ಪ್ರಚಲಿತ

ಮತ್ತೆ ಮುಂದುವರೆದ ಅರವಿಂದ್ ಕೇಜ್ರಿವಾಲ್ ಹೈಡ್ರಾಮಾಕ್ಕೆ ತಕ್ಕ ಉತ್ತರ ನೀಡಿದ ಸುಬ್ರಮಣಿಯನ್ ಸ್ವಾಮಿ!!

ಪ್ರತಿಬಾರಿಯೂ ಒಂದಲ್ಲ ಒಂದು ಹೈಡ್ರಾಮಾಗಳನ್ನು ನಡೆಸುತ್ತಾ ಸುದ್ದಿಯಾಗುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಹೈಡ್ರಾಮಾ ಇನ್ನೂ ಮುಂದುವರಿಯುತ್ತಲೇ ಇದ್ದು, ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರ ನಿವಾಸದಲ್ಲಿ ಸಂಪುಟ ಸಹೋದ್ಯೋಗಿಗಳೊಂದಿಗೆ ಪಟ್ಟು ಬಿಡದೆ ಪ್ರತಿಭಟನೆ ನಡೆಸುತ್ತಿರುವ ವಿಚಾರದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತೆ ಸುದ್ದಿಯಾಗುತ್ತಲೇ ಇದ್ದಾರೆ!! ಹಾಗಾಗಿ ಈ ಕುರಿತಂತೆ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೈಡ್ರಾಮಾಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ!!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೂ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಗೂ ಅದ್ಯಾಕೋ ಆಗಿ ಬರ್ತಾನೇ ಇಲ್ಲ ಎಂದು ಕಾಣುತ್ತೆ. ಯಾಕೆಂದರೆ ಈ ಹಿಂದಿದ್ದ ಲೆಫ್ಟಿನೆಂಟ್ ಗವರ್ನರ್ ಜೊತೆಯಲ್ಲೂ ತಿಕ್ಕಾಟವಿದ್ದು, ಇದೀಗ ಇದೇ ಚಾಳಿ ಎಲ್.ಜಿ ಅನಿಲ್ ಬೈಜಲ್ ಜೊತೆಯೂ ಇದು ಮುಂದುವರಿದಿದೆ. ಹೌದು… ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಪ್ ನ ಹಿರಿಯ ಸಚಿವರೆಲ್ಲಾ ಎಲ್ ಜಿ ನಿವಾಸದಲ್ಲೇ ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ಬೇಡಿಕೆ ಈಡೇರಿಸುವವರೆಗೂ ಜಾಗ ಬಿಟ್ಟು ಕದಲೋದಿಲ್ಲ ಎಂದು ಅಲ್ಲೇ ಮಲಗಿ ತಮ್ಮ ಹೈಡ್ರಾಮಾದ ಒಂದು ಝಲಕ್ ತೋರಿಸಿದ್ದರು.

ಅಷ್ಟೇ ಅಲ್ಲದೇ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಜೊತೆ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ ನಾಲ್ಕು ಮಂದಿ ಆಪ್ ನ ಹಿರಿಯ ನಾಯಕರು ಲೆಫ್ಟಿನೆಂಟ್ ಗವರ್ನರ್ ನಿವಾಸದಲ್ಲಿ ಪ್ರತಿಭಟನೆ ನಡೆಸಿ, ವೇಟಿಂಗ್ ರೂಮ್ ನಲ್ಲಿರುವ ಸೋಫಾದ ಮೇಲೆ ಮಲಗಿರುವುದು ಹಾಗೂ ಆಪ್ ಬೆಂಬಲಿಗರು ಗವರ್ನರ್ ನಿವಾಸದ ಹೊರಗೆ ಇಫ್ತಾರ್ ಕೂಟ ಮಾಡುತ್ತಿರುವ ಪೋಟೋಗಳು ಈಗಾಗಲೇ ಭಾರೀ ಸದ್ದು ಮಾಡಿತ್ತು!! ಆದರೆ ಪಟ್ಟು ಬಿಡದೆ ತಮ್ಮ ಪ್ರತಿಭಟನೆಯನ್ನು ನಡೆಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇದೀಗ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಏನೂ ತಿಳಿಯದ ಅನಕ್ಷರಸ್ಥ ಎಂದು ಟೀಕಿಸಿದ್ದಾರೆ.

ಹೌದು… ಕಳೆದ ಆರು ದಿನಗಳಿಂದ ಲೆಫ್ಟಿನೆಂಟ್ ಗವರ್ನರ್ ನಿವಾಸದಲ್ಲಿ ಪ್ರತಿಭಟನೆ ಕೈಗೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿಲುವನ್ನು ಖಂಡಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, “ಪ್ರತಿಭಟನೆ ಮಾಡುವುದಕ್ಕೂ ಒಂದು ಕ್ರಮಬದ್ಧವಾದ ಮಾರ್ಗವಿದೆ. ಸಂವಿಧಾನದಲ್ಲಿ ಸಾಂಸ್ಕೃತಿಕ ತತ್ವಗಳಿವೆ. ಆದ್ದರಿಂದ ಈ ರೀತಿ ವರ್ತನೆ ತೋರುತ್ತಿರುವ ವ್ಯಕ್ತಿಗೆ 4 ರಾಜ್ಯಗಳು ಮುಖ್ಯಮಂತ್ರಿಗಳಿಗೆ ಬೆಂಬಲ ನೀಡಬಾರದು” ಎಂದು ಸ್ವಾಮಿ ತಿಳಿಸಿದ್ದಾರೆ.

ಇದಲ್ಲದೇ, “ಕೇಜ್ರಿವಾಲ್ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ನಡೆಸಿದವರು ಮತ್ತು ನಂತರ ಅಣ್ಣಾ ಹಜಾರೆಯ ಹೆಗಲ ಮೇಲೆ ಕುಳಿತು ಕೊನೆಗೆ ಅವರನ್ನು ಹೊರಗೆ ಹಾಕಿದರು. ಆದ್ದರಿಂದ ಕೇಜ್ರಿವಾಲ್ ಹುಟ್ಟುತ್ತಲೇ ನಕ್ಸಲೈಟ್ ಆಗಿ ಹುಟ್ಟಿದ್ದಾರೆ. ಅವರೊಬ್ಬ ಏನೂ ತಿಳಿಯದ ಅನಕ್ಷರಸ್ಥ” ಎಂದು ಅವರು ಕಿಡಿ ಕಾರಿದ್ದಾರೆ.

ಪ್ರತಿ ಬಾರಿ ಒಂದಲ್ಲ ಒಂದು ವಿವಾದಗಳಿಂದಲೇ ಸುದ್ದಿ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಒಂದೊಂದಾಗಿಯೇ ಬಯಲಿಗೆಳೆದ ಅಣ್ಣಾ ಹಜಾರೆಯವರ ಹೋರಾಟದಲ್ಲಿ ಕರೆಯದೆಯೇ ಬಂದ ಅತಿಥಿಯಾಗಿ ಆ ಹೋರಾಟಕ್ಕೆ ಕೈಜೋಡಿಸಿ ಕೊನೆಗೆ ತಾನೊಬ್ಬ ಸೂಪರ್ ಸ್ಟಾರ್ ಆಗಿ ಮಿಂಚಿ ಸುದ್ದಿಯಾಗಿದ್ದರು.

ಆದರೆ ಅದೇ ಅಣ್ಣಾ ಹಜಾರೆಯವರ ವಿರೋಧದ ನಡುವೆಯೂ ಆಮ್ ಆದ್ಮಿ ಪಕ್ಷವನ್ನು ಕಟ್ಟಿ ತಾನೊಬ್ಬ ಮಹಾನ್ ಹೋರಾಟಗಾರ ಎಂದು ತೋರಿಸಿಕೊಳ್ಳಲು ಪ್ರತಿಭಟನೆಗಳನ್ನು ನಡೆಸಿ ಪ್ರತಿಬಾರಿಯೂ ಹೈಡ್ರಾಮಾಗಳನ್ನು ಸೃಷ್ಟಿಸಿ ಸುದ್ದಿಯಾಗುತ್ತಿರುವುದನ್ನೂ ನೋಡಿದಾಗ ಇವರ ಸಾಧನೆಯ ಬಗ್ಗೆ ಅದೇನೂ ಹೇಳಬೇಕೋ ನಾ ಕಾಣೆ!!

ಮೂಲ:
https://www.business-standard.com/multimedia/video-gallery/general/bjp-leader-subramanian-swamy-says-delhi-cm-arvind-kejriwal-is-a-naxalite-66038.htm

http://www.india.com/news/india/delhi-chief-minister-arvind-kejriwal-is-a-naxalite-says-bjp-mp-subramanian-swamy-3114863/

– ಅಲೋಖಾ

Tags

Related Articles

Close