ಅದೆಷ್ಟೋ ಬಾರಿ ಪಾಕಿಸ್ತಾನಕ್ಕೆ ಬುದ್ದಿ ಕಲಿಸಿದರೂ ತನ್ನ ನರಿ ಬುದ್ಧಿಯನ್ನು ಮಾತ್ರ ಪಾಕ್ ಬಿಡಲ್ಲ ಅಂತ ಶಪಥ ಮಾಡಿದಂತಿದೆ!! ಇಡೀ ರಾಷ್ಟ್ರಗಳೇ ಪಾಕ್ ಹೆಸರು ಕೇಳುತ್ತಲೇ ದೂರ ಸರಿದರೂ ಪಾಕ್ ಮಾತ್ರ ತನ್ನ ಹಳೇ ಛಾಳಿಯಲ್ಲ ಬಿಡೋಲ್ಲ ಅನಿಸುತ್ತಿದೆ!! ಮೋದೀಜೀ ಅಧಿಕಾರವಹಿಸಿದಾಗಿನಿಂದ ಉಗ್ರರಿಗೆ ಭಾರತದ ಹೊಳಹೊಕ್ಕಲು ಅದೆಷ್ಟೋ ಸಾಹಸವನ್ನೇ ಮಾಡುತ್ತಿದ್ದಾರೆ!! ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಮಾತ್ರ ತಮಗಿಷ್ಟ ಬಂದಂತೆ ಉಗ್ರರು ಸಲಿಸಾಗಿಯೇ ಭಾರತದ ಒಳನುಸುಳಿಕೊಂಡು ಬರುತ್ತಿದ್ದರು.. ಆ ಸಮಯದಲ್ಲಿ ತಮಗಿಷ್ಟ ಬಂದಂತೆ ಭಾರತಕ್ಕೆ ಬಂದು ದುಷ್ಕøತ್ಯವನ್ನು ಮಾಡಿ ಹೋಗುತ್ತಿದ್ದರು.. ಅಷ್ಟು ಸ್ವಾತಂತ್ರ್ಯವನ್ನು ಪಾಕ್ಗೆ ನೀಡಿತ್ತು ಯುಪಿಎ ಸರಕಾರ!! ಆದರೆ ಮೋದೀಜೀ ಯಾವಾಗ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೋ ಅಂದೇ ಉಗ್ರರ ದಮನಕ್ಕೆ ಶಪಥ ಮಾಡಿದ್ದರು!! ಹಾಗೇ ನಮ್ಮ ಭಾರತೀಯ ಸೇನಾ ಪಡೆಗಳಿಗೆ ಯಾವ ರೀತಿಯ ಸವಲತ್ತುಗಳು ಬೇಕೋ ಅದನ್ನೇಲ್ಲಾ ಸೇನೆಗೆ ತಲುಪಿಸುತ್ತನೇ ಬರುತ್ತಿದ್ದಾರೆ!! ಅದಲ್ಲದೆ ಅವರಿಗೆ ಆತ್ಮ ಸ್ಥೈರ್ಯವನ್ನು ತುಂಬುತ್ತಿದ್ದಾರೆ!! ಹಾಗಾಗಿ ಉಗ್ರರಿಗೆ ಒಳನುಸುಳಲು ಬಲು ಕಷ್ಟಕರವಾಗಿದೆ!! ಒಂದು ವೇಳೆ ಪಾಕ್ ಉಗ್ರರು ಭಾರತದ ಗಡಿ ಪ್ರವೇಶ ಮಾಡುವ ಸಾಹಸಕ್ಕೆ ಕೈ ಹಾಕಿದ್ದೇ ಆದಲ್ಲಿ ಉಗ್ರರ ತಲೆ ಉರುಳುವುದಂತೂ ಖಂಡಿತ!!
ಗಡಿ ನುಸುಳಲು ಪ್ರಯತ್ನಿಸಿದ 6 ಉಗ್ರರು ಖುಲ್ಲಾಸ್!!
