ಅಂಕಣ

ಮುಸ್ಲಿಮ್ ರಾಷ್ಟ್ರದ ಈ ರಾಣಿ ಸನಾತನ ಧರ್ಮವನ್ನು ಸ್ವೀಕರಿಸಿದ್ದು ಯಾಕೆ? ವಿಶ್ವಗುರು ಭಾರತಕ್ಕೆ ಇನ್ನೊಂದೇ ಹೆಜ್ಜೆ!!

ಅದು ಇಂದು ನಿನ್ನೆಯ ವಿಷಯವಲ್ಲ.. ಆ ರಾಷ್ಟ್ರದಲ್ಲಿ ಅದಾಗಲೇ ಜಗತ್ತನ್ನಾಳಿದ ಸನಾತನ ಹಿಂದೂ ಧರ್ಮ ನೆಲೆಯೂರಿತ್ತು..ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದರೆ ಆ ದೇಶ ಇಂದಿಗೂ ಹಿಂದೂ ರಾಷ್ಟ್ರವೆ. ದೇವರ ಭಾವಚಿತ್ರಗಳನ್ನು ಇಡುವುದೇ ಕೋಮುವಾದ ಎಂದೆನಿಸಿಕೊಳ್ಳುವ ಪ್ರಸ್ತುತ ಭಾರತದದ ಸಮಯದಲ್ಲಿ ಆ ದೇಶ ವಿದ್ಯಾ ದೇಗುಲದ ಎದುರೇ ಸಮಸ್ತ ಕೋಟಿ ಹಿಂದೂಗಳು ಆರಾಧಿಸುವ ಶಾರದಾ ಮಾತೆಯ ಪ್ರತಿಮೆಯನ್ನೇ ನಿರ್ಮಿಸಿ ನಾವೂ ಹಿಂದೂಗಳೇ ಎಂದು ಸಾಬೀತು ಪಡಿಸುತ್ತಲೇ ಬಂದಿದ್ದಾರೆ.. ದೇವರ ಚಿತ್ರವನ್ನು ಸರಕಾರಿ ಕಚೇರಿಯಲ್ಲಿ ಹಾಕಿದರೆ ಎಲ್ಲಿ ಕೋಮುವಾದ ಎಂಬ ವಾಸನೆ ಅಂಟಿಬಿಡುತ್ತದೋ ಎಂಬ ಭಯದಲ್ಲಿ ದೇಶದ ಜಾತ್ಯಾತೀತ ನಾಯಕರು ತಾನು ಹುಟ್ಟಿದ ಧರ್ಮವನ್ನೇ ಮರೆತು ಬಿಡುತ್ತಾರೆ.

