ಪ್ರಚಲಿತ

ಮುಸಲ್ಮಾನರೇಕೆ ಬದಲಾಗಲು ಸಾಧ್ಯವಿಲ್ಲ?

ಹಿಂದೂಸ್ಥಾನದಲ್ಲಿ ಇರುವವರು ಎಲ್ಲರೂ ಹಿಂದೂಗಳೇ. ಆದರೆ ರಾಷ್ಟ್ರಭಕ್ತಿ ಎಂದರೆ ಮುಸ್ಲಿಂ ದ್ವೇಷವೇ?, ಮುಸ್ಲಿಂ‌ಮರಿಲ್ಲದ ಹಿಂದೂಸ್ಥಾನವನ್ನು ಕಟ್ಟುವುದು ಸಾಧ್ಯವೇ? ಮುಸ್ಲಿಮರನ್ನು ವಿರೋಧಿಸಿದರೆ ಮಾತ್ರ ಹಿಂದೂ ರಾಷ್ಟ್ರ ನಿರ್ಮಾಣ ಸಾಧ್ಯವೇ? ಹೀಗೆ ಹತ್ತು ಹಲವು ಪ್ರಶ್ನೆ ನಮ್ಮಲ್ಲಿ ಹಲವರಲ್ಲಿ ಮೂಡುವ ಪ್ರಶ್ನೆ.

ಭಾರತ ಜಾತ್ಯಾತೀತ ರಾಷ್ಟ್ರ. ಆದರೂ ಯಾಕೆ ಹಿಂದೂಗಳಲ್ಲಿ ಕೆಲವರು ಮುಸಲ್ಮಾನ‌ರನ್ನು ದ್ವೇಷಿಸುತ್ತಾರೆ. ಯಾಕೆ ಹೀಗಾಗುತ್ತಿದೆ. ಮುಸಲ್ಮಾನ‌ರೆಲ್ಲರನ್ನು ಓಡಿಸಿದರೆ ಮಾತ್ರ ಹಿಂದೂ ರಾಷ್ಟ್ರ ಸಾಧ್ಯವೇ. ಯಾಕೆ ದೇಶ ಕಟ್ಟುವಾಗ ಮುಸಲ್ಮಾನ‌ರನ್ನು ಬಿಟ್ಟು ರಾಷ್ಟ್ರ ನಿರ್ಮಾಣ ಮಾಡುತ್ತಾರೆ ಎಂಬುದು ಹಲವು ಮುಸಲ್ಮಾನ‌ರ ಪ್ರಶ್ನೆ. ಇದು ದ್ವೇಷಪೂರಿತ ಮನಸ್ಥಿತಿ ಅಲ್ಲವೇ.. ಎಂದು ಕೇಳುವವರೂ ಇದ್ದಾರೆ.

ಇಲ್ಲಿ ನಮ್ಮ ಹೋರಾಟ ಮುಸ್ಲಿಂ ಮೂಲಭೂತ‌ವಾದಿಗಳ ವಿರುದ್ಧ. ಭಯೋತ್ಪಾದನೆ, ಹಿಂಸೆಯನ್ನು, ಮತಾಂಧತೆಯನ್ನು ಪ್ರೋತ್ಸಾಹ ಮಾಡುವವರು, ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಮಕ್ಕಳ ಬಾಳು, ಜೀವ ಹಾಳು ಮಾಡುವ, ಬಲವಂತದಿಂದ ಮತಾಂತರ ಮಾಡುವ ಮೂಲಕ ಹಿಂದೂ ಧರ್ಮದ ನಾಶಕ್ಕೆ ಪ್ರಯತ್ನ ನಡೆಸುವವರು, ಮತಾಂತರ‌ದ ಮೂಲಕ ರಾಷ್ಟ್ರಾಂತರದ ಹುನ್ನಾರ ನಡೆಸುವವರ ವಿರುದ್ಧ‌ವೇ ಹೊರತು, ನಾವು ಮುಸಲ್ಮಾನ ದ್ವೇಷಿಗಳಲ್ಲ ಎನ್ನುವುದು ಸ್ಪಷ್ಟ. ಇದು ಪ್ರಖರ ಹಿಂದುತ್ವ‌ವಾದಿ, ರಾಷ್ಟ್ರಪ್ರೇಮಿ ಜಗದೀಶ್ ಕಾರಂತ್ ಅವರು ಸಂದರ್ಶನ ಒಂದರಲ್ಲಿ ‘ಮುಸಲ್ಮಾನ‌ರ ಮೇಲೇಕೆ ದ್ವೇಷ, ಮುಸಲ್ಮಾನ‌ರ ಹೊರತಾಗಿ ರಾಷ್ಟ್ರ ನಿರ್ಮಾಣ ಸಾಧ್ಯವೇ’ ಎಂದು ಕೇಳಲಾದ ಪ್ರಶ್ನೆಗೆ ನೀಡಿದ, ನೇರ, ದಿಟ್ಟ ಉತ್ತರ.

