ಬೆಂಗಳೂರಿನ ಟಿಪ್ಪು ಸಮ್ಮರ್ ಪ್ಯಾಲೇಸ್ನ ಕೋಣೆಯೊಂದರಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತಹ ದೇವರ ವಿಗ್ರಹ ಒಂದು ಪತ್ತೆಯಾಗಿದ್ದು, ಇದೀಗ ಕುತೂಹಲಕ್ಕೆ ಎಡೆ ಮಾಡಿದೆ.
ಟಿಪ್ಪು ಸಮ್ಮರ್ ಪ್ಯಾಲೇಸ್ನಲ್ಲಿ ಪತ್ತೆಯಾದ ಈ ದೇವರ ಬಗ್ಗೆ ಪುರಾತತ್ವ ಇಲಾಖೆಯಾಗಲಿ, ಅಲ್ಲಿನ ಸಿಬ್ಬಂದಿಗಳಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಬೆಂಗಳೂರಿನ ಸಿಟಿ ಪ್ಯಾಲೆಸ್ ಸಮೀಪದಲ್ಲಿ ಇರುವ ಟಿಪ್ಪು ಪ್ಯಾಲೇಸ್ನಲ್ಲಿ ಈ ದೇವರ ಮೂರ್ತಿ ಪತ್ತೆಯಾಗಿದೆ. ಪುರಾತತ್ವ ಇಲಾಖೆ ಸಹ ಈ ದೇವರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಈ ಜಾಗ ಈ ಹಿಂದೆ ದೇವಾಲಯ ಇತ್ತೋ?, ಆ ಬಳಿಕ ಅಲ್ಲಿ ಅನಧಿಕೃತವಾಗಿ ಟಿಪ್ಪು ಅರಮನೆಯನ್ನು ಕಟ್ಟಿಸಿದ್ದನಾ ಎಂಬ ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ. ಕೋಟೆ ಆವರಣದೊಳಗೆ ದೇವಾಲಯವೇ ಇದ್ದಿರಬಹುದು ಎಂಬ ಸಂಶಯ ಈ ಮೂರ್ತಿ ದೊರೆತ ಬಳಿಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಇನ್ನು ಈ ದೇವರ ವಿಗ್ರಹ ಇರುವ ಕೋಣೆಗೆ ಬೀಗ ಜಡಿದು, ಸೀಲ್ ಮಾಡಲಾಗಿದ್ದು, ಈ ಬಗ್ಗೆ ಅಲ್ಲಿನ ಸಿಬ್ಬಂದಿ ಸಹ ಯಾವುದೇ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಈ ಟಿಪ್ಪು ಅರಮನೆಯಲ್ಲಿಯೂ ಮತಾಂಧ ಕೆಲಸಗಳು ನಡೆದಿವೆಯೇ ಎಂಬ ಅನುಮಾನ ಎಲ್ಲರದು. ಈ ಮೂರ್ತಿ ಅಲ್ಲಿಯೇ ಇದ್ದಿದ್ದಾಗಿರದಿದ್ದಲ್ಲಿ, ಈ ಮೂರ್ತಿ ಅಲ್ಲಿಗೆ ಹೇಗೆ ಬಂತು?, ಅದನ್ನಲ್ಲಿಗೆ ತಂದವರ್ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಪುರಾತತ್ವ ಇಲಾಖೆಯೇ ಉತ್ತರ ನೀಡಬೇಕಿದೆ.