ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರ ಅಂದರೇನೇ ಹಾಗೆ… ಶತ್ರುಗಳು ಕೂಡಾ ಆ ಹೆಸರು ಕೇಳಿದರೆ ಸಾಕು ಗಢಗಢ ನಡುತ್ತದೆ!! ಯಾಕೆಂದರೆ ಮೋದಿಜೀಯ ಆಡಳಿತ ವೈಖರಿ ಅಷ್ಟರ ಮಟ್ಟಿಗೆ ಇದೆ!! ಕೆಲ ರಾಷ್ಟ್ರಗಳು ಮೋದೀಜೀಯವರು ಯಾವಾಗ ನಮ್ಮ ರಾಷ್ಟ್ರಕ್ಕೆ ಬರುತ್ತಾರೆ.. ಯಾವಾಗ ನಮ್ಮ ದೇಶಕ್ಕೆ ಅವರ ಸ್ಪರ್ಶ ಆಗುತ್ತದೆ ಅಂತಾ ಕಾಯುತ್ತಾ ಕುಳಿತಿರುತ್ತಾರೆ!! ಮೊದ ಮೊದಲು ಪಾಕಿಸ್ತಾನದ ಜೊತೆ ಸೇರಿಕೊಂಡು ಚೀನಾ ಭಾರತವನ್ನು ಕಂಡರೆ ಉರಿ ಬೀಳುತಿದ್ದು ಇದೀಗ ಪ್ರಧಾನಿ ನರೇಂದ್ರ ಮೋದಿ ಅಧಿಕಾರವಹಿಸಿದ ಬಳಿಕ ಚೀನಾ ಯಾವ ವಿಷಯಕ್ಕೂ ಖ್ಯಾತೆ ತೆಗೆಯೋದಿಲ್ಲ ಎಂದರೆ ಮೋದೀಜೀಯ ಮಾತು ಎಂದರೆ ಎಷ್ಟು ವಿಶಿಷ್ಟವಾದದ್ದು ಎಂದು ತಿಳಿಯುತ್ತದೆ!! ಇದೀಗ ಚೀನಾದಲ್ಲೇ ನಿಂತು ಚೀನಾಕ್ಕೆ ತಪರಾಕಿ ಹಾಕಿದ್ದಾರೆ ಎಂದರೆ ಮೋದೀಜೀಯ ಪವರ್ ಎಷ್ಟಿರ ಬೇಡ?
ಚೀನಾದಲ್ಲೇ ನಿಂತು ಚೀನಾಕ್ಕೆ ತಪರಾಕಿ ಹಾಕಿದ ಮೋದೀಜಿ!!
ಹೌದು ಪ್ರಧಾನಿ ನರೇಂದ್ರ ಮೋದೀಜೀಯವರು ಯಾರಿಗೂ ಹೆದರುವವರೇ ಅಲ್ಲ!! ಮಿತ್ರ ರಾಷ್ಟ್ರ ಆಗಲಿ ಶತ್ರು ರಾಷ್ಟ್ರವೇ ಆಗಲಿ ಭಾರತಕ್ಕೆ ಎರಡು ಬಗೆದರೆ ಮಾತ್ರ ಯಾರನ್ನೂ ಬಿಡೋರಲ್ಲ!! ಅದಕ್ಕೆ ತಕ್ಕ ಪ್ರತಿಫಲವನ್ನು ನೀಡಿಯೇ ತೀರುತ್ತಾರೆ!! ಈಗ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹತ್ತರ ನಿರ್ಧಾರವನ್ನು ಕೈಗೊಂಡಿದ್ದು, ಚೀನಾ ನೆಲದಲ್ಲಿ ನಿಂತು, ಅದೇ ನೆಲದಲ್ಲಿ ಆ ರಾಷ್ಟ್ರಕ್ಕೆ ತಪರಾಕಿ ನೀಡುವ ಮೂಲಕ ನರೇಂದ್ರ ಮೋದಿಜೀ ಎಲ್ಲರ ಗಮನ ಸೆಳೆದಿದ್ದಾರೆ ಹಾಗೂ ಭಾರತದ ದೃಢ ನಿರ್ಧಾರದ ಬಗ್ಗೆ ಸಂದೇಶ ಸಾರಿದ್ದಾರೆ. ಚೀನಾದ ಕಿಂಗ್ಡಾವೋದಲ್ಲಿ ನಡೆದ 18ನೇ ಶಾಂಘೈ ಸಹಕಾರ ಸಂಸ್ಥೆಯ 18ನೇ ಸಭೆಯಲ್ಲಿ ಪಾಲ್ಗೊಂಡ ನರೇಂದ್ರ ಮೋದಿ ಅವರು ಚೀನಾದ ಮಹತ್ತರ ಒಂದು ಪ್ರದೇಶ, ಒಂದು ರಸ್ತೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ!!
