ದೇಶರಾಜ್ಯ

ಬಾಂಬ್ ಸ್ಫೋಟ ನಡೆಸಿದವರಿಗೆ ಬೆಂಬಲ ನೀಡಿದವರಿಂದ‌ ಸಾವರ್ಕರ್‌ಗೆ ಗೌರವ ಊಹಿಸಲು ಸಾಧ್ಯವೇ?

ಬೆಳಗಾವಿ ಸುವರ್ಣ ಸೌಧದದಲ್ಲಿ ಸಾವರ್ಕರ್ ಫೋಟೋ ಹಾಕಿದ್ದಕ್ಕೆ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ‌ರೂ ಸೇರಿದಂತೆ ಹಲವು ಕಾಂಗ್ರಿಸ್ಸಿಗರು ವಿರೋಧ ವ್ಯಕ್ತಪಡಿಸಿದ್ದು, ಈ ನಾಡಿನ ಮಹಾತ್ಮ‌ರ ಭಿತ್ತಿಚಿತ್ರ‌ಗಳನ್ನು ಹಿಡಿದು ಪ್ರದರ್ಶನ ನಡೆಸಿದ್ದರ ಬಗ್ಗೆ ನಾವು ಮಾಧ್ಯಮಗಳಲ್ಲಿ ನೋಡಿರಬಹುದು.

ಸುವರ್ಣ ಸೌಧದ ಈ ವಿಷಯಕ್ಕೆ ಸಂಬಂಧಿಸಿದಂತೆ ಉಗ್ರರನ್ನು ಸಹ ತಮ್ಮ ಸಹೋದರರ ಹಾಗೆ ಕಾಣುವ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದು, ನಾವು ಹುಟ್ಟುತ್ತಲೇ ಹಿಂದೂಗಳು. ನಾವು ಬಿಜೆಪಿ‌ಯವರ ಹಾಗೆ ಹಿಂದುತ್ವದ ನಾಟಕ ಆಡುವುದಿಲ್ಲ. ಕಾಂಗ್ರೆಸಿಗರಲ್ಲಿ ಹಿಂದೂ ಭಾವ, ಭಕ್ತಿ, ಆಚಾರ, ವಿಚಾರ ಅಡಗಿದೆ ಎಂದು ಹೇಳಿದ್ದಾರೆ. ಸಾವರ್ಕರ್ ಮತ್ತು ಕರ್ನಾಟಕ‌ಕ್ಕೆ ಯಾವುದೇ ಸಂಬಂಧ ಇಲ್ಲ. ನಮಗೆ ಕಾರ್ಯಕ್ರಮ‌ಕ್ಕೆ ಬಂದ ನಂತರ ಸಾವರ್ಕರ್ ಫೋಟೋ ಅಳವಡಿಸುವ ವಿಷಯ ತಿಳಿಯಿತು. ಇದು ವಿವಾದಾತ್ಮಕ ವಿಷಯವಾಗಿದ್ದು, ಈ ಬಗ್ಗೆ ನಾವು ಬೇರೆ ಚರ್ಚೆ ಮಾಡುತ್ತೇವೆ ಅಂತ ಹೇಳಿದ್ದಾರೆ.

ಅಂದ ಹಾಗೆ ಹುಟ್ಟಿಂದಲೇ ಹಿಂದೂ ಆಗಿರುವ ಡಿಕೆಶಿ ಅವರಿಗೆ, ಹಿಂದೂ ರಾಷ್ಟ್ರ, ಈ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಸಾವರ್ಕರ್ ಎಂಬ ವೀರನ ಬಗ್ಗೆ ಕಾಳಜಿ ಇಲ್ಲದೇ ಹೋದದ್ದು ದುರಂತ. ಹಿಂದೂ ಆಗಿ ಹಿಂದೂಗಳನ್ನೇ ಮೂಲೆಗುಂಪು ಮಾಡುವ ಹೀನಾಯ ಮನಸ್ಥಿತಿಯ ಡಿಕೆಶಿ, ಬಿಜೆಪಿ‌ಯವರಿಗೆ ಹಿಂದುತ್ವದ ಪಾಠ ಹೇಳುವುದಕ್ಕೆ ಹೊರಟಿರುವುದು ಹಾಸ್ಯಾಸ್ಪದ. ಒಂದು ಧರ್ಮದ ಓಲೈಕೆ ಮಾಡುವ ಸಲುವಾಗಿ ಹಿಂದೂ ಧರ್ಮ‌ವನ್ನು ಸಂಪೂರ್ಣ ಕಡೆಗಣಿಸಿರುವ ‘ಸೋ ಕಾಲ್ಡ್ ಹಿಂದೂ ಡಿಕೆಶಿ’ ಅವರಿಗೆ ಹಿಂದುತ್ವ ಅಂದರೆ ಏನು ಎಂಬುದನ್ನು ತಿಳಿಸಿಕೊಡಬೇಕಾದ ಅಗತ್ಯ ಇದೆ.