ಆದರೆ ಆ ರಾಷ್ಟ್ರ ರಾಮ ಭಕ್ತ ಹನುಮನನ್ನೇ ತನ್ನ ದೇಶದ ರಾಷ್ಟ್ರ ಲಾಂಛನನ್ನಾಗಿ ಮಾಡಿದ್ದನ್ನು ಮರೆಯುವಂತಿಲ್ಲ.. ಅಂದ ಹಾಗೆ ಆ ರಾಷ್ಟ್ರ ಮತ್ಯಾವುದೂ ಅಲ್ಲ ಮುಸಲ್ಮಾನರ ಆಕ್ರಮಣಕ್ಕೊಳಗಾಗಿ ಇಸ್ಲಾಮ್ ಧರ್ಮವನ್ನು ಪ್ರತಿಷ್ಠಾಪಿಸಿ ಮತ್ತೆ ಹಿಂದೂ ಧರ್ಮದೆಡೆಗೆ ಮುಖ ಮಾಡಿರುವ ಆ ರಾಷ್ಟ್ರವೇ ಇಂಡೊನೇಷಿಯಾ!!
ಇಂಡೋನೇಷ್ಯಾ ಅಂದರೇ ಮುಸ್ಲಿಮ್ ಬಹುಮತ ಹೊಂದಿರುವ ರಾಷ್ಟ್ರ ಎಂದೇ ಪ್ರಸಿದ್ಧಿ ಹೊಂದಿರುವಂತಹದ್ದು.. ಇಲ್ಲಿರುವ ಎಲ್ಲಾ ನಾಗರಿಕರು ಇಸ್ಲಾಂ ಧರ್ಮದ ಬಲವಾದ ಅನುಯಾಯಿಗಳು.. ಇಂತಹ ಒಂದು ದೇಶದಲ್ಲಿ ಬಬ್ಬ ಮುಸ್ಲಿಂ ರಾಣಿ ಒಂದು ಪ್ರಮುಖವಾದ ನಿರ್ಧಾರವನ್ನು ಕೈಗೊಳ್ಳುತ್ತಾಳೆ.. ಇಸ್ಲಾಂ ಧರ್ಮದಿಂದ ಸನಾತನ ಧರ್ಮಕ್ಕೆ ಅಂದರೆ ಹಿಂದೂ ಪರಿವರ್ತನೆಯಾಗಿದ್ದಾಳೆ ಎಂದರೆ ನಂಬುತ್ತೀರಾ? ಮುಸ್ಲಿಮರೆಂದರೆ ಹಿಂದೂಗಳ ಪಕ್ಕಾ ವಿರೋಧಿಗಳೆ ಎಂದೇ ಎಲ್ಲೆಡೆ ಪಸರಿರುವಂತಹದ್ದು.. ಆದರೆ ಈ ವಿಷಯ ಮಾತ್ರ ಎಲ್ಲರನ್ನೂ ಮೂಗಿಗೆ ಬೆರಳಿಡುವ ರೀತಿ ಮಾಡಿದೆ..!!

ಕಂಜೆಂಗ್ ರಾಡೆನ್ ಆಯು ಮಹೀಂದ್ರಾನಿ ಪರಮಾಶಿ ಎಂಬ ಹೆಸರಿನ ರಾಜಕುಮಾರಿ ಇಂಡೋನೇಷಿಯಾದ ಜಾವ ದ್ವೀಪದ ರಾಣಿ!! ಈಕೆಗೆ ಸಂಗೀತದ ಬಗ್ಗೆ ಅತೀ ಒಲವಂತೆ!..ಜಲೈ 17 2017ರಂದು ಎಲ್ಲಾ ಸನಾತನ ಧರ್ಮದ ವಿಧಿ ವಿಧಾನಗಳಂತೆ ಮುಸ್ಲಿಮ್ ಧರ್ಮದಿಂದ ಹಿಂದೂ ಧರ್ಮಕ್ಕೆ ಪರಿವರ್ತನೆಯಾಗುತ್ತಾಳೆ…. ಸನಾತನ ಧರ್ಮಕ್ಕೆ ಸೇರುವ ಮೊದಲು ದೇವಾಲಕ್ಕೆ ಹೋಗಿ ಅಲ್ಲಿ ಶುದ್ಧೀಕರಣವಾಗಿ ನಂತರ ಸನಾತನ ಧರ್ಮಕ್ಕೆ ಪರಿವರ್ತನೆ ಮಾಡಲಾಗುತ್ತದೆ…ಇದು ಸನಾತನ ಧರ್ಮದ ಮೊದಲ ಹೆಜ್ಜೆಯಾಗಿರುತ್ತದೆ.!!