ಈ ರಾಷ್ಟ್ರ ನಿರ್ಮಾಣ‌ದ ಕೆಲಸ ಎಲ್ಲರನ್ನೊಳಗೊಂಡು ಸಾಗಬೇಕು. ಆಗ ಜಾತ್ಯತೀತ ರಾಷ್ಟ್ರ ಎಂಬ ಪರಿಕಲ್ಪನೆ‌ಗೆ ಅರ್ಥ ಬರುತ್ತದೆ ಎಂಬುದು ಸತ್ಯ. ಆದರೆ ಕೇವಲ ಹಿಂದೂಗಳು ಮಾತ್ರವೇ ಜಾತ್ಯಾತೀತ‌ರಾಗಿರಬೇಕು. ಮುಸಲ್ಮಾನ‌ರಲ್ಲಿ ಹಲವರು ಉಗ್ರರಿಗೆ ಬೆಂಬಲ ನೀಡುವುದು, ಉಗ್ರಗಾಮಿ ಚಟುವಟಿಕೆ‌ಗಳಲ್ಲಿ ತೊಡಗಿಸಿಕೊಳ್ಳುವುದು, ಭಾರತವನ್ನು ಇಸ್ಲಾಮೀಕರಣ ಮಾಡಲು ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರ ಮೊದಲಾದ ಮತಾಂಧ ಕೃತ್ಯಕ್ಕೆ ತೊಡಗುವುದು, ಅದಕ್ಕೆ ಕುಮ್ಮಕ್ಕು ನೀಡುವುದು ಮಾಡಿದಾಗ, ಹಿಂದೂಗಳು ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ, ಈ ದೇಶಕ್ಕೆ, ಈ ದೇಶದ ಸನಾತನ ಧರ್ಮ‌ಕ್ಕೆ ಧಕ್ಕೆ, ತೊಂದರೆ ಆದಾಗಲೂ ಕೈಕಟ್ಟಿ ಕೂರಬೇಕು ಎನ್ನುವ ಇಸ್ಲಾಂ ಮೂಲಭೂತ‌ವಾದಿಗಳ ಮನಸ್ಥಿತಿಯನ್ನು ಒಪ್ಪಿಕೊಳ್ಳುವುದು ಸಾಧ್ಯವೇ?.

ಹಾಗಾದರೆ ಎಲ್ಲಾ ಮುಸಲ್ಮಾನ‌ರೂ ಉಗ್ರಗಾಮಿ‌ಗಳೇ, ಮತಾಂಧರೇ ಎನ್ನುವ ಪ್ರಶ್ನೆ ಮೂಡಬಹುದು. ಎಲ್ಲ ಮುಸಲ್ಮಾನ‌ರನ್ನೂ ಉಗ್ರರು ಎಂದು ಯಾವೊಬ್ಬ ಹಿಂದೂ ವ್ಯಕ್ತಿ‌ಯೂ ಹೇಳಿಲ್ಲ ಎನ್ನುವುದು ಎಷ್ಟು ಸತ್ಯವೋ, ಉಗ್ರರೆಲ್ಲರೂ ಮುಸಲ್ಮಾನರೇ ಎಂಬುದು ಸಹ ಅಷ್ಟೇ ಸತ್ಯ. ಹಿಂದೂಗಳಲ್ಲಿ ರಾಷ್ಟ್ರ ವಿರೋಧಿ ಮನಸ್ಥಿತಿ ಹೊಂದಿದವರಿದ್ದಾರೆ. ಆದರೆ ಈ ವರೆಗೆ ಸೆರೆಸಿಕ್ಕ, ಹತ್ಯೆಯಾದ ಉಗ್ರರಲ್ಲಿ ಯಾರೂ ಹಿಂದೂಗಳು ಇರಲಿಲ್ಲ, ಅವರೆಲ್ಲರೂ ಮುಸಲ್ಮಾನ‌ರೇ ಎಂಬ ಸತ್ಯ‌ವನ್ನು ಕೂಡಾ ನಾವು ತಿಳಿದುಕೊಳ್ಳಬೇಕು. ಇವರಿಂದಾಗಿ ಈ ದೇಶದ ಎಲ್ಲಾ ಸಜ್ಜನ ಮುಸಲ್ಮಾನರೂ ಅವಮಾನ ಪಡುವಂತಾಗಿದೆ. ದೇಶ ವಿರೋಧಿ ಕೃತ್ಯ ಎಸಗುವ ಮುಸಲ್ಮಾನ‌ರ ಕಾರಣಕ್ಕೆ ಎಲ್ಲಾ ಮುಸಲ್ಮಾನ‌ರ ಮೇಲೆಯೂ ಸಂದೇಹ ಪಡುವಂತಾಗಿದೆ ಎನ್ನುವುದು ಸತ್ಯ.

