ಪ್ರಚಲಿತರಾಜ್ಯ

ಬಿಗ್ ಬ್ರೇಕಿಂಗ್: ಗೂಂಡಾಗಿರಿ ನಂ 3.. ನಾರಾಯಣ ಸ್ವಾಮಿ , ನಲಪಾಡ್ ನಂತರ ಕೆ ಜೆ ಜಾರ್ಜ್ ಸಹಚರರ ಗೂಂಡಾಗಿರಿ ಬಯಲು..!!

ರಾಜ್ಯದಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸುತ್ತಿದ್ದವರೆಲ್ಲರೂ ಈಗ ನಾಪತ್ತೆಯಾಗಿದ್ದಾರೆ.ಯಾಕೆಂದರೆ ರಾಜ್ಯದ ಶಾಂತಿ ಕಾಪಾಡಬೇಕಿದ್ದ ಸರಕಾರವೇ ಇಂದು ಕರ್ನಾಟಕದಲ್ಲಿ ಗೂಂಡಾಗಿರಿ ನಡೆಸುತ್ತಿದೆ ಎಂದರೆ ಇದಕ್ಕೆಲ್ಲ ಕಡಿವಾಣ ಹಾಕುವವರಾರು ಎಂಬ ಪ್ರಶ್ನೆ ರಾಜ್ಯದ ಜನತೆಯ ಮುಂದಿದೆ. ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ದಿನದಿಂದಲೇ ರಾಜ್ಯದಲ್ಲಿ ಶಾಂತಿ ಎಂಬೂದು ಮರಿಚಿಕೆಯಾಗಿದೆ. ದಿನೇ ದಿನೇ ಆರ್ಥಿಕ ರಾಜ್ಯದಲ್ಲಿ ಕಾಂಗ್ರೆಸ್ ನ ಗೂಂಡಾಗಿರಿ ಹೆಚ್ಚುತ್ತಿದ್ದು ಕರ್ನಾಟಕದಲ್ಲಿ ಸಾಮಾನ್ಯ ಜನರಿಗೆ ಜೀವಿಸಲು ಕಷ್ಟವಾಗುವಂತೆ ಮಾಡಿದ್ದಾರೆ ಈ ಕಾಂಗ್ರೇಸಿಗರು..!

ಎರಡು ದಿನಗಳ ಹಿಂದೆ ಬೆಂಗಳೂರಿನ ಯುಬಿ ಸಿಟಿಯಲ್ಲಿ ಇರುವ ರೆಸ್ಟೋರೆಂಟ್ ಒಂದರಲ್ಲಿ ಅಮಾಯಕ ಯುವಕನ ಮೇಲೆ ಹಲ್ಲೆ ನಡೆಸಿದ್ದ ಕಾಂಗ್ರೆಸ್ ಶಾಸಕನ ಪುತ್ರ ಮಹಮ್ಮದ್ ನಲಪಾಡ್ ಇದೀಗ ಪೋಲಿಸ್ ಕಸ್ಟಡಿಗಯಲ್ಲಿದ್ದಾನೆ.ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ನಲಪಾಡ್ ತನ್ನ ತಂದೆಯ ಅಧಿಕಾರದ ಬಲದಿಂದ ಏನು ಬೇಕಾದರೂ ಮಾಡಬಹುದು ಎಂಬ ಅಹಂನಿಂದಲೇ ಈ ರೀತಿ ಮಾಡಿಕೊಂಡಿದ್ದ. ಘಟನೆ ನಡೆದು ಎರಡು ದಿನಗಳ ಕಾಲ ತಲೆಮರೆಸಿಕೊಂಡಿದ್ದ ನಲಪಾಡ್ ನಿನ್ನೆ ಪೋಲೀಸರಿಗೆ ಶರಣಾಗಿದ್ದ.

ಆದರೆ ಇದು ಕೇವಲ ನಾಟಕೀಯ ಬೆಳವಣಿಗೆಯಾಗಿತ್ತು. ಯಾಕೆಂದರೆ ತಂದೆಯ ಅಧಿಕಾರವನ್ನು ಬಳಸಿಕೊಂಡು ಠಾಣೆಯಲ್ಲೂ ರಾಜಮರ್ಯಾದೆ ಪಡೆಯುತ್ತಿರುವ ನಲಪಾಡ್ ನಂತಹ ಅಪರಾಧಿಗಳಿಗೆ ಈ ಕಾಂಗ್ರೆಸ್ ಸಹಕಾರ ನೀಡುತ್ತಿದೆ ಎಂದರೆ ಕಾನೂನು ಕಾಪಾಡಬೇಕಾದವರು ಯಾರು ಎಂಬ ಪ್ರಶ್ನೆ ರಾಜ್ಯದ ಜನತೆಯಲ್ಲಿ ಮೂಡುತ್ತದೆ.

