಿದರು!!

ಜವಾಹರಲಾಲ್ ನೆಹರು 1947ರ ಪೂರ್ವದಲ್ಲಿ ರಾಜವಂಶದ ರಾಜಕೀಯ ಫಲವನ್ನು ಅನುಭವಿಸಲು ಪ್ರಾರಭಿಸಿದ್ದಲ್ಲದೇ ಅವರೇ ಭಾರತದ ಮೊದಲ
ಪ್ರಧಾನಿಯಾದರು!!! 1950ರಲ್ಲಿ ಸರ್ದಾಲ್ ಪಟೇಲರು ಮರಣ ಹೊಂದಿದ ನಂತರ ರಾಜಕೀಯದಲ್ಲಿ ತನ್ನ ಕುಟುಂಬದ ನಿಯಂತ್ರಣವನ್ನು ಬಲಪಡಿಸುವಲ್ಲಿ ಮುಂದಾದರು ನೆಹರು!! ಹಾಗಾಗಿ ತನ್ನ ಅಧಿಕಾರದಿಂದ ತನ್ನ ಮಗಳನ್ನು ಉನ್ನತ ಸ್ಥಾನದ ಉತ್ತರಾಧಿಕಾರಿಯಾಗಿ ಮಾಡಿದರು. ಮೊದಲಿಗೆ ನೆಹರು ಅವರು ತನ್ನ ಮಗಳನ್ನು ರಾಜಕೀಯ ಆಪ್ತಮಿತ್ರೆಯಾಗಿ ಪರಿಗಣಿಸಿದ್ದಲ್ಲದೇ, ತದನಂತರದಲ್ಲಿ ಗಮನಾರ್ಹವಾಗಿ ಪ್ರಭಾವ ಬೀರಲು ಅವಕಾಶ ಮಾಡಿಕೊಟ್ಟರು!! ಅಷ್ಟೇ ಅಲ್ಲದೇ, ನೆಹರು ಅವರೊಂದಿಗೆ ಎಲ್ಲಾ ಪ್ರಮುಖ ಆಡಳಿತಾತ್ಮಕ ಮತ್ತು ರಾಜಕೀಯ ಸಭೆಗಳಿಗೆ ಭೇಟಿ ನೀಡಿದ್ದು ಮಾತ್ರವಲ್ಲದೇ ಅಂತರಾಷ್ಟ್ರೀಯ ಭೇಟಿಯನ್ನು ಕೈಗೊಂಡಿದ್ದರು!!!. ತನ್ನ ಉತ್ತರಾಧಿಕಾರದಿಂದ ಮಾಡಿದ ಎಲ್ಲಾ ಭೇಟಿಗಳು ತನ್ನ ವಂಶಪಾರಂಪರ್ಯವನ್ನು ಮುನ್ನಡೆಸಲು ಸಹಾಯ ಮಾಡಿದಂತಿತ್ತು!! ಹಾಗಾಗಿ ಈ ಎಲ್ಲಾ ಭೇಟಿಗಳಿಗೆ ಸಾರ್ವಜನಿಕರ ಬೊಕ್ಕಸದಿಂದಲೇ ಖರ್ಚುಗಳಾಗಿವೆ ಎಂದು ನೆಹರು ಕ್ಯಾಬಿನೆಟ್ ಖಚಿತ ಪಡಿಸಿವೆ.(Source: RNP Singh, Nehru, A Troubled Legacy, P. 30).

ತದ ನಂತರದಲ್ಲಿ ಜವಾಹರಲಾಲ್ ನೆಹರು ತನ್ನ ಮಗಳನ್ನು ಭವಿಷ್ಯದಲ್ಲಿನ ಉತ್ತರಾಧಿಕಾರಿಯಾಗಿ ಮಾಡಲು ಪಟ್ಟಾಭಿಷೇಕದ ತಯಾರಿಯನ್ನು ಪ್ರಾರಂಭಿಸಿ ಬಿಟ್ಟರು!!!

1957ರಲ್ಲಿ ಕಾಂಗ್ರೆಸ್‍ನ ಕೇಂದ್ರ ಚುನಾವಣಾ ಸಮಿತಿಗೆ ಆಯ್ಕೆಯಾದರು. ನಂತರ 1958ರಲ್ಲಿ ಕಾಂಗ್ರೆಸ್‍ನ ಪ್ರಮುಖ ಅಂಗವಾಗಿದ್ದ ಕೇಂದ್ರ ಸಂಸತ್ತಿನ
ಮಂಡಳಿಯ ಸದಸ್ಯ ಸ್ಥಾನಕ್ಕೆ ನೆಹರು ಅವರ ಜಾಗವನ್ನು ಇಂದಿರಾ ಪಡೆದುಕೊಂಡರು!!! ಇಲ್ಲಿ ಮುಖ್ಯ ಚುನಾವಣಾ ಸಮಿತಿಯು ಶಾಸಕಾಂಗದ ಚುನಾವಣೆಗೆ
ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿದ್ದಲ್ಲದೇ ಎಲ್ಲಾರೀತಿಯ ಹಂತಗಳಲ್ಲೂ ಇವರು ಹೆಚ್ಚಿನ ಅಧಿಕಾರವನ್ನು ಪಡೆದುಕೊಂಡಿದ್ದರು!!

ರಾಜವಂಶದ ರಾಜಕಾರಣವು ಆಧುನಿಕ ಭಾರತಕ್ಕೆ ಬಹುದೊಡ್ಡ ಹಾನಿಯಾಗಿದ್ದಲ್ಲದೇ, 1980ರ ದಶಕಗಳ ಅಂತ್ಯದೊಳಗೆ ನೆಹರು ಗಾಂಧಿ ಪಕ್ಷದ ಹಾಗೂ ರಾಷ್ಟ್ರೀಯ ವ್ಯವಹಾರಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು. ತನ್ನ ಕುಟುಂಬದ ಬೊಕ್ಕಸವನ್ನು ತುಂಬಿಸುವಲ್ಲಿ ಕಾರ್ಯನಿರತರಾಗಿದ್ದ ಇವರು ತಮ್ಮ ಅಧಿಕಾರದಲ್ಲಿ ಯಶಸ್ಸನ್ನು ಕಂಡಿದ್ದಾರೆ!! ಆದರೇ!!! ಈ ಎಲ್ಲಾ ಅನರ್ಥಗಳಿಗೆ ಜವಾಹರಲಾಲ್ ನೆಹರೂ ಅವರೇ ಜವಾಬ್ದಾರರಾಗಿದ್ದಾರಲ್ಲದೇ ಮುಖ್ಯವಾಹಿನಿ ಮಾಧ್ಯಮಗಳು ತನ್ನ ಇವರ ಪ್ರಿಯತಮೆಯಾಗಿಯೇ ಉಳಿದುಕೊಂಡಿದೆ ಮಾತ್ರವಲ್ಲದೇ ಇವುಗಳು ವಂಶಪರಂಪರೆಯ ರಾಜಕೀಯಕ್ಕೆ ಸಾಥ್ ನೀಡುತ್ತಿರುವುದು ಇನ್ನೂ ವಿಪರ್ಯಾಸ!!!

ಮೂಲ:Original Link – RightLog

– ಅಲೋಖಾ

Tags

Related Articles

Close