ನಿಜವಾಗಿ ಗಮನಿಸುವುದಾದರೆ ಸನಾತನ ಧರ್ಮವು ಇಂಡೋನೇಷಿಯಾದಲ್ಲಿ ಮೊದಲಿನಿಂದಲೂ ಈ ಧರ್ಮ ನೆಲೆಯೂರಿತ್ತು…ಈ ರಾಣಿಯ ಪ್ರಕಾರ ಆಕೆ ಯಾವುದೇ ಕಾರಣಕ್ಕೂ ಈ ಧರ್ಮವನ್ನು ಅಳವಡಿಸಿಕೊಂಡಿರುವು ದಂತಹದ್ದಲ್ಲ(ಅಡಾಪ್ಟ್) ಬದಲಾಗಿ ಈ ಧರ್ಮವೂ ಅನಾದಿಕಾಲದಿಂದಲ್ಲೂ ಇಂಡೋನೇಷಿಯಾದಲ್ಲಿ ಈ ಸನಾತನ ಧರ್ಮವಾಗಿತ್ತು ನೆರೆಯೂರಿತ್ತು ಎಂಬುವುದನ್ನು ಈ ರಾಣಿ ಸ್ಪಷ್ಟಪಡಿಸುತ್ತಳೆ.. ಸಮಾಜ ನನ್ನನ್ನು ತುಚ್ಚವಾಗಿ ನೋಡಿಕೊಳ್ಳುವ ಅಗತ್ಯವಿಲ್ಲ.. ಈಗ ನಾನು ಹೊಸ ಧರ್ಮವನ್ನು ಅಳವಡಿಸಿಕೊಂಡಿದ್ದೇನೆ ನನ್ನ ನಿಜವಾದ ಧರ್ಮಕ್ಕೆ ನಾನು ಮರಳಿದ್ದೇನೆ ಎಂಬ ಉದ್ಗಾರದ ಮಾತನ್ನು ಆಡುತ್ತಾಳೆ…

ಮೊದಲು ನಾನು ಸನಾತನ ಧರ್ಮಕ್ಕೆ ಮತಾಂತರವಾಗುವುದಕ್ಕಿಂತ ಮುಂಚೆ ದೇವಸ್ಥಾನಗಳಿಗೆ ತೆರಳಿ ಪೂಜೆಮಾಡುತ್ತಿದ್ದಾಗ ಎಲ್ಲರೂ ನನ್ನನ್ನು ಬೇರೆ ದೃಷ್ಟಿಯಿಂದ ನೋಡುತ್ತಿದ್ದರು.. ಆದರೆ ಈಗ ಯಾರ ತೊಂದರೆಯಿಲ್ಲದೆ ಪೂಜಾ ಕಾರ್ಯಗಳಲ್ಲಿ ತೊಡಗಬಹುದು ಎಂಬ ಮಾತನ್ನು ಹೇಳುತ್ತಾರೆ.. ರಾಜಕುಮಾರಿಯ ಸುಧಿ ವಾಡಾನಿಯ ಆಚರಣೆ ಬಾಲಿಯಿಂದ ಬಂದ ಶ್ರೀ ಭಗವನ್ ಪುತ್ರ ನಾತಾ ವಾಂಗ್ಸಾ ಪೆಮಾಯುನ್ ಎಂಬ ಹಿಂದೂ ಪುರೋಹಿತರ ನೇತೃತ್ವದಲ್ಲಿ ಸನಾತನ ಧರ್ಮಕ್ಕೆ ಮತಾಂತರವಾಗುತ್ತಾಳೆ. ಸನಾತನ ಧರ್ಮಕ್ಕೆ ಮತಾಂತರವಾಗಲು ಸಹಕರಿಸಿದ ಕುಟುಂಬಕ್ಕೆ ಧನ್ಯವಾದವನ್ನು ಸಮಪಿಸುತ್ತಾಳೆ. ನಾರಾಯಣ ಮಂತ್ರ ಮತ್ತು ಗಾಯತ್ರಿ ಮಂತ್ರವನ್ನು ಪಠಿಸುವುದರ ಮೂಲಕ ವಿಧಿವತ್ತಾಗಿ ಹಿಂದೂ ಧರ್ಮದ ಪದ್ಧತಿಯನ್ನು ಆಕೆ ಸ್ವೀಕರಿಸುತ್ತಾಳೆ.. ಈಕೆ ಜುಲೈ 17, 2017 ರಂದು ಅನುಸರಿಸಿದ್ದರೂ ಈ ಬಗ್ಗೆ ಅಧಿಕೃತವಾದ ಪ್ರಕಟಣೆಯನ್ನು ಇತ್ತೀಚೆಗೆ ನೀಡಲಾಯಿತು.