ರಮ್ಜಾನ್ ಮಾಸದ ನಿಮಿತ್ತ ಗಡಿಯಲ್ಲಿ ಯಾವುದೇ ದಾಳಿ ನಡೆಸಲ್ಲ ಎಂದು ಹೇಳಿದರೂ ಸಹ ಮತ್ತೆ ಮತ್ತೆ ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಭಾರತೀಯ ಸೇನೆಯನ್ನು ಕೆರಳಿಸುತ್ತಿವೆ!! ತಾವಾಗಿ ಯಾರನ್ನೂ ಕೆಣಕಲ್ಲ ಕೆಣಕಿದರೆ ಎಂದಿಗೂ ಬಿಡೋರಲ್ಲ ನಮ್ಮ ಭಾರತೀಯ ಸೇನೆ!! ಇದಾಗಲೇ ಹಲವಾರು ಬಾರಿ ಭಾರತೀಯ ಸೇನೆಯನ್ನು ಕೆದಕಿದ್ದಕ್ಕೆ ಪ್ರತ್ಯುತ್ತರ ನೀಡುತ್ತಾ ಬಂದರೂ ಮತ್ತೆ ಪಾಕ್ ತನ್ನ ಮಾತ್ರ ಹಳೇ ಛಾಳಿ ಬಿಡೋ ಹಾಗೆ ಕಾಣುತ್ತಿಲ್ಲ!!
ಇದೀಗ ಮತ್ತೆ ಇಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಕೆರಾನ್ ಸೆಕ್ಟರ್ನಲ್ಲಿ ಪಾಕ್ನಿಂದ ಗಡಿನುಸುಳುತ್ತಿದ್ದ 6 ಮಂದಿ ಉಗ್ರರನ್ನು ಗಡಿ ಭದ್ರತಾ ಪಡೆಗಳು ಇಂದು ಹತ್ಯೆಗೈದಿವೆ. ಗಡಿಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು ಈಗಾಗಲೇ ಹಿಂದೂಗಳ ಪವಿತ್ರ ಕ್ಷೇತ್ರಗಳಿಗೆ ಕಣ್ಣ ಹಾಕಿದ್ದ ಉಗ್ರರು ಗಡಿಯಲ್ಲಿ ನುಸುಳಿ ಭಾರತ ಪ್ರವೇಶಿಸಲು ಮುಂದಾಗಿದ್ದಾರೆ!! ಹೀಗಾಗಿ ಇಂದು ಮತ್ತೆ ಭಾರತದ ಗಡಿಯಲ್ಲಿ ಪಾಕ್ನ ಆರು ಭಯೋತ್ಪಾದಕರು ನುಸುಳುವುದನ್ನು ಕಂಡ ಬಿಎಸ್ಎಫ್ ಪಡೆಗಳು ಗುಂಡಿನ ದಾಳಿ ನಡೆಸಿ ಉಗ್ರರ ಯತ್ನ ವಿಫಲಗೊಳಿಸಿವೆ!! ಅದಲ್ಲದೆ ಸಬ್ಜಿಯಾನ್ ಸೆಕ್ಟರ್ನಲ್ಲಿ ಸೈನಿಕರು ಕಾಮಗಾರಿಯಲ್ಲಿ ನಿರತರಾಗಿದ್ದ ವೇಳೆ ಸೈನಿಕರೊಬ್ಬರು ಆಕಸ್ಮಿಕವಾಗಿ ಲ್ಯಾಂಡ್ಮೈನ್ ಮೇಲೆ ಕಾಲಿಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ಮೊನ್ನೆ ತಾನೇ ಗಡಿಯಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದಕ್ಕಾಗಿ ಪಾಕಿಸ್ತಾನದ ಹತ್ತು ಬಂಕರ್ಗಳನ್ನೇ ನಮ್ಮ ಸೇನೆ ಸರ್ವನಾಶ ಮಾಡಿತ್ತು!! ಅದಾದ ನಂತರ ಬೆವತು ಹೋದ ಪಾಕಿಗಳು ನಮ್ಮ ನಿರ್ನಾಮ ಖಂಡಿತ ಎಂದು ಅಂದುಕೊಂಡು ಶಾಂತಿ ಮಾತುಕತೆಗೆ ಕೂಡಾ ಬಂದಿತ್ತು!! ಆದರೂ ಮತ್ತೆ ಮತ್ತೆ ತನ್ನ ನರಿ ಬುದ್ದಿಯನ್ನು ತೋರಿಸುತ್ತಾ ಬಂದರೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ಖಂಡಿತಾ ಎಂದನಿಸುತ್ತದೆ!!
– ಪವಿತ್ರ