ಕಾಂಗ್ರೆಸ್ ನಾಯಕರೇ ರಾಜ್ಯದಲ್ಲಿ ಗೂಂಡಾಗಿರಿ ನಡೆಸಿ ಸರಕಾರಿ ಅಧಿಕಾರಗಳಿಗೆ ಧಮ್ಕಿ ಹಾಕುತ್ತಿರುವ ಕೆಲಸವೂ ಕರ್ನಾಟಕದಲ್ಲಿ ನಡೆಯುತ್ತಿದೆ. ಬೆಂಗಳೂರಿನ ಬಿಬಿಎಂಪಿ ಕಛೇರಿಗೆ ನುಗ್ಗಿದ ಕೆ ಆರ್ ಪುರಂ ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಸ್ವಾಮಿ ಕಛೇರಿಯಲ್ಲಿ ಪೆಟ್ರೋಲ್ ಸುರಿದು ದಾಂಧಲೆ ನಡೆಸಿದ್ದರು. ನಾರಾಯಣ ಸ್ವಾಮಿ ಕೆ ಆರ್ ಪುರಂ ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರೂ ಆಗಿರುವಂತಹ ಶಾಸಕ ಬೈರತಿ ಬಸವರಾಜ್ ರವರ ಶಿಷ್ಯ ಎಂಬೂದು ಬಯಲಾಗಿದೆ.

ಸಿದ್ದರಾಮಯ್ಯನವರ ಆಪ್ತರೇ ಈ ರೀತಿಯ ದುಷ್ಕೃತ್ಯಗಳನ್ನು ಎಸಗಿದ್ದು, ಕರ್ನಾಟಕದಲ್ಲಿ ಗೂಂಡಾ ಸರ್ಕಾರ್ ಆಡಳಿತ ನಡೆಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ‌ಕಛೇರಿಯಲ್ಲಿರುವ ದಾಖಲೆಗಳಿಗೆ ಪೆಟ್ರೋಲ್ ಸುರಿದ ನಾರಾಯಣ ಸ್ವಾಮಿ, ಇಲ್ಲಿರುವ ದಾಖಲೆಗಳ ಜೊತೆಗೆ ನಿಮ್ಮನ್ನೂ ಸುಟ್ಟು ಹಾಕುತ್ತೇನೆ ಎಂದು ಕಛೇರಿಯಲ್ಲಿದ್ದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ.

ಕೆಲ ದಿನಗಳ ಹಿಂದೆ ತನ್ನ ಜಮೀನಿನ ಬಡಾವಣೆಗೆ ಎನ್ ಆರ್ ಐ ಜಮೀನು ಖಾತೆ ಮಾಡಿಕೊಡುವಂತೆ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಯ ಬಳಿ ಹೇಳಿದ್ದರು. ಆದರೆ ಈ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದರಿಂದ ಖಾತೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದ್ದರು. ಇದರಿಂದ ಸಿಟ್ಟುಗೊಂಡ ನಾರಾಯಣ ಸ್ವಾಮಿ ಕಛೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಿದೆ. ರಾಜಕೀಯ ಲಾಭ ಪಡೆಯುತ್ತಿರುವ ಕಾಂಗ್ರೆಸ್ ಕರ್ನಾಟಕವನ್ನು ಜಂಗಲ್ ರಾಜ್ ಮಾಡಲು ಹೊರಟಿದ್ದಾರೆ.

ಇದೇ ರೀತಿ ಕಾಂಗ್ರೆಸ್ ಸಚಿವ ಕೆ ಜೆ ಜಾರ್ಜ್ ಕ್ಷೇತ್ರದಲ್ಲೂ ಕಾಂಗ್ರೆಸ್ ನಾಯಕರಿಂದ ಗೂಂಡಾಗಿರಿ ನಡೆದ ಘಟನೆ ಬಹಿರಂಗಗೊಂಡಿದೆ. ಬೆಂಗಳೂರಿನ ಎಚ್ ಬಿ ಆರ್ ಬಡಾವಣೆಯ ಎ ಆರ್ ಒ ಮತ್ತು ರೆವೆನ್ಯೂ ಇನ್ಸ್‌ಪೆಕ್ಟರ್ ಮೇಲೆ ದಬ್ಬಾಳಿಕೆ ನಡೆಸಿದ ಕಾಂಗ್ರೆಸ್ ಮಹಿಳಾ ಕಾರ್ಪೋರೇಟರ್ ರಿಷದ್ ಅವರ ಪತಿ ಕಲೀಂಪಾಷ ತಮ್ಮ ಪತ್ನಿಯ ಅಧಿಕಾರ ಬಲದಿಂದ ದರ್ಪ ತೋರಿಸಿದ್ದಾರೆ. ಕೆ ಜೆ ಜಾರ್ಜ್ ಈ ಹಿಂದೆಯೂ ಸರಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಘಟನೆಯೂ ರಾಜ್ಯದಲ್ಲಿ ನಡೆದಿದೆ. ಇದೇ ರೀತಿ ಹಲವಾರು ದೂರು ಕೆ ಜೆ ಜಾರ್ಜ್ ಮೇಲೂ ಕೇಳಿಬಂದಿತ್ತು.

ಇದೀಗ ತಮ್ಮ ಕ್ಷೇತ್ರದಲ್ಲೇ ಕಾಂಗ್ರೆಸ್ ಮಹಿಳಾ ಕಾರ್ಪೋರೇಟರ್ ನ ಪತಿಯೂ ಗೂಂಡಾಗಿರಿ ನಡೆಸುತ್ತಿದ್ದು , ರಾಜ್ಯದ ಸ್ಥಿತಿಯೇ ಹದಗೆಟ್ಟಿದೆ. ಕೆ ಜೆ ಜಾರ್ಜ್ ಈ ಹಿಂದೆ ರೌಡಿಸಂ ನಡೆಸಿಯೇ ರಾಜಕೀಯ ಪ್ರವೇಶಿಸಿದವರು. ಐ ಟಿ ದಾಳಿ , ಸರಕಾರಿ ಅಧಿಕಾರಿಗಳ ಮೇಲೆ ಕಿರುಕುಳ ನೀಡಿದ ಬಗ್ಗೆ ಇಂತಹ ಅನೇಕ ಪ್ರಕರಣಗಳು ಜಾರ್ಜ್ ಮೇಲೆ ಇದ್ದರೂ ತಮ್ಮ ಅಧಿಕಾರವನ್ನು ಮಾತ್ರ ಬಿಡುತ್ತಿಲ್ಲ. ಯಾಕೆಂದರೆ ಸ್ವತಃ ಮುಖ್ಯಮಂತ್ರಿಗಳೇ ಜಾರ್ಜ್ ಪರ ಬ್ಯಾಟಿಂಗ್ ನಡೆಸಿದ್ದ ರಿಂದ ಜಾರ್ಜ್ ಗೆ ಮತ್ತಷ್ಟು ಬಲ ಬಂದಿತ್ತು. ಯಾವುದೇ ಅಧಿಕಾರಿಗಳನ್ನು ಸರಿಯಾಗಿ ಕರ್ತವ್ಯ ನಿರ್ವಹಿಸಲು ಬಿಡದ ಕಾಂಗ್ರೆಸ್ ನಾಯಕರು , ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ.

ಬೆಂಗಳೂರಿನ ರಾಜಕಾಲುವೆ ಬಳಿ ಇರುವ ಭೂಮಿಗೆ ಅಕ್ರಮವಾಗಿ ಖಾತೆ ಮಾಡಿಕೊಡುವಂತೆ ರಿಷದ್ ಅವರ ಪತಿ ಕಲೀಪಾಷ ಬೆದರಿಕೆಯೊಡ್ಡಿದ್ದು ಕರ್ತವ್ಯದಲ್ಲಿದ್ದ ಸರಕಾರಿ ಅಧಿಕಾರಿಯ ಮೇಲೆ ಹಲ್ಲೆ ಗೆ ಯತ್ನಿಸಿದ್ದಾರೆ ಎಂದು ದೂರು ನೀಡಲಾಗಿದೆ..!
ಕಾರ್ಪೋರೇಟರ್ , ಶಾಸಕರು , ಸಚಿವರು ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ನಾಯಕರು ರಾಜ್ಯದಲ್ಲಿ ಸಾಮಾನ್ಯ ಜನರ ಮೇಲೆ ದಬ್ಬಾಳಿಕೆಯ ಆಳ್ವಿಕೆ ನಡೆಸುತ್ತಿದ್ದು ಸಿದ್ದರಾಮಯ್ಯನವರ ಆಡಳಿತಕ್ಕೆ ಇಡೀ ರಾಜ್ಯವೇ ಬೇಸತ್ತು ಹೋಗಿದೆ..!

–ಅರ್ಜುನ್

 

Tags

Related Articles

Close