 

ಯಾವಾಗ ದೇವಾಲಯಕ್ಕೆ ತೆರಳುತ್ತಾಳೋ ಆ ಸಮಯದಲ್ಲಿ ಅವಳ ಮನಸ್ಸು ಶಾಂತಿಯತ್ತು ತೆರಳುತ್ತಿದ್ದು ಇದರಿಂದಾಗಿ ಸನಾತನ ಧರ್ಮ ಅಥವಾ ಹಿಂದು ಧರ್ಮ ನಿಜವಾಗಿಯೂ ಒಂದು ಶಾಂತಿ ಧರ್ಮ ಎಂದು ಈ ಧರ್ಮಕ್ಕೆ ಪರಿವರ್ತನೆಯಾಗಲು ಮನ ಬಯಸುತ್ತಿತ್ತಂತೆ.. ಆದ್ದರಿಂದ ಸನಾತನ ಧರ್ಮವೆಂದರೇ ಅದು ನಿಜವಾಗಿ ಶಾಂತಿ ಎಂದರ್ಧ..ಹಿಂದೂ ಧರ್ಮ ಯಾವ ಕಾರ್ಯಕ್ರಮವನ್ನು ಅಳವಡಿಸಲಿ ಅಲ್ಲಿ ಶಾಂತಿ ನೆಮ್ಮದಿ ದೊರೆಯುತ್ತಿತ್ತು ಅಲ್ಲಿಂದ ನನಗೆ ಸನಾತನ ಧರ್ಮಕ್ಕೆ ಪರಿವರ್ತನೆಯಾಗ ಬೇಕು ಎನ್ನುವ ಆಸೆ ಹೆಚ್ಚಾಯಿತು ಎಂದು ಹೇಳುತ್ತಾರೆ..

ಈ ಸುದ್ದಿ ತಿಳಿದ ನಂತರ ಭಾರತದ ಬುದ್ಧಿ ಜೀವಿಗಳಿಗೆ ನಿಜವಾಗಲೂ ಆಶ್ಚರ್ಯಕರ ಸಂಗತಿಯಾಗಿರಬಹುದು ಯಾಕೆಂದರೆ.. ಇಂಡೋನೇಷ್ಯಾ ದೇಶವು ಪಕ್ಕಾ ಮುಸಲ್ಮಾನ ದೇಶ… ಇಲ್ಲಿ ತಮ್ಮ ಧರ್ಮವನ್ನು ಬಿಟ್ಟು ಬೇರೆ ಯಾವ ಧರ್ಮಕ್ಕೂ ಇಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವವರಲ್ಲ..ಹೀಗಿರುವಾಗ ಅವಳು ಯಾಕೆ ಈ ಧರ್ಮಕ್ಕೆ ಪರಿವರ್ತನೆಯಾಗಿರಬಹುದು ಎಂದು ಯೋಚಿಸುತ್ತಿರಬಹುದು..ಅಂತಹ ದೇಶದ ರಾಣಿಯೊಬ್ಬಳು ಒಂದು ಉದಾತ್ತ ಬದಲಾವಣೆಯನ್ನು ಮಾಡಿ ಕೊಂಡಿದ್ದಾರೆ..ಇಂಡೋನೆಷಿಯಾದಲ್ಲಿ ಸನಾತನ ಧರ್ಮವು ಇದೊಂದು ಮೂಲ ಧರ್ಮವಾಗಿದೆ..!! ಈ ರಾಜ ಕುಮಾರಿ ಹಿಂದೂ ಧರ್ಮಕ್ಕೆ ಮತಾಂತರವಾಗುವುದಕ್ಕಿಂತ ಮುಂಚೆಯೇ ಇಂಡೋನೇಷಿಯಾದ ಸುಪ್ರಿಂ ಕೋರ್ಟ್‍ನ ನ್ಯಾಯಾಧೀಶರು ಕೂಡಾ ಹಿಂದೂ ಧರ್ಮಕ್ಕೆ ಪರಿವರ್ತನೆ ಗೊಂಡಿದ್ದರು..