ಇದೇ ಡಿಕೆ ಶಿವಕುಮಾರ್ ಅವರು, ಮಂಗಳೂರು ಬಾಂಬ್ ಸ್ಪೋಟದ ಆರೋಪಿ ಉಗ್ರ ಶಾರಿಕ್‌ನ‌ನ್ನು ಉಗ್ರ ಎಂದು ಕರೆದಿದ್ದಕ್ಕೆ ನೊಂದುಕೊಂಡವರು. ಅದ್ಯಾವುದೇ ತನಿಖೆ ನಡೆಸದೆ ಹೇಗೆ ಭಯೋತ್ಪಾದಕ ಶಾರಿಕ್‌ನನ್ನು ಉಗ್ರ ಎಂದು ಕರೆದಿರಿ? ಇದರ ಹಿಂದೆ ಬಿಜೆಪಿ ರಾಜಕೀಯ ನಡೆಸುತ್ತಿದೆ ಎಂಬ ಹೇಳಿಕೆ ನೀಡಿದ ಡಿಕೆಶಿ, ಇಂದು ನಾನು ಹುಟ್ಟುತ್ತಲೇ ಹಿಂದೂ ಎಂದಿದ್ದಾರೆ ಎಂದರೆ, ಇದು ನಾಟಕ ಅಲ್ಲದೆ ಮತ್ತಿನ್ನೇನು.

ಸಾಲು ಸಾಲು ಹಿಂದೂಗಳ ಹತ್ಯೆಯಾದಾಗ ಮಾತನಾಡದ, ಕೊಲೆಗಡುಕ ಟಿಪ್ಪು‌ನನ್ನು ವೀರ ಎಂಬಂತೆ ಬಿಂಬಿಸಲು ಹೊರಟ ಪಕ್ಷದ ನಾಯಕ, ಇದೀಗ ನಾನು ಹುಟ್ಟುತ್ತಲೇ ಹಿಂದೂ ಎನ್ನುವ ಮೂಲಕ ಮತ್ತೊಂದು ನಾಟಕ ಆಡುತ್ತಿರುವುದು, ಅವರ ಓಟ್‌ಬ್ಯಾಂಕ್ ರಾಜಕಾರಣದ ಇನ್ನೊಂದು ಮುಖ ಎಂದು ಪುಟ್ಟ ಮಗುವಿಗೂ ತಿಳಿಯಬಹುದು.

ಡಿಕೆಶಿ ಅವರೇ, ಹುಟ್ಟುತ್ತಲೇ ಹಿಂದೂ ಆಗಿದ್ದರೂ, ಮನಸ್ಥಿತಿ ಜಿಹಾದಿಗಳದ್ದಾಗಿದ್ದರೆ ನಿಮ್ಮನ್ನು ಹಿಂದೂ ಎಂದು ಜನ ಒಪ್ಪಿಕೊಳ್ಳಲಾರರು. ನಿಮ್ಮ ಸರ್ಕಾರ ಇದ್ದಾಗ ಹಿಂದೂ ವಿರೋಧಿ ನೀತಿಗಳನ್ನು ತಂದು, ಹಿಂದೂಗಳಿಗೆ ನ್ಯಾಯ ಒದಗಿಸದ ನೀವು ಅದು ಹೇಗೆ ಹಿಂದೂ ಆಗಲು ಸಾಧ್ಯ. ಹಿಂದೂ ಆದರೆ ಸಾಲದು. ಹಿಂದುತ್ವ‌ವನ್ನು ಅಳವಡಿಸಿಕೊಳ್ಳುವುದನ್ನು ಸಹ ಕಲಿಯಿರಿ.

ಶಾರಿಕ್‌ನ‌ಂತಹ ಒಬ್ಬ ಉಗ್ರನನ್ನು ನೈಜ ಹಿಂದೂ ಎಂದಿಗೂ ಕ್ಷಮಿಸಲಾರ. ಹಿಂದೂ ಹಿಂದೂ ಎಂದು ಬೊಬ್ಬಿಡುವ ಮೊದಲು, ಹಿಂದೂಗಳಿಗೆ ನಿಮ್ಮಿಂದ ಏನಾದರೂ ಉಪಯೋಗ ಆಗಿದೆಯೇ ಎಂದು ಆವಲೋಕಿಸಿ. ನಿಮ್ಮ ಅವಧಿಯಲ್ಲಿ ಹಿಂದೂಗಳಿಗೆ ನ್ಯಾಯ ನೀಡಿದ್ದೀರಾ ಎಂದು ಆಲೋಚಿಸಿ.

ಕೊನೆಗೂ ಸಾರ್ವಜನಿಕ‌ರಲ್ಲಿ ನಿಮ್ಮ ಬಗ್ಗೆ ಉಳಿಯುವ ಪ್ರಶ್ನೆ ಒಂದೇ ‘ಉಗ್ರ ಸಹೋದರ ಹಿಂದೂ ಆಗಲು ಹೇಗೆ ಸಾಧ್ಯ’ ..

Tags

Related Articles

Close