ಹಾಗೆಯೇ, ಮುಸಲ್ಮಾನ‌ರಲ್ಲಿಯೂ ಹಲವು ರಾಷ್ಟ್ರೀಯ ಹಿಂದುತ್ವದ ಮನಸ್ಥಿತಿ ಉಳ್ಳವರಿದ್ದಾರೆ. ತಮ್ಮ ಧರ್ಮದ‌ಲ್ಲಿದ್ದುಕೊಂಡು ಈ ದೇಶದ ವಿರುದ್ಧ ಪಿತೂರಿ ನಡೆಸುವವರ ವಿರುದ್ಧ, ಈ ದೇಶದ ಸುರಕ್ಷತೆಗೆ ಧಕ್ಕೆ ತರುವವರ ವಿರುದ್ಧ ಸಜ್ಜನ ಕೆಲ ಮುಸ್ಲಿಮರ ಧ್ವನಿಯೂ ಇದೆ. ಆದರೆ ಅವರಲ್ಲಿ‌ರುವ ಹೆಚ್ಚಿನ ಸಂಖ್ಯೆ‌ಯ ಸಮಾಜಕ್ಕೆ ಮಾರಕವಾಗುವಮನಸ್ಥಿತಿ ಹೊಂದಿರುವವರ ನಡುವೆ, ಉತ್ತಮ‌ರು ಮೂಲೆಗುಂಪಾಗಿದ್ದಾರೆ. ಕಾಣದಾಗಿದ್ದಾರೆ.

ಹಿಂದೂಗಳ ಹೋರಾಟ ಇಸ್ಲಾಂ ಮೂಲಭೂತ‌ವಾಲಿ, ಉಗ್ರಗಾಮಿ ಮನಸ್ಥಿತಿ ಹೊಂದಿರುವ ಜಿಹಾದಿಗಳ ಮೇಲೆ ಎಂಬುದನ್ನು ಸಜ್ಜನ ಮುಸಲ್ಮಾನ‌ರು ಅರಿಯಬೇಕು. ಹಾಗೆಯೇ ಇಸ್ಲಾಂ ಧರ್ಮಧಲ್ಲೇ ಇರುವ ಮತಾಂಧರಿಗೆ ಬುದ್ಧಿ ಹೇಳಿ, ‘ಸತ್ತ ಪ್ರಜೆಗಳಾದ’ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕು. ಹಾಗಾದಲ್ಲಿ ಮಾತ್ರ ಎಲ್ಲಾ ಧರ್ಮದ ಜನರನ್ನೊಳಗೊಂಢ ಭಾರತ ಅಭಿವೃದ್ಧಿ ಆಗಬಹುದು. ಇಲ್ಲವಾದರೆ ಹಿಂದೂಗಳಿಂದ ಮುಂದೆಯೂ ಹೀಗೆಯೇ ದೆಶದ ಆಂತರಿಕ ಸಮಸ್ಯೆ‌ಯನ್ನು. ಬಗೆಹರಿಸಿ, ಮಾದರಿ ರಾಷ್ಟ್ರವಾಗಿ ಜಗತ್ತಿಗೆ ತೆರೆದುಕೊಳ್ಳಬಹುದು.

ಈ ದೇಶದ ಮುಸಲ್ಮಾನ‌ರೇ ಇನ್ನಾದರೂ ಬದಲಾಗಿ.

Tags

Related Articles

Close