ಎಸ್ಸಿಒ 8 ಸದಸ್ಯ ರಾಷ್ಟ್ರಗಳಲ್ಲಿ ಏಳು ರಾಷ್ಟ್ರಗಳು ಚೀನಾದ ಒಆರ್ಒಪಿ ಯೋಜನೆಗೆ ಬೆಂಬಲ ಸೂಚಿಸಿವೆ. ಆದರೆ ನರೇಂದ್ರ ಮೋದಿ ಅವರು ಮಾತ್ರ ಪಾಕ್ ಆಕ್ರಮಿತ ಕಾಶ್ಮೀರ ಸೇರಿ ಭಾರತದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡದೇ ಇರುವ ಮೂಲಕ ದಿಟ್ಟತನ ಮೆರೆದಿದ್ದಾರೆ. ಈ ರೀತಿ ಚೀನಾಕ್ಕೆ ತುಪರಾಕಿ ಹಾಕಿ ಚೀನಾದ ಜೊತೆ ಸಂಬಂಧ ಬಿಗಡಾಯಿಸಿದೆ ಎಂದು ಅಂದುಕೊಳ್ಳಬೇಡಿ… ನರೇಂದ್ರ ಮೋದಿ ಅವರೇನು ಚೀನಾದ ವಿರೋಧ ಕಟ್ಟಿಕೊಟ್ಟಿಲ್ಲ. ಬದಲಾಗಿ ಎಸ್ಸಿಒ ಸಭೆಯ ನಡುವೆಯೇ ಚೀನಾ ಜತೆ ಎರಡು ಒಪ್ಪಂದ ಮಾಡಿಕೊಂಡಿದ್ದಾರೆ.
ಬ್ರಹ್ಮಪುತ್ರ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ದತ್ತಾಂಶ ಹಂಚಿಕೊಳ್ಳುವ ಒಪ್ಪಂದ ಸೇರಿದಂತೆ ಎರಡು ಪ್ರಮುಖ ಒಪ್ಪಂದಗಳಿಗೆ ಭಾರತ ಮತ್ತು ಚೀನಾ ಸಹಿ ಹಾಕಿವೆ. ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ 18ನೇ ಶೃಂಗಸಭೆ(ಎಸ್ ಸಿಒ)ಯಲ್ಲಿ ಪಾಲ್ಗೊಳ್ಳಲು ಚೀನಾದ ಕ್ವಿಂಗ್ಡಾವೋಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಬ್ರಹ್ಮಪುತ್ರ ನದಿ ನೀರಿನ ದತ್ತಾಂಶ ಹಂಚಿಕೆ ಹಾಗೂ ಭಾರತದಿಂದ ಬಾಸುಮತಿಯೇತರ ಅಕ್ಕಿ ಆಮದು ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಿದ್ದಾರೆ.
India and China signed two bilateral agreements at Qingdao, on sidelines of the Shanghai Cooperation Organisation summit
Read @ANI Story | https://t.co/Q2OcoUpMHg pic.twitter.com/GfNF3jpBh9
— ANI Digital (@ani_digital) June 9, 2018
ಹೊಸ ಒಪ್ಪಂದದ ಪ್ರಕಾರ, ಚೀನಾ ಬ್ರಹ್ಮಪುತ್ರ ನದಿಯಲ್ಲಿ ಮೇ 15ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ಭಾರತಕ್ಕೆ ಮಾಹಿತಿ ನೀಡಲಿದೆ. ಇದರಿಂದ ಅಸ್ಸಾಂನಲ್ಲಿ ತಲೆದೋರುವ ಪ್ರವಾಹವನ್ನು ಎದುರಿಸಲು ಭಾರತವು ಅಗತ್ಯ ಕ್ರಮ ತೆಗೆದುಕೊಳ್ಳಲು ನೆರವಾಗಲಿದೆ. ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಭಾಗವಾಗಿ ನಡೆದ ಚರ್ಚೆಯಲ್ಲಿ ಭಯೋತ್ಪಾದನೆ, ಉಗ್ರಗಾಮಿತ್ವ ಹಾಗೂ ತೀವ್ರಗಾಮಿತ್ವದ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ ಸೇರಿದಂತೆ ಅನೇಕ ಜಾಗತಿಕ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್ ಪಿಂಗ್ ಚರ್ಚೆ ನಡೆಸಿದ್ದಾರೆ. ವೂಹಾನ್ ಅನೌಪಚಾರಿಕ ಶೃಂಗಸಭೆಯಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳನ್ನು ಅನುಷ್ಠಾನಗೊಳಿಸುವಲ್ಲಿ ಮೋದಿ ಮತ್ತು ಕ್ಸಿ ಅವರು ಪ್ರಗತಿ ಸಾಧಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ!! ಹೀಗಾಗಿ ಮುಂದಿನ ದಿನಗಳಲ್ಲಿ ಭಾರತ-ಚೀನಾದ ಸಂಬಂಧ ಗಟ್ಟಿಯಾಗುತ್ತಿದೆ ಎಂಬುವುದಕ್ಕೆ ಬೇರೆ ನಿದರ್ಶನ ಬೇಕೆ?!
ಮೋದೀಜೀಯೇ ಹಾಗೆ.. ಸದಾ ದೇಶದ ಬಗ್ಗೇನೇ ಚಿಂತೆ ಮಾಡುತ್ತಿರುತ್ತಾರೆ!! ದೇಶಕ್ಕೆ ಯಾರೂ ಕೆಡುಕನ್ನು ಮಾಡುತ್ತಾರೋ ಅಲ್ಲೇ ಅದನ್ನು ಬೆಳೆಯಲು ಬಿಡದೆ ಅಲ್ಲೇ ಚಿವುಟಿ ಹಾಕಿ ಬಿಡುತ್ತಾರೆ!! ಇದೇ ಮೋದೀಜೀ ಪವರ್ ಜೈ ಮೋದೀಜೀ…
– ಪವಿತ್ರ