ಭಾರತದಲ್ಲಿ ಸೆಕ್ಯುಲರಿಸಂ ಅಂದ್ರೆ ಹಿಂದೂ ಧರ್ಮವನ್ನು ಅವಮಾನಿಸುವುದು. ಅನ್ಯಧರ್ಮೀಯರು ತಪ್ಪು ಮಾಡಿದರೆ ಅದು ತಪ್ಪೇ ಅಲ್ಲ ಎನ್ನುವುದು. ದೇವಸ್ಥಾನದ ಶೇಕಡಾ ಪಾಲು ಹಣವನ್ನು ಅನ್ಯಧರ್ಮಿಯರ ಮಸೀದಿ,ಚರ್ಚಗಳಿಗೆ ಬಳಸುವುದೇ ಸೆಕ್ಯಲರಿಸಂ ಅಂತ ಭಾರತದ ಸೆಕ್ಯಲರಿಸಂನ ಸೋ ಕಾಲ್ಡ್ ಸೆಕ್ಯಲರ್ ಗಳು ಬೊಗಳುತ್ತವೆ. ಆದರೆ ಇಂಡೋನೇಷ್ಯಾದಲ್ಲಿ ಸರ್ಕಾರ ಪ್ರತಿ ಧಾರ್ಮಿಕ ದೇವಸ್ಥಾನ , ಮಸೀದಿ, ಚರ್ಚಗಳಿಗೆ ಸಮನಾದ ಹಣವನ್ನು ಕೊಡುತ್ತದೆ. ಇದೇ ಅಲ್ವಾ ನಿಜವಾದ ಸೆಕ್ಯುಲರಿಸಂ ರಾಷ್ಟ್ರ. ಭಾರತ ಯಾವಾಗ ಕಲಿಯುತ್ತೋ ಇದೆಲ್ಲವನ್ನು ಎಂದು ಅರ್ಥವಾಗುತ್ತಿಲ್ಲ…

ಇಂಡೋನೇಷ್ಯಾ ಭಾರತದ ಹಿಂದೂ ಗ್ರಂಥಗಳಿಂದ ಅನೇಕ ವಿಚಾರಗಳನ್ನು ಅಳವಡಿಸಿಕೊಂಡಿದೆ. ಆದರೆ ಭಾರತ ಅದ್ಯಾವುದನ್ನು ಅಳವಡಿಸಿಕೊಂಡಿಲ್ಲ ಯಾಕಂದ್ರೆ ಅಳವಡಿಸಿದರೆ ಇಲ್ಲಿನ ಗಂಜಿಗಿರಾಕಿಗಳು ಬೊಗಳುತ್ತವೆ. ಭಗವಾನ್ ಶ್ರೀಕೃಷ್ಣನ ಆರಾಧಕರು ಇಂಡೋನೇಷ್ಯಾದ ಬಾಲಿಯವರು. ಎಲ್ಲಾ ಧರ್ಮ ಹೇಳುವುದು ಸತ್ಯದ ಬಗ್ಗೆ ,ಸತ್ಯದ ಕಡೆಗೆ ಕೊಂಡೊಯ್ಯುತ್ತದೆ ಅದಕ್ಕೆ ಹಿಂದೂ ಧರ್ಮದ ಗ್ರಂಥಗಳು ಎಲ್ಲಾ ಧರ್ಮದ ಗುರುವಿದ್ದಂತೆ ಅಂತ ಇಂಡೋನೇಷ್ಯಾದವರು ಪಾಲಿಸುತ್ತಾರೆ.

ಜಗತ್ತಿನಲ್ಲಿ ಅತೀ ಹೆಚ್ಚು ಅಕ್ಕಿಯನ್ನು ಬೆಳೆಯುವವರು ಅಂತ ಮಾತು ಬಂದರೆ ಅದರಲ್ಲಿ ಇಂಡೋನೇಷ್ಯಾದ ಕಡೆ ಇಡೀ ಜಗತ್ತೇ ನೋಡುತ್ತದೆ. ಇಂಡೋನೇಷ್ಯಾದ ಜನರು ಮಾತೃಭೂಮಿಯ ಕೃಪೆಯಿಂದ ಇದೆಲ್ಲಾ ಬೆಳೆಯುತ್ತೇವೆ ಅಂತ ಹೇಳ್ತಾರೆ ಕೃತಜ್ಞಾಪೂರಕವಾಗಿ ಮಾತೃಭೂಮಿಯ(ದೇವತೆ ಲಕ್ಷ್ಮಿಯ) ದೇವಸ್ಥಾಗಳನ್ನು ಕಟ್ಟಿಸಿದ್ದಾರೆ. ಅಲ್ಲಿಯ ಮುಸಲ್ಮಾನರು ಆ ದೇವತೆಗೆ ಕೃತಜ್ಞತೆಯಿಂದಿದ್ದಾರೆ. ಅವರು ಅಕ್ಕಿ ಬೆಳೆಯುವ ಯೋಜನೆ,ನೀರು ಮತ್ತು ಕೃಷಿಯ ಸುಧಾರಣೆ ನೋಡಿ ಹಾರ್ವರ್ಡ್,ಆಕ್ಸಫರ್ಡ್ ಯುನಿವರ್ಸಿಟಿಯ ಕೃಷಿಯ ವಿಭಾಗ ಬೆರಗಾಗಿದೆ. ಈ ಯೋಜನೆಗಳನ್ನು ಅವರು 9ನೇ ಶತಮಾನದಿಂದಲೇ ಅಳವಡಿಸಿಕೊಂಡಿದ್ದಾರೆ.

ಅವರು ಹೇಳ್ತಾರೆ ಇದೆಲ್ಲಾ ಭಾರತೀಯ ಋಷಿಮುನಿಗಳ ಕೊಡುಗೆಯಂತೆ. ಭಾರತದಲ್ಲಿ ಮಾತ್ರ ಋಷಿಮುನಿಗಳು ನೆನಪೇ ಇಲ್ಲ. ಹಿಂದೂ ಧರ್ಮದ ಪ್ರತಿಯೊಂದು ಹಬ್ಬವನ್ನು ಇಂಡೋನೇಷ್ಯಾದ ಜನ ವಿಶೇಷವಾಗಿ ಆಚರಿಸುತ್ತಾರೆ. ದೀಪಾವಳಿ,ರಾಮನವಮಿ ಹಬ್ಬಗಳಲ್ಲಿ ರಾಮಾಯಣ ಪುಸ್ತಕವನ್ನು ಮೆರವಣಿಗೆ ಮಾಡಿ,ಒಂದು ವಿಶೇಷ ಸ್ಥಳಕ್ಕೆ ಕೊಂಡೊಯ್ದು ರಾಮಾಯಣವನ್ನು ಪಠಿಸುತ್ತಾರೆ. ಇದನ್ನು ಅಲ್ಲಿಯ ಅನ್ಯಧರ್ಮಿಯರು ವಿರೋಧಿಸಲ್ಲ ಇದೇ ಅಲ್ಲವೇ ಧಾರ್ಮಿಕ ಸಾಮರಸ್ಯ..ಅಂದರೆ ಇಂಡೋನೇಷಿಯಾ ಮುಸ್ಲಿಮ್ ರಾಷ್ಟ್ರವಾಗಿದ್ದರು ಸಹ ಇಲ್ಲಿ ಇನ್ನೂ ಹಿಂದುತ್ವ ಇನ್ನೂ ಉಳಿದಿದ್ದು ಹಿಂದೂಗಳ ಎಲ್ಲಾ ಆಚರಣೆಯನ್ನು ಮಾಡುತ್ತಿದ್ದಾರೆ ಎಂದರೆ ನಿಜವಾಗಲೂ ಹೆಮ್ಮೆ ಪಡುವ ವಿಷಯ! ಮುಸ್ಲಿಮ್‍ರೇ ಬಹುಮತರಾಗಿರುವ ಈ ರಾಷ್ಟ್ರದಲ್ಲಿ ಹಿಂದೂ ಸಂಸ್ಕøತಿಯನ್ನು ದೂರ ಇಡದಿರುವುದು ನಿಜವಾಗಲೂ ಹೆಮ್ಮೆಯ ವಿಷಯ!.. ಯಾರೂ ಭಾರತದಲ್ಲಿ ಕೆಲ ನಕಲಿ ಹಿಂದುಗಳು ತಮ್ಮದೇ ದೇವರನ್ನು ಹಿಂದೂ ಧರ್ಮವನ್ನು ದೂಷಿಸುವವರಿಗೆ ನಿಜವಾಗಲು ಈ ರಾಣಿ ಮಾಡಿರುವುದು ಕಾರ್ಯ ಒಂದು ಉದಾಹರಣೆಯಾಗಬೇಕು..
ಇಸ್ಲಾಂ ಧರ್ಮ ಒಂದು ಶಾಂತಿಯುತ ಧರ್ಮ!! ಹಾಗೂ ಸನಾತನ ಧರ್ಮವನ್ನು ಟೀಕಿಸುವವರಿಗೆ ನಾಚಿಕೆಯಾಗಬೇಕು.

ಇಂಡೊನೇಷಿಯಾದ ರಾಜಕುಮಾರಿ ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ನಟರು, ರಾಜಕಾರಣಿಗಳು ಮತ್ತು ಪ್ರಸಿದ್ಧ ಕ್ರೀಡಾ ಪಟುಗಳು ಕೂಡಾ ಈ ಸನಾತನ ಧರ್ಮದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದವರಾಗಿದ್ದಾರೆ. ಅದಲ್ಲದೆ ಅಲ್ಲಿ ಇಸ್ಕಾನ್ ಎಂಬ ಹೆಸರಿನ ಸಂಸ್ಥೆ ಇದ್ದು ವಿದೇಶದಿಂದ ಬಂದು ಕೂಡಾ ಅಲ್ಲಿ ಆ ಸಂಸ್ಥೆಗೆ ಸೇರಿಕೊಂಡು ಸನಾತನ ಧರ್ಮದ ಅನುಯಾಯಿಗಳಾಗುತ್ತಾರೆ.

ಐಸಾಕ್ ನ್ಯೂಟನ್, ಆಲ್ಬರ್ಟ್ ಐನ್ಸ್ಟೀನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಲ್ ಸ್ಮಿತ್ ಅವರು ಹಿಂದೂ ಧರ್ಮದತ್ತ ಆಕರ್ಷಿತರಾಗಿರುವ ಕೆಲವೊಂದು ಹೆಸರುಗಳು ಮತ್ತು ಇವರುಗಳಿಗೆ ಸನಾತನ ಧರ್ಮದ ಬಗ್ಗೆ ತಿಳಿದುಕೊಲ್ಳಲು ಇನ್ನಷ್ಟು ತಿಳಿದುಕೊಳ್ಳಲು ಸಾಕಷ್ಟು ಕುತೂಹಲಕಾರಿ. ಸನಾತನ ಧರ್ಮದ ಎಲ್ಲಾ ಗಾಳಿಯಲ್ಲಿಯೂ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ ಮತ್ತು ಜನರು ಅದರತ್ತ ಆಕರ್ಷಿತರಾಗುತ್ತಾರೆ. ಇವುಗಳಲ್ಲದೆ ದಕ್ಷಿಣ ಆಫ್ರಿಕಾದ ಸುಪ್ರಸಿದ್ಧ ಆಟಗಾರ “ಜೋಂಟಿ ರೋಡ್ಸ್” ಅವರು ಆಹ್ಲಾದಕರವಾದ ಭಾವಸೂಚಕವನ್ನು ಸನಾತನ ಧರ್ಮ ಮತ್ತು ಅದರ ಆಚರಣೆಗಳಿಂದ ಪ್ರಭಾವಿತರಾಗಿದ್ದರು ಮತ್ತು ಅವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮಗಳಿಗೆ “ಇಂಡಿಯಾ” ಎಂದು ಹೆಸರಿಸಿದರು! ಇದಂತಹ ಮಾತುಗಳನ್ನು ಕೇಳಿದರೆಯೇ ನಿಜವಾಗಿ ತುಂಬಾ ಸಂತೋಷವಾಗುತ್ತದೆ.

ಸನಾತನ ಧರ್ಮದ ಮುಖ್ಯ ಗುರಿ ಜೀವಿಸಿ ಇತರರನ್ನೂ ಜೀವಿಸಲು ಬಿಡಿ . ಪ್ರಪಂಚದಾದ್ಯಂತ ಶಾಂತಿಯನ್ನು ಕಾಪಾಡಿಕೊಳ್ಳುವುದು ಮತ್ತು ಅದರ ಅನುಯಾಯಿಗಳು ಅದೇ ಚಿಂತನೆಯನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ಧೇಶ ಅದಲ್ಲದೆ ಮತ್ತು ದ್ವೇಷ ಮತ್ತು ದ್ವೇಷವನ್ನು ಬಿಟ್ಟುಕೊಡಲು ಬಯಸುತ್ತಾರೆ ಎಂದು ಇದು ನಂಬುತ್ತದೆ. ಈಗ ಯಾವುದೇ ರೀತಿಯ ಶಾಂತಿಯುತ ಧರ್ಮ ಅಸ್ತಿತ್ವದಲ್ಲಿದ್ದರೆ ಅದು ಕೇವಲ “ಸನಾತನ ಧರ್ಮ ಎಂದು ವಿಶ್ವದಾದ್ಯಂತದ ಜನರು ಒಪ್ಪಿಕೊಂಡಿದ್ದಾರೆ.

ಜಾವಾ ರಾಜಕುಮಾರಿಯು ತೆಗೆದುಕೊಂಡ ಈ ಹೆಜ್ಜೆಯು ಭಾರತದಲ್ಲಿ ಜಾತ್ಯತೀತವಾದಿಗಳನ್ನು ಸನಾತನ ಧರ್ಮ ಮತ್ತು ಅದರ ಪ್ರಾಮುಖ್ಯತೆಯ ಶುದ್ಧತೆಯನ್ನು ಅರ್ಥಮಾಡಿಕೊಳ್ಳಲು ಇದು ನಿಜವಾದ ಸಮಯ!
“ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್”
ಯಾವಾಗ ಧರ್ಮವನ್ನು ರಕ್ಷಿಸು ಪ್ರಸಂಗ ಬರುತ್ತದೋ ಅಂದು ನಾನು ಭೂಮಿಗೆ ಅವತಾರವೆತ್ತಿ ಬರುತ್ತೇನೆ ಎಂಬ ಮಾತನ್ನು ಭಗವತ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿ ಕೊಂಡಿದ್ದಾನೆ…ಸನಾತನ ಧರ್ಮವೆಂದರೆನೇ ಹಾಗಿ ಇದು ವಿಶ್ವದೆಲ್ಲೆಡೆ ಪಸರಿರುವಂತಹದ್ದು…ಈ ಧರ್ಮವನ್ನು ಗೌರವಿಸದಿರುವವರು ಯಾರೂ ಇಲ್ಲ…
ಹಿಂದೂಗಳೇ ಇನ್ನಾದರು ಎಚ್ಚೆತ್ತುಕೊಳ್ಳಿ ದೇಶದ್ರೋಹಿ, ಧರ್ಮದ್ರೋಹಿ ಇಂತಹಾ ನಾಲಾಯಕ್ ಬುದ್ಧಿಜೀವಿಗಳ ಮಾತಿಗೆ ಬೆಲೆಕೊಡದೆ, ಹಿಂದುತ್ವದ ರಕ್ಷಣೆಗೆ ಹೋರಾಡಿದ ಶಿವಾಜಿ ಮಹಾರಾಜ್, ಪೇಶ್ವೆ ಬಾಜೀರಾವ್ ಅವರನ್ನು ನಮ್ಮ ಸ್ಪೂರ್ಥಿಯಾಗಿ ಇಟ್ಟು ಕೊಂಡು ಧರ್ಮ ರಕ್ಷಣೆಗೆ ಪಣತೊಡೋಣ, ಸನಾತನ ಧರ್ಮ ಇನ್ನೂ ಸಾವಿರಾರು ವರ್ಷ ಹೀಗೇ ಬಾಳಲಿ.
-ಪವಿತ್ರ

Tags

Related